ಕೋಲಾರದಲ್ಲಿ ನಗರ ಸಾರಿಗೆ ಮತ್ತೆ ಆರಂಭ

ಎರಡು ಮಾರ್ಗಗಳಲ್ಲಿ 200, 201 ಸಂಖ್ಯೆಯ ಹಸಿರು ಬಸ್‌ಗಳ ಸಂಚಾರ | ನಾಗರಿಕರ ಕನಸು ನನಸು

Team Udayavani, Jul 13, 2019, 12:21 PM IST

kolar-tdy-1..

ಕೋಲಾರ ನಗರದ ಮೆಕ್ಕೆವೃತ್ತದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವ 200 ಸಂಖ್ಯೆಯ ನಗರ ಸಾರಿಗೆ ಬಸ್‌

ಕೋಲಾರ: ಜಿಲ್ಲಾ ಕೇಂದ್ರದ ನಿವಾಸಿಗಳ ಬಹು ವರ್ಷಗಳ ಕನಸಾಗಿರುವ ನಗರ ಸಾರಿಗೆಯನ್ನು ಸಾರಿಗೆ ಸಂಸ್ಥೆಯು ಸದ್ದುಗದ್ದಲವಿಲ್ಲದೆ ಆರಂಭಿಸಿದೆ. ಹಿಂದೆ ಹಲವು ಬಾರಿ ನಗರ ಸಾರಿಗೆಯನ್ನು ಆರಂಭಿಸಿ, ಮತ್ತಷ್ಟೇ ವೇಗದಲ್ಲಿ ಸ್ಥಗಿತಗೊಳಿಸುತ್ತಿದ್ದ ಸಾರಿಗೆ ಸಂಸ್ಥೆಯು, ಇದೀಗ ಯಾವುದೇ ಪ್ರಚಾರ ಬಯಸದೆ, ಎರಡು ಬಸ್‌ಗಳನ್ನು ಓಡಿಸುತ್ತಿದೆ.

ನಗರ ಸಾರಿಗೆ ಇತಿಹಾಸ: ನಗರಕ್ಕೆ ಸಾರಿಗೆ ಸೌಲಭ್ಯ ಬೇಕು ಎಂಬುದು ನಾಗರಿಕರ ಎರಡು ದಶಕಗಳ ಕನಸು. ಆದರೆ, ನನಸು ಮಾಡಲು ಜನಪ್ರತಿನಿಧಿಗಳು ಹಾಗೂ ಸಾರಿಗೆ ಸಂಸ್ಥೆ ಪ್ರಾಮಾಣಿಕವಾಗಿ ಪ್ರಯತ್ನಿಸಲೇ ಇಲ್ಲ. ದಿವಂಗತ ಬೈರೇಗೌಡರು ಜಿಲ್ಲಾ ಮಂತ್ರಿಯಾಗಿದ್ದಾಗ ಒತ್ತಾಯದ ಮೇರೆಗೆ ಸಂಚಾರ ಆರಂಭಿಸಿದ್ದರು. ಆದರೆ, ಹೆಚ್ಚು ದಿನ ಬಸ್‌ ಸಂಚರಿಸಲೇ ಇಲ್ಲ. ಆನಂತರ ಮೂರು ನಾಲ್ಕು ಬಾರಿ ಅಧಿಕಾರಿ ವಲಯದಲ್ಲಿಯೇ ಪ್ರಯತ್ನಗಳಾಗಿದ್ದವು. ಆದರೆ, ಆದಾಯದ ಕೊರತೆ ನೆಪವೊಡ್ಡಿ ಸ್ಥಗಿತಗೊಳಿಸಲಾಗಿತ್ತು.

ಗ್ರಾಮಾಂತರ ಸೇವೆ: ಐದು ವರ್ಷಗಳ ಹಿಂದೆ ವರ್ತೂರು ಪ್ರಕಾಶ್‌ ಜಿಲ್ಲಾ ಮಂತ್ರಿಯಾಗಿದ್ದಾಗ ಸಾರಿಗೆ ಸಚಿವರಾಗಿದ್ದ ಆರ್‌.ಅಶೋಕ್‌ ಕೋಲಾರಕ್ಕೆ ಆಗಮಿಸಿದ್ದ ವೇಳೆ ನಗರ ಸಾರಿಗೆ ಸಂಚಾರಕ್ಕೆ ಚಾಲನೆ ನೀಡಿದ್ದರು. ಆದರೆ, ಇದು ಹೆಚ್ಚು ದಿನ ಸಂಚರಿಸಲಿಲ್ಲ. ನರ್ಮ್ ಬಸ್‌ಗಳ ಮೂಲಕ ನಗರ ಸಾರಿಗೆ ಬಸ್‌ ನಿಲ್ದಾಣವನ್ನೇ ಆರಂಭಿಸುವುದಾಗಿ ಹೇಳಿಕೊಂಡಿದ್ದ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಕನಿಷ್ಠ ಬಸ್‌ಗಳ ಸಂಚಾರವನ್ನೂ ಆರಂಭಿಸಲಿಲ್ಲ. ಇದ್ದ ನರ್ಮ್ ಯೋಜನೆಯ ಬಸ್‌ಗಳನ್ನು ಗ್ರಾಮಾಂತರ ಸೇವೆಗೆ ಬಳಸಿಕೊಳ್ಳಲಾಗಿತ್ತು.

ಎರಡು ಮಾರ್ಗ: ಮೂರು ತಿಂಗಳ ಹಿಂದೆ ಹಸಿರು ಬಣ್ಣದ 200 ಮತ್ತು 201 ಸಂಖ್ಯೆಯ ಎರಡು ಬಸ್‌ ಓಡಾಟ ನಡೆಸುತ್ತಿದ್ದು, ಬೆಳಗ್ಗೆ 8.30 ರಿಂದ ಸಂಜೆ 6.30 ರವರೆಗೆ ಬಸ್‌ ನಿಲ್ದಾಣದಿಂದ ನಗರದ ಎರಡು ಮಾರ್ಗಗಳಲ್ಲಿ ಸಂಚರಿಸುತ್ತಿದೆ. ಎರಡೂ ಬಸ್‌ಗಳು ತೆರಳಿದ್ದ ಮಾರ್ಗಗಳಲ್ಲೇ ವಾಪಸ್‌ ಬಸ್‌ ನಿಲ್ದಾಣಕ್ಕೆ ಬರುತ್ತಿದೆ. ಈ ಎರಡು ಬಸ್‌ಗಳಿಂದ ನಗರದಿಂದ ದೂರದಲ್ಲಿರುವ ಡಿ.ಸಿ. ಕಚೇರಿಗೆ ನಾಗರಿಕರು ಸುಲಭವಾಗಿ ತೆರಳಲು ಸಾಧ್ಯವಾಗುತ್ತಿದೆ.

ಟಿಕೆಟ್ ದರ ನಿಗದಿ: 7 ಮತ್ತು 10 ರೂ. ಟಿಕೆಟ್ ದರದಲ್ಲಿ ನಾಗರಿಕರು ಈ ಬಸ್‌ನಲ್ಲಿ ಸಂಚರಿಸಬ ಹುದಾಗಿದೆ. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣದಿಂದ ಜನರು ನೂರಾರು ರೂ. ವೆಚ್ಚ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದ್ದಾರೆ. ನಗರದ ವಿವಿಧ ಬಡಾವಣೆಗಳ ನಾಗರಿಕರು ದುಬಾರಿ ಬೆಲೆ ತೆತ್ತು ಆಟೋಗಳಲ್ಲಿ ಸಂಚರಿಸುವ ಅನಿವಾರ್ಯತೆ ಇದೆ.

ಮತ್ತೇನು ಮಾಡಬೇಕು?: ಈಗ ಆರಂಭಿಸಿರುವ ನಗರ ಸಾರಿಗೆ ಎರಡು ಮಾರ್ಗಗಳಲ್ಲಿ ಹಸಿರು ಬಣ್ಣದ ಬಸ್‌ಗಳಿಗೆ ಬದಲಾಗಿ ನಗರ ಸಾರಿಗೆಗೆ ಪ್ರತ್ಯೇಕ ಬಣ್ಣದಲ್ಲಿ ಬಸ್‌ಗಳನ್ನು ಸಂಚರಿಸಲು ಅವಕಾಶ ಕಲ್ಪಿಸಬೇಕಾಗುತ್ತದೆ. ಏಕೆಂದರೆ, ಈಗಾಗಲೇ ಹಸಿರು ಬಣ್ಣದಲ್ಲಿ ನರ್ಮ್ ಮತ್ತು ಗ್ರಾಮಾಂತರ ಸಾರಿಗೆ ಇನ್ನಿತರ ಬಸ್‌ಗಳು ಸಂಚರಿಸುತ್ತಿರುವುದರಿಂದ ನಗರ ಸಾರಿಗೆ ಬಸ್‌ಗಳನ್ನು ಸುಲಭವಾಗಿ ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ.

ಬಸ್‌ ನಿಲುಗಡೆ: ನಗರ ಸಾರಿಗೆಯ ಎರಡು ಬಸ್‌ಗಳು ನಿಲುಗಡೆ ನೀಡುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸಾರಿಗೆ ಸಂಸ್ಥೆಯಿಂದಲೇ ಮಾಹಿತಿ ಫ‌ಲಕಗಳನ್ನು ಅಳವಡಿಸಬೇಕು. ಈ ಮಾಹಿತಿ ಫ‌ಲಕಗಳಲ್ಲಿ ನಗರ ಸಾರಿಗೆ ಬಸ್‌ಗಳು ಯಾವ ಸಮಯದಲ್ಲಿ ಯಾವ ದಿಕ್ಕಿನಿಂದ ಆಗಮಿಸುತ್ತದೆ, ಯಾವ ದಿಕ್ಕಿನತ್ತ ತೆರಳುತ್ತದೆಯೆಂಬ ಮಾಹಿತಿ ವೇಳಾಪಟ್ಟಿಯನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ.

ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಗರ ಸಾರಿಗೆಯನ್ನು ಆರಂಭಿಸಿರುವುದರ ಜೊತೆಗೆ ಕನಿಷ್ಠ ನಿಲುಗಡೆ ಮತ್ತು ವೇಳಾಪಟ್ಟಿ ಪ್ರಕಟಿಸುವ ಕೆಲಸ ಮಾಡಿದರೆ, ನಗರದ ನಾಗರಿಕರು ಆಟೋ ಮತ್ತು ದುಬಾರಿ ದರದಲ್ಲಿ ಸಂಚರಿಸುವುದರ ಬದಲು ನಗರ ಸಾರಿಗೆ ಬಸ್‌ಗಳಿಗೆಗಾಗಿ ಸಂಬಂಧಪಟ್ಟ ನಿಲುಗಡೆಯಲ್ಲಿ ಕಾಯಲು ಅನುಕೂಲವಾಗುತ್ತದೆ. ನಗರ ಸಾರಿಗೆಯೂ ಜನಪ್ರಿಯಗೊಳ್ಳಲು ಸಾಧ್ಯವಾಗುತ್ತದೆ.

200, 201 ಸಂಖ್ಯೆಯ ಓಡಾಡುವ ಮಾರ್ಗ:

ಮೂರು ತಿಂಗಳ ಹಿಂದೆ ಹಸಿರು ಬಣ್ಣದ 200 ಮತ್ತು 201 ಸಂಖ್ಯೆಯ ಎರಡು ಬಸ್‌ ಓಡಾಟ ನಡೆಸುತ್ತಿದ್ದು, ಬೆಳಗ್ಗೆ 8.30 ರಿಂದ ಸಂಜೆ 6.30 ರವರೆಗೆ ಬಸ್‌ ನಿಲ್ದಾಣದಿಂದ ನಗರದ ಎರಡು ಮಾರ್ಗಗಳಲ್ಲಿ ಸಂಚರಿಸುತ್ತಿದೆ. ಬಸ್‌ ಸಂಖ್ಯೆ 200 ಬಸ್‌ ನಿಲ್ದಾಣ ಬಿಟ್ಟು ನಿಲ್ದಾಣದಿಂದ ಎಡ ಭಾಗದಲ್ಲಿ ಎಂ.ಬಿ. ರಸ್ತೆ, ಅಮ್ಮವಾರಿಪೇಟೆ ವೃತ್ತ, ಮೆಕ್ಕೆ ವೃತ್ತ, ಕೋರ್ಟ್‌ ಸರ್ಕಲ್, ಗಾಂಧಿನಗರ, ಡಿ.ಸಿ. ಕಚೇರಿಯವರೆಗೂ ತೆರಳುತ್ತದೆ. ಬಸ್‌ ಸಂಖ್ಯೆ 201 ರ ಬಸ್‌ ಬಸ್‌ ನಿಲ್ದಾಣ, ಗಡಿಯಾರಗೋಪುರ ವೃತ್ತ, ಡೂಂಲೈಟ್ ವೃತ್ತ, ಎಸ್‌ಎನ್‌ಆರ್‌ ಆಸ್ಪತ್ರೆ ವೃತ್ತ, ಬಂಗಾರಪೇಟೆ ಅಂಬೇಡ್ಕರ್‌ ಪ್ರತಿಮೆ ವೃತ್ತ, ಕಾಲೇಜು ವೃತ್ತ, ಹಳೇ ಬಸ್‌ ನಿಲ್ದಾಣ, ಮೆಕ್ಕೆ ವೃತ್ತ, ಕೋರ್ಟ್‌ ವೃತ್ತ, ಗಾಂಧಿನಗರ, ಟಮಕ, ಡಿ.ಸಿ. ಕಚೇರಿಗೆ ತೆರಳುತ್ತದೆ.
● ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

raLok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್‌ ಗಾಂಧಿ

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

Lok Sabha election campaign: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನೀರಸ 

11

Politics: ಮುನಿಯಪ್ಪ ಬೆಂಬಲಿಗರಿಗೆ ಭವಿಷ್ಯದ ಆತಂಕ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

Lok Sabha Election ಬಳಿಕ‌ವೂ ಗ್ಯಾರಂಟಿ ನಿಲ್ಲದು: ಮುಖ್ಯಮಂತ್ರಿ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.