ಲಾಕ್ಡೌನ್ ಉಲ್ಲಂಘಿಸಿದವರಿಗೆ 39 ಲಕ್ಷ ದಂಡ
Team Udayavani, Apr 28, 2020, 5:28 PM IST
ಸಾಂದರ್ಭಿಕ ಚಿತ್ರ
ಕೊಪ್ಪಳ: ಜಿಲ್ಲೆಯಲ್ಲಿ ಲಾಕ್ಡೌನ್ ಉಲ್ಲಂಘನೆ ಮಾಡಿದವರ ಮೇಲೆ ಪೊಲೀಸ್ ಇಲಾಖೆ ಸೇರಿ ಜಿಲ್ಲಾಡಳಿತವು ದಂಡ ವಿಧಿ ಸುತ್ತಿದೆ. ಲಾಕ್ಡೌನ್ ಉಲ್ಲಂಘನೆಗೆ ಸಂಬಂಧಿಸಿ ಈ ವರೆಗೂ 185 ಪ್ರಕರಣ ದಾಖಲಾಗಿದ್ದು, 157 ಜನರನ್ನು ಬಂಧಿ ಸಲಾಗಿದೆ. ಅಲ್ಲದೇ 39,61,400 ರೂ. ದಂಡ ವಿಧಿಸಲಾಗಿದೆ.
ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೂ ಕೆಲವರು ಅನಗತ್ಯವಾಗಿ ಬೈಕ್ನಲ್ಲಿ ಸುತ್ತಾಡುವುದು. ನಿಯಮ ಉಲ್ಲಂಘಿಸಿ ಪೊಲೀಸ್ ಹಾಗೂ ಅಧಿಕಾರಿಗಳ ಜೊತೆ ವಾಗ್ವಾದ ನಡೆಸುವುದು ಅಲ್ಲದೇ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನು ಕಾಪಾಡದೇ ಕೆಲವೊಂದು ನಿಯಮ ಉಲ್ಲಂಘಿಸಿದ್ದರಿಂದ ಜಿಲ್ಲಾಡಳಿತ ಅಂತವರ ಮೇಲೆ ಪೊಲೀಸ್ ಇಲಾಖೆ ವಿವಿಧ ಠಾಣೆಯಲ್ಲಿ 185 ಪ್ರಕರಣ ದಾಖಲಿಸಿದೆ. 157 ಜನರನ್ನು ಬಂಧಿಸಿದೆ. ಸೋಮವಾರ ಜಿಲ್ಲೆಯ ವಿವಿಧೆಡೆ 2 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ 8 ಜನರನ್ನು ಬಂಧಿಸಲಾಗಿದೆ. ಈ ವರೆಗೂ 600 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಪುನರ್ವಸತಿ ಕೇಂದ್ರದಲ್ಲಿ ವ್ಯವಸ್ಥೆ : ಜಿಲ್ಲಾಡಳಿತದಿಂದ ಸ್ಥಾಪಿಸಿದ ಪುನರ್ವಸತಿ ಕೇಂದ್ರಗಳಲ್ಲಿ ವಿವಿಧ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಅನಾಥ, ನಿರ್ಗತಿಕರಿಗಾಗಿ ಪುರ್ನವಸತಿಗಾಗಿ ಕಲ್ಪಿಸಿದ 8 ಸಂಸ್ಥೆಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವಧಾರ 1, ಮಕ್ಕಳ ಪಾಲನಾ ಕೇಂದ್ರ -2, ವೃದ್ಧಾಶ್ರಮಗಳು-2, ನಗರಾಭಿವೃದ್ಧಿ ಕೋಶದ ಯೋಗ ಕ್ಷೇಮ ಕೇಂದ್ರಗಳು-2, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೃದ್ಧಾಶ್ರಮ ಒಂದರಲ್ಲಿ ಇದುವರೆಗೂ 105 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಊಟ ವಿತರಣೆ: ನಗರದ ಬೆಂಕಿನಗರ ಮತ್ತು ಕುರುಬರ ಓಣಿ ಮತ್ತು ಭಾಗ್ಯನಗರದ 19ನೇ ವಾರ್ಡ್ನಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ. ಚಂದ್ರಶೇಖರ ಹಾಗೂ ಪಕ್ಷದ ಮುಖಂಡರು ಬಡ ಕುಟುಂಬಕ್ಕೆ ಊಟ ವಿತರಣೆ ಮಾಡಿದರು. ಈ ವೇಳೆ ಬಿಜೆಪಿ ಮುಖಂಡರಾದ ಅಪ್ಪಣ್ಣ ಪದಕಿ, ವಿ.ಎಂ. ಭೂಸನೂರಮಠ ವಕೀಲರು, ಅಮರೇಶ ಪಾಟೀಲ್, ಸಿ. ಬಸವರಾಜ ಚಂದ್ರಶೇಖರ, ಹಾಲೇಶ ಕಂದಾರಿ, ದೇವರಾಜ್ ಹಾಲಸಮುದ್ರ, ಯಮನೂರಪ್ಪ ಹಾದಿಮನಿ, ಕೊಟ್ರೇಶ ಕವಲೂರ ಇತರರಿದ್ದರು.
ಸ್ಪಂದನೆ: ಲಾಕ್ಡೌನ್ನಿಂದಾಗಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡು ಜಿಲ್ಲೆಗೆ ಕಾರ್ಮಿಕರು ಆಗಮಿಸಿದ್ದು, ಕೊಪ್ಪಳ-58, ಗಂಗಾವತಿ-41, ಕನಕಗಿರಿ-8, ಕಾರಟಗಿ-19, ಕುಷ್ಟಗಿ-400, ಯಲಬುರ್ಗಾ-42, ಕುಕನೂರು-6 ಜನರು ಸೇರಿದಂತೆ ಒಟ್ಟು 574 ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅಲ್ಲದೇ, ಜಿಲ್ಲೆಯಲ್ಲಿ ಸ್ಥಾಪಿಸಲಾದ ಕೋವಿಡ್-19 ಸಹಾಯವಾಣಿಗೆ ಜಿಲ್ಲೆಯಿಂದ ಬೇರೆ ಜಿಲ್ಲೆ, ರಾಜ್ಯಕ್ಕೆ ವಲಸೆ ಹೋಗಿ ಸಂಕಷ್ಟಕ್ಕೆ ಒಳಗಾದವರಿಂದ 31, ಜಿಲ್ಲೆಗೆ ಆಗಮಿಸಿದ ನಾಗರಿಕ, ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲು 28, ಆಹಾರ, ಆಹಾರ ಸಾಮಗ್ರಿಗಳ ಸಹಾಯಕ್ಕಾಗಿ 58, ಪಾಸ್ ಸಹಾಯಕ್ಕಾಗಿ 80, ಸ್ವಯಂ ಸೇವಕರ ಸೇವೆಯ ಮಾಹಿತಿಗಾಗಿ 29, ಕಾನೂನು ಸುವ್ಯವಸ್ಥೆಗಾಗಿ 34 ಮತ್ತು ಇತರೆ 78 ಒಟ್ಟು 338 ದೂರುಗಳು ಬಂದಿದ್ದು ಅವೆಲ್ಲವುಗಳನ್ನು ವಿಲೇವಾರಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ