ಗಡಿಭಾಗದಲ್ಲಿ ಭಾಷಾ ಸಾಮರಸ್ಯ ಇದೆ
Team Udayavani, Dec 2, 2019, 4:30 PM IST
ಬಂಗಾರಪೇಟೆ: ಕನ್ನಡ ನಾಡು, ಸಾಂಸ್ಕೃತಿಕ, ಸಾಹಿತ್ಯಿಕ, ವೈಜ್ಞಾನಿಕವಾಗಿತನ್ನದೇ ಆದ ವೈವಿಧ್ಯತೆ ಪಡೆಯುವ ಮೂಲಕ ಸಾಮರಸ್ಯದ ಬೀಡಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಎಂ.ಹನುಮಪ್ಪ ಹೇಳಿದರು.
ತಾಲೂಕಿನ ತಾಲೂಕಿನ ಮಾದಮಂಗಲ ಗ್ರಾಮದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ಸಾಮಾಜಿಕ,ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಹಲವುಭಾಷೆ, ಸಂಸ್ಕೃತಿಗಳು ಸಮ್ಮಿಳಿತ ಗೊಂಡಿದ್ದರೂ ಕನ್ನಡವು ತನ್ನ ಕಂಪನ್ನುಇಂದಿಗೂ ಉಳಿಸಿಕೊಂಡಿದೆ. ಕನ್ನಡನಾಡಿನ ಪ್ರತಿಯೊಬ್ಬ ಪ್ರಜೆಯೂ ಭಾಷೆಯನ್ನು ತಮ್ಮ ಉಸಿರು ಇರುವವರೆಗೆ ತಂದೆ, ತಾಯಿ, ಗುರುವಿನಂತೆ ಪ್ರೀತಿಸಿದ್ದಲ್ಲಿ ಇತರೆ ಭಾಷೆಗಳ ಪ್ರಭಾವದಿಂದಕನ್ನಡ ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಲ್ಲಿಯ ತನಕ ನಾವು ಕನ್ನಡವನ್ನುಬಳಸುತ್ತೇವೆಯೋ ಅಲ್ಲಿಯವರೆಗೆ ಅದುಜೀವಂತವಾಗಿ ಉಳಿಯಲು ಸಾಧ್ಯ. ಕರ್ನಾಟಕದ ಗತಕಾಲದ ಭವ್ಯ ಪರಂಪರೆಯ ಇತಿಹಾಸವನ್ನು ನಾಟಕ,ಕಥೆ, ಕಾದಂಬರಿಗಳ ಮೂಲಕ ವ್ಯಕ್ತಪಡಿಸಿ, ಜನರಲ್ಲಿ ಭಾಷಾಭಿಮಾನಮೂಡಿಸಬೇಕು ಎಂದು ನುಡಿದ ಅವರು, ಕನ್ನಡಿಗರು ಬೇರೆ ಭಾಷೆಗಳ ವ್ಯಾಮೋಹದಿಂದ ಹೊರಬಂದು ಭಾಷಾಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.
ಬಂಗಾರಪೇಟೆ ತಾಲೂಕು ರಾಜ್ಯದ ಗಡಿ ಭಾಗದಲ್ಲಿದ್ದರೂ ಭಾಷಾ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಕುಡಿಯುವ ನೀರಿಗೆ ಬರ ಎದುರಿಸುತ್ತಿದ್ದರೂ ಕನ್ನಡ ಭಾಷೆಗೆ ಈ ತಾಲೂಕಿನಲ್ಲಿಯಾವುದೇ ರೀತಿಯ ಬರವಿಲ್ಲದೆ ಭಾಷೆ ತನ್ನ ಜೀವಂತಿಕೆ ಉಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು ಎಂದರು. ಪುರಸಭೆ ಸದಸ್ಯ ಎಂ.ಎಂ.ಮೂರ್ತಿ, ಎಂ.ವಿ.ಮೋಹನ್, ರಂಜಿತ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್