ಉತ್ತನೂರು 407 ಪಡಿತರ ಚೀಟಿ ವರ್ಗಾವಣೆ
Team Udayavani, Aug 1, 2020, 10:22 AM IST
ಮುಳಬಾಗಿಲು: ತಾಲೂಕಿನ ಉತ್ತನೂರು ವಿದ್ಯಾಸಂಸ್ಥೆಯ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಸೇರಿದ 407 ಪಡಿತರ ಚೀಟಿಗಳನ್ನು ನಲ್ಲೂರು ತಿಮ್ಮರಾಯಪ್ಪ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಿ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು ಆದೇಶಿಸಿದ್ದಾರೆ.
ಶಿವನಾರಹಳ್ಳಿ, ನಾಗಿರೆಡ್ಡಿಹಳ್ಳಿ, ನಲ್ಲಾಂಡಹಳ್ಳಿ, ಪೊಂಬ್ರಹಳ್ಳಿ, ಮಜರ ರಾಮಾಪುರ ಗ್ರಾಮಗಳ ಪಡಿತರ ಚೀಟಿಗಳಿಗೆ ಆಗಸ್ಟ್ ತಿಂಗಳಿನಿಂದ ನಲ್ಲೂರು ತಿಮ್ಮರಾಯಪ್ಪನವರೇ ಆಹಾರ ಧಾನ್ಯ ವಿತರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಈ ಐದು ಗ್ರಾಮಗಳ ಪಡಿತರರು ಪ್ರತಿ ತಿಂಗಳು 5 ಕಿ.ಮೀ. ದೂರದ ಉತ್ತನೂರಿಗೆ ಹೋಗಿ ಪಡಿತರ ಧಾನ್ಯ ತರಲು ತೊಂದರೆ ಆಗಿತ್ತು. ಈ ಐದೂ ಗ್ರಾಮಗಳ ಪಡಿತರದಾರರಿಗೆ ಎಸ್ಎನ್ಎನ್ ವೃತ್ತದಲ್ಲಿಯೇ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ತಹಶೀಲ್ದಾರ್ಗೆ ಕೋರಿದ್ದರು. ಅದರಂತೆ ಆಹಾರ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಎಸ್ಎನ್ ಎನ್ ವೃತ್ತದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಆದೇಶಿಸಿದ್ದಾರೆ.
ಇತ್ತೀಚಿಗೆ ಎಸ್.ಎನ್.ಎನ್. ಕ್ರಾಸ್ನಲ್ಲಿರುವ ಸರ್ಕಾರಿ ಕಟ್ಟಡದಲ್ಲಿ 407 ಪಡಿತರ ಚೀಟಿಗಳಿಗೆ ಧಾನ್ಯ ವಿತರಿಸುವ ಕಾರ್ಯಕ್ಕೆ ಅಬಕಾರಿ ಸಚಿವ ಎಚ್. ನಾಗೇಶ್ ಚಾಲನೆ ನೀಡಿದ್ದರು. ಇದಕ್ಕೆ ಆ ಭಾಗದ ಕಾಂಗ್ರೆಸ್ ಮುಖಂಡ ಉತ್ತನೂರು ಶ್ರೀನಿವಾಸ್, ಅವರ ಪುತ್ರ ಜಿಪಂ ಸದಸ್ಯ ಅರವಿಂದ್ರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಬೇಸರಗೊಂಡ ಶ್ರೀನಿವಾಸ್, ಅರವಿಂದ್ ಮಾಧ್ಯಮಗಳ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ