ಉದ್ಭವ ಗಣಪತಿಗೆ ಗ್ರಾಮಸ್ಥರಿಂದ ಪೂಜೆ
Team Udayavani, Apr 17, 2021, 2:19 PM IST
ಮುಳಬಾಗಿಲು: ತಾಲೂಕಿನ ಮಲ್ಲಕಚ್ಚನಹಳ್ಳಿಗ್ರಾಮದ ಗೇಟ್ ಸಮೀಪದಲ್ಲಿನ ಮರದಬುಡದಲ್ಲಿ ಗಣಪತಿ ಉದ್ಭವವಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ದೈವಿಕ ಭಾವನೆ ಮೂಡಿ ಬಂದು ಉದ್ಭವ ಗಣಪತಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಗ್ರಾಮದ ಗೇಟ್ನಲ್ಲಿ ಎರಡು ಜೋಡಿಮರಗಳು ಇದ್ದವು,ಈ ಪೈಕಿ ಒಂದುಮರ ಇದ್ದಕ್ಕಿದ್ದಂತೆಒಣಗಿ ಹೋಯಿತು, ಇದಾದ ಬಳಿಕ ಕೆಲ ದಿನಗಳ ಹಿಂದೆ ಬೆಳಗಿನ ಜಾವಮುಳಬಾಗಿಲಿಗೆ ಹೋಗಲು ಗ್ರಾಮಸ್ಥರು ಬಸ್ಸಿಗಾಗಿ ಕಾಯುತ್ತಿದ್ದರು. ಮರದ ಪಕ್ಕದಲ್ಲಿ ಶಬ್ದ ಬಂದಂತೆ ತೋರುತ್ತದೆ.
ಆಗ ಗ್ರಾಮಸ್ಥರು ಮರದ ಬಳಿ ಹೋಗಿ ನೋಡಿದರೆ ಗಣಪತಿ ಕಂಡಿದೆ.ಆದ್ದರಿಂದ ಉದ್ಭವ ಗಣಪತಿಗೆ ಪೂಜೆಯನ್ನುಮಾಡಲು ಮುಂದಾಗಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಾಷ್ಟ್ರೀಯ ಯುವ ಶಕ್ತಿ ಅಧ್ಯಕ್ಷ ಮಲ್ಲಕಚ್ಚನಹಳ್ಳಿ ಐಡಿಯಾ ಮಂಜುನಾಥ್ ಮಾತನಾಡಿ, ಜಗತ್ತು ಪ್ರಕೃತಿ ಮೇಲೆ ನಿಂತಿದೆ. ಆದ್ದರಿಂದ ಪ್ರಕೃತಿಯಲ್ಲಿ ನಮಗೆ ಒಂದಲ್ಲ ಒಂದು ವಿಸ್ಮಯ ಕಾಣಿಸುತ್ತವೆ.
ಗ್ರಾಮೀಣಪ್ರದೇಶಗಳಲ್ಲಿ ಸಾಕಷ್ಟು ಮಂದಿ ಜನರು ಮರಗಿಡಗಳನ್ನು ಕಡಿಯುತ್ತಾರೆ. ಇನ್ನೂಕೆಲವರು ಹಣವನ್ನು ಸಂಪಾದನೆಗಾಗಿ ಮರಗಳನ್ನು ನಾಶ ಮಾಡುತ್ತಾರೆ. ಇದನ್ನು ತಡೆಯಲು ಶ್ರೀರಾಮನವಮಿ ಹಬ್ಬದಂದು ಪರಿಸರ ರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್