ಸಮ್ಮೇಳನದಿಂದ ದಲಿತ ಪ್ರಜ್ಞೆ ಜಾಗೃತವಾಯಿತೆ?

ಅಚ್ಚುಕಟ್ಟಾಗ ಕಾರ್ಯಕ್ರಮಕ್ಕೆ ಮೆಚ್ಚುಗೆ • ಜಿಲ್ಲೆಯ ಕವಿ ಕೋಟಿಗಾನಹಳ್ಳಿ ರಾಮಯ್ಯ, ಕೆಲ ದಲಿತ ಹೋರಾಟಗಾರರ ಮರೆತ್ತಿದ್ದಕ್ಕೆ ಬೇಸರ

Team Udayavani, Aug 20, 2019, 5:14 PM IST

kolar-tdy-1

ಕೋಲಾರದಲ್ಲಿ ಜರುಗಿದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನೆರೆ ಪ್ರವಾಹದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸಲ್ಲಿಸಲಾಯಿತು.

ಕೋಲಾರ: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಿಂದ ದಲಿತ ಪ್ರಜ್ಞೆ ಜಾಗೃತವಾಯಿತೆ ಎಂಬ ಪ್ರಶ್ನೆ ಉದ್ಭವವಾಗಿದ್ದು ಚರ್ಚೆಗಳು ಆರಂಭವಾಗಿವೆ.

ನೆರೆ, ಪ್ರವಾಹ, ಸಮ್ಮೇಳನ ನಡೆದ ಎರಡೂ ದಿನವೂ ತುಂತುರು ಮಳೆ ಕಾಟ, ಸ್ಥಳೀಯರನ್ನು ಕಡೆಗಣಿಸಲಾಗಿದೆಯೆಂಬ ಆರೋಪಗಳ ನಡುವೆಯೂ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತೆಂಬ ಭಾವನೆ ಸಮ್ಮೇಳನದಲ್ಲಿ ಪಾಲ್ಗೊಂಡವರಿಂದ ವ್ಯಕ್ತವಾಯಿತು.

ಕಸಾಪಕ್ಕೆ ಅಭಿನಂದನೆ: ಜಾತಿ ಜನಗಣತಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತರು 105 ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿ, ಪದಾಧಿಕಾರಿ ಹುದ್ದೆ ಅಲಂಕರಿಸಿದವರು ತೀರಾ ಕಡಿಮೆ. ದಶಕಗಳ ಹಿಂದೆ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತರ ಪರ ಗೋಷ್ಠಿಯೊಂದನ್ನು ಇಡಲು ನಿರಾಕ ರಿಸಿದ ಕುಖ್ಯಾತಿಯನ್ನು ಕಸಾಪ ಹೊಂದಿತ್ತು. ಆದರೆ, ಮನುಬಳಿಗಾರ್‌ ನೇತೃತ್ವದ ಕಸಾಪ ಈ ಅಪವಾದವನ್ನು ಪ್ರಥಮ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ತೊಡೆದು ಹಾಕುವ ಪ್ರಯತ್ನ ಮಾಡಿದೆ. ಇದರಲ್ಲಿ ಯಶಸ್ವಿಯೂ ಆಗಿದೆ.

ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದ ದಲಿತ ವಿದ್ವಾಂಸರು ಮನು ಬಳಿಗಾರ ಮತ್ತವರ ತಂಡದ ಪ್ರಯತ್ನವನ್ನು ಮೆಚ್ಚಿಕೊಂಡಿದ್ದು ಇದನ್ನು ಪುಷ್ಟೀಕರಿಸಿದಂತಿತ್ತು.

ಅಚ್ಚುಕಟ್ಟು ವ್ಯವಸ್ಥೆ: ಸಮ್ಮೇಳನಗಳನ್ನು ಆಯೋಜಿಸುವಲ್ಲಿ ಅಧಿಕಾರಿಯಾಗಿ, ಕಸಾಪ ಚುಕ್ಕಾಣಿ ಹಿಡಿದವರಾಗಿ ಭಾರೀ ಅನುಭವ ಹೊಂದಿರುವ ಮನು ಬಳಿಗಾರ್‌, ಕೋಲಾರದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿಯೇ ವ್ಯವಸ್ಥೆ ಮಾಡಿದ್ದರು. ತುಂತುರು ಮಳೆ ನಡುವೆಯೂ ಸಮ್ಮೇಳನದ ಗೋಷ್ಠಿಗಳನ್ನು ಯಶಸ್ವಿಗೊಳಿಸಿದ್ದು, ಗೋಷ್ಠಿಗಳಲ್ಲಿ ವಿಷಯ ಮಂಡನೆ ಮಾಡಿದವರೆಲ್ಲರೂ ಆಗಮಿಸಿದ್ದು, ಯಾವುದೇ ಲೋಪವಿಲ್ಲದಂತೆ ಎರಡೂ ದಿನವೂ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದರು.

ಆರೋಪ: ಸಾಕಷ್ಟು ಸ್ಥಳೀಯರಿಗೆ ಸಮ್ಮೇಳನದಲ್ಲಿ ಅವಕಾಶ ನೀಡಿಲ್ಲವೆಂಬ ಆಕ್ಷೇಪಗಳ ನಡುವೆಯೂ ಸ್ಥಳೀಯ ಕಲಾವಿದ ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದು, ಸಾಮಾನ್ಯವಾಗಿ ದಲಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದ ಇತರೇ ವರ್ಗದವರನ್ನು ಸಮ್ಮೇಳನದಲ್ಲಿ ಸಭಿಕರಾಗಿ ಪಾಲ್ಗೊಳ್ಳುವಂತೆ ಮಾಡುವ ವಿಚಾರಗಳಲ್ಲಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆಯೆಂದೇ ಭಾವಿಸಬೇಕು.

ಕೆ.ರಾಮಯ್ಯರ ಗೈರು ಕೊರತೆ: ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿದ ಕಸಾಪದ ನಿರ್ಧಾರಕ್ಕೆ ಯಾರದೂ ಆಕ್ಷೇಪವಿರಲಿಲ್ಲ. ಆದರೆ, ಕೋಲಾರ ಜಿಲ್ಲೆಯವರೇ ಆದ, ದಲಿತ ಕವಿ, ವಿಮರ್ಶಕ, ಹೋರಾಟಗಾರ, ಕನ್ನಡ ನಾಡಿನ ಸಮಸ್ತ ದಲಿತರ ಸಾಕ್ಷಿ ಪ್ರಜ್ಞೆಯಾಗಿರುವ ಕೋಟಿಗಾನಹಳ್ಳಿ ರಾಮಯ್ಯ ಪ್ರಥಮ ದಲಿತ ಸಮ್ಮೇಳನ ಅದರಲ್ಲೂ ಕೋಲಾರದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಪಾಲ್ಗೊಳ್ಳದೇ ಇದ್ದುದು ದೊಡ್ಡ ಕೊರತೆಯಾಗಿ ಕಾಡುತ್ತಲೇ ಇತ್ತು.

ಕೆಲವರನ್ನು ಕರೆತರಲಿಲ್ಲ: ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಕೋಟಿಗಾನಹಳ್ಳಿ ರಾಮಯ್ಯರಿಂದಲೇ ಮಾಡಿಸಿ ಜಾಣ್ಮೆ ತೋರಿದ್ದ ಕಸಾಪಕ್ಕೆ ಅವರನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಸೋತಿತ್ತು. ದಲಿತ ಹೋರಾಟಕ್ಕಾಗಿಯೇ ಬದುಕು ಮೀಸಲಿಟ್ಟ ಅನೇಕ ದಲಿತೇತರ ಲಕ್ಷ್ಮೀಪತಿ ಕೋಲಾರ ಇತರರನ್ನು ಸಮ್ಮೇಳನ ಮರೆತು ಬಿಟ್ಟಿತು. ಈ ಲೋಪ ಸಮ್ಮೇಳನದ ಪರಿಪೂರ್ಣತೆಗೆ ಚ್ಯುತಿ ತಂದಂತಿತ್ತು.

ಸ್ಥಳೀಯ ವಿಚಾರಗಳ ಕುರಿತು ಜಾಣ ಮರೆವು: ಸಮ್ಮೇಳನದ ಆರಂಭದಲ್ಲಿಯೇ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕಂಬಾಲಪಲ್ಲಿಯ ಘೋರ ದುರಂತದ ವಿಷಯದ ಆಧಾರದ ಮೇಲೆ ಸಮ್ಮೇಳನ ನಡೆಯಬೇಕಿತ್ತು ಎಂದು ಕೋಟಿಗಾನಹಳ್ಳಿ ರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಕಂಬಾಲಪಲ್ಲಿ, ನಾಗಲಾಪಲ್ಲಿ ಹಾಗೂ ದಲಿತ ಚಳವಳಿ ನಾಡಿನಾದ್ಯಂತ ಹರಡಲು ಕಾರಣವಾಗಿದ್ದ ಜಿಲ್ಲೆಯ ಯಾವುದೊಂದು ಹೋರಾಟವನ್ನು ಸಮ್ಮೇಳನದಲ್ಲಿ ಸ್ಮರಿಸಿಕೊಳ್ಳಲೇ ಇಲ್ಲ.

ದಲಿತ ಸಾಹಿತ್ಯಕ್ಕೆ ದಲಿತ ಹೋರಾಟವೇ ಕಾರಣ ಎಂಬ ಮಾತು ಸಮ್ಮೇಳನದ ಗೋಷ್ಠಿಗಳಲ್ಲಿ ಸಾಕಷ್ಟು ಬಾರಿ ಕೇಳಿ ಬಂದಿತು. ಆದರೆ, ಅದೇ ಹೋರಾಟಗಳು ಮತ್ತು ಅದರಲ್ಲೂ ಜಿಲ್ಲೆಯ ಹೋರಾಟಗಾರರನ್ನು ಪರಿಗಣಿಸದೆ, ಸಮ್ಮೇಳನದ ಗೋಷ್ಠಿಗಳು ಕೇವಲ ವಿದ್ವತ್‌ ಪೂರ್ಣವಾಗಿ ಮಾತ್ರವೇ ನಡೆದಿದ್ದು, ದಲಿತ ಸಮಾಜದ ಮೇಲೆ ಬೆಳಕು ಚೆಲ್ಲುವಂತಾಗಲಿಲ್ಲ ಎಂಬ ಆರೋಪಕ್ಕೆ ತುತ್ತಾಗುವಂತಾಯಿತು. ಕೋಲಾರ ಜಿಲ್ಲೆಯ ಸ್ಥಳೀಯ ಹೋರಾಟಗಾರರು, ಕಲಾವಿದರು ಹಾಗೂ ಸ್ಥಳೀಯ ವಿಚಾರಗಳನ್ನು ಮರೆ ಮಾಚಿ ಸಮ್ಮೇಳನ ನಡೆದಿರುವ ಕುರಿತು ಭಾರೀ ಆಕ್ರೋಶವಿದ್ದರೂ, ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಅದಕ್ಕೆ ಅಡ್ಡಿ ಮಾಡಬಾರದೆಂಬ ಕಾರಣಕ್ಕೆ ಅನೇಕರು ಸಮ್ಮೇಳನದತ್ತಲೂ ತಲೆ ಹಾಕದೆ ಇದ್ದು ಬಿಟ್ಟಿದ್ದು ಸಮ್ಮೇಳನದ ಲೋಪವೇ.

ದಲಿತ ಪ್ರಜ್ಞೆ ಜಾಗೃತ ಗೊಂಡಿತೇ?:

ಮೊದಲ ದಲಿತ ಸಮ್ಮೇಳನವು ಪೂರ್ಣವಾಗಿ ಅಲ್ಲದಿದ್ದರೂ, ಹಿಂದಿನ ಕೆಲವು ಘಟನಾವಳಿಗಳನ್ನು ಪುನರ್‌ ಮನನ ಮಾಡಿಸಲು ಸಫ‌ಲವಾಯಿತು. ಆದರೆ, ದಲಿತರ ಬದುಕು, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಹಾಡು ಪಾಡು ವಿಷಯದಲ್ಲಿ ಆನೆಯನ್ನು ಮುಟ್ಟಿ ನೋಡಿ ಅನುಭವಿಸಿದ ಕುರುಡನಂತಷ್ಟೇ ಇರುವಂತಾಯಿತು. ದಲಿತರು ಎದುರಿಸುತ್ತಿರುವ ಜಾತೀಯತೆ ಬಿಸಿ, ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ, ನಿರುದ್ಯೋಗ ಸಮಸ್ಯೆ, ಆರ್ಥಿಕ ಚೈತನ್ಯ, ರಾಜಕೀಯ ಸ್ಥಾನಮಾನಗಳಿಸುವ ವಿಚಾರಗಳಲ್ಲಿ ಸ್ಪಷ್ಟವಾದ ದಿಕ್ಸೂಚಿಯಾಗಲಿಲ್ಲ ಎಂಬ ಮಾತುಗಳು ಸಮ್ಮೇಳನದ ನಂತರದ ವಿಮರ್ಶೆಯಲ್ಲಿ ಕೇಳಿ ಬರುವಂತಾಗಿದೆ. ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ದಲಿತರಲ್ಲಿ ಕಿಂಚಿತ್ತಾದರೂ, ಜಾಗೃತಿ ಮೂಡಿಸಿ, ಮಸುಕಾಗುತ್ತಿರುವ ದಲಿತ ನೆಲ ಸಂಸ್ಕೃತಿಗಳನ್ನು ಹುಡುಕಾಟದ ವಿಚಾರದಲ್ಲಿ, ದಲಿತ ಪ್ರಜ್ಞೆಯನ್ನು ಉದ್ದೀಪನಗೊಳಿಸುವ ವಿಷಯದಲ್ಲಿ ಪ್ರೇರಣೆಯಾಯಿತೇ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಮ್ಮೇಳನದಿಂದ ಸಿಗಲೇ ಇಲ್ಲ.
● ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

jameer

H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.