ಮಗ ಮನೆಬಿಟ್ಟು ಹೋದರೂ ಎದೆಗುಂದದ ವೃದ್ಧೆಯ ಸ್ವಾವಲಂಬಿ ಬದುಕು
Team Udayavani, May 22, 2021, 1:23 PM IST
ಗಂಗಾವತಿ: ಕಳೆದ ವರ್ಷ ಪತಿ ಮೃತನಾದ, ಇದ್ದ ಮಗ ಕೂಡ ಮನೆ ಕಟ್ಟಲು ಮಾಡಿದ ಸಾಲ ಕಟ್ಟಲಾಗದೇ ಕೋವಿಡ್ ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೇ ಊರು ಬಿಟ್ಟು ಹೋದರೂ ಎದೆಗುಂದದೆ ಒಬ್ಬಂಟಿ ವೃದ್ದೆ ನೀಲಕಂಠೇಶ್ವರ ಕ್ಯಾಂಪಿನ ನಿವಾಸಿ ಹಂಪಮ್ಮ ಐಲಿ ಆದರ್ಶವಾಗಿದ್ದಾರೆ.
ಅನಾರೋಗ್ಯದ ಕಾರಣ ಪತಿ ಮೃತರಾಗಿದ್ದಾರೆ. ಓರ್ವ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಓರ್ವ ಪುತ್ರನಿಗೆ ಮದುವೆಯಾಗಿದ್ದು ತಗಡಿನ ಮನೆ ನಿರ್ಮಾಣಕ್ಕಾಗಿ ಗುಂಪುಗಳಲ್ಲಿ ಸಾಲ ಮಾಡಿ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಬೇರೆ ಊರಿಗೆ ಹೋಗಿ ನೆಲೆಸಿದ್ದಾರೆ. ಸಾಲ ಮಾಡಿದಕ್ಕಾಗಿ ಮನೆಯನ್ನು ಸಂಬಂಧಿಕರು ತಮ್ನ ವಶಕ್ಕೆ ತೆಗೆದುಕೊಂಡರೂ ವೃದ್ದೆ ಹಂಪಮ್ಮ ಐಲಿ ಇರಲು ಅನುಕೂಲ ಮಾಡಿಕೊಟ್ಡಿದ್ದಾರೆ.
ಇದನ್ನೂ ಓದಿ:ಕಪ್ಪು ಶಿಲೀಂಧ್ರದಂತ ಮಾರಕ ರೋಗದ ವಿಚಾರದಲ್ಲಿ ರಾಜ್ಯಕ್ಕೇಕೆ ಇಷ್ಟು ಆಲಸ್ಯ?ಎಚ್ ಡಿಕೆ ಪ್ರಶ್ನೆ
ಹಂಪಮ್ಮಐಲಿ ಅವರು ನಿತ್ಯವೂ ನೀಲಕಂಠೇಶ್ವರ ವೃತ್ತದ ಬಳಿ ಪುಟಪಾತ್ ಮೇಲೆ ಬಿಸ್ಕತ್ತು, ಅಡಿಕೆ ಎಲೆ ಸೇರಿ ಸಣ್ಣಪ್ರಮಾಣದಲ್ಲಿ ವ್ಯಾಪಾರ ಮಾಡಿ ಬದುಕು ನಡೆಸಿತ್ತಿದ್ದಾರೆ. ಮಗ ಬಿಟ್ಟು ಹೋದರೂ ಮಗನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅನ್ನ ಭಾಗ್ಯ ಅಕ್ಕಿ ಪಡೆದು ನಿತ್ಯವೂ 50 ರೂ. ವ್ಯಾಪಾರದಿಂದ ಉಳಿಯುತ್ತದೆ. ಮಾಶಾಸನ 500 ರೂ ಬರುತ್ತದೆ. ಜೀವನ ನಡೆಸುತ್ತಿದ್ದು ಮಗನ ಸಾಲ ಮುಟ್ಟಬೇಕು. ಕೋವಿಡ್ ರೋಗದಿಂದ ಎಲ್ಲರಿಗೂ ದುಡಿಮೆಯಿಲ್ಲ. ಹಾಗೆಂದು ಮನೆಯಲ್ಲಿ ಕುಳಿತರೆ ಜೀವನ ನಡೆಯುವುದಿಲ್ಲ ಎಂದು ಸ್ವಾಭಿಮಾನಿ ಹಂಪಮ್ಮ ಐಲಿ ಹೇಳುವಾಗ ಕಣ್ಣಲ್ಲಿ ನೀರು ಬಂದಿತ್ತು. ಕುಳಿತು ಕೆಡಬಾರದು ಮಾಡಿ ಕೆಡಬೇಕೆನ್ನುವ ಇವರ ಮಾತು ಆದರ್ಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ