ಗಮನ ಸೆಳೆಯುತ್ತಿದೆ ಭಾರೀ ಗಾತ್ರದ ಪೇರಲ
ನಾಟಿ ಮಾಡಿದ ಎರಡನೇ ವರ್ಷಕ್ಕೆ ಫಸಲು
Team Udayavani, Nov 29, 2020, 3:38 PM IST
ಕುಷ್ಟಗಿ: ತಾಲೂಕಿನ ಕಂದಕೂರು ವ್ಯಾಪ್ತಿಯ ಕೊನಸಾಗರ ಗ್ರಾಮದಲ್ಲಿ ರೈತರೊಬ್ಬರು ತೈವಾನ್ ಪಿಂಕ್ ತಳಿ ಪೇರಲ ಬೆಳೆದಿದ್ದು, ದೊಡ್ಡ ಗಾತ್ರದ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸಿದ್ದು, ಸ್ವಾದೀಷ್ಟದಲ್ಲೂ ಸೈ ಎನಿಸಿಕೊಂಡಿದೆ. ಕುಷ್ಟಗಿ-ಹೊಸಪೇಟೆ ಸುವರ್ಣ ಚತುಷ್ಪಥ ಹೆದ್ದಾರಿ ಕುರಬನಾಳ ಕ್ರಾಸ್ ಸಮೀಪದಲ್ಲಿ ಕೊನಸಾಗರದ ರೈತ ನಾಗರಾಜ್ ರಡ್ಡಿ ಅವರು ತಮ್ಮ 5 ಎಕರೆ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಮೂರು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ.
ನಾಟಿ ಮಾಡಿದ ಮಾರನೇ ವರ್ಷವೇ ಇಳುವರಿ ನೀಡುತ್ತಿದ್ದು, ಗಿಡಗಳು ಚಿಕ್ಕವು ಎನ್ನುವ ಕಾರಣದಿಂದ ಸ್ಥಳೀಯವಾಗಿ ಮಾರಾಟ ಮಾಡಿದ್ದರು. ಪ್ರಸಕ್ತ ವರ್ಷದಲ್ಲಿ ಭರ್ಜರಿ ಇಳುವರಿ ಬಂದಿದ್ದು, ಉತ್ಕೃಷ್ಟ ಗುಣಮಟ್ಟದ ಹಣ್ಣುಗಳು ಬೆಳೆದಿವೆ. ಪ್ರತಿ ಪೇರಲ 350ರಿಂದ 600 ಗ್ರಾಂ ಕಡಿಮೆ ಇಲ್ಲ. ಎರಡು ಹಣ್ಣು ಸೇರಿದರೆ ಒಂದು ಕೆ.ಜಿ. ತೂಗುತ್ತಿದ್ದು, ಗಿಡದಲ್ಲಿ ದೊಡ್ಡ ಗಾತ್ರದ ಹಣ್ಣುಗಳು ತೂಗಾಡುತ್ತಿದೆ.
ಇದನ್ನೂ ಓದಿ:ನಿವಾರ್ ಚಳಿ-ಮಳೆಗೆ ಜನಜೀವನ ತತ್ತರ
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ತೋಟದ ಪೇರಲ ಗಮನಿಸುವ ಪ್ರಯಾಣಿಕರು ವಾಹನ ನಿಲ್ಲಿಸಿ ತಮಗೆ ಬೇಕಿರುವಷ್ಟು ಹಣ್ಣುಗಳನ್ನು ಖರೀ ದಿಸುತ್ತಿದ್ದಾರೆ. ತೋಟಕ್ಕೆ ಬಂದ ಗ್ರಾಹಕರಿಗೆ 30 ರೂ.ಗೆ ಕೆಜಿಯಂತೆ ಮಾರಾಟ ಮಾಡಲಾಗುತ್ತಿದ್ದು,ತಾಜಾ ಹಣ್ಣುಗಳನ್ನು ಮನೆಗೆ ಒಯ್ಯುವುದು ಪ್ರಯಾಣಿಕರಿಗೆ ಖುಷಿ ಎನಿಸಿದೆ. ಕೆಲವರು ತಮ್ಮ ಆಪ್ತರಿಗೆ ಈ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಹೆದ್ದಾರಿ ಬದಿಯಲ್ಲಿ ಹಣ್ಣು ಮಾರುವ ವ್ಯಾಪಾರಿಗಳು ಇದ್ದಲ್ಲಿಗೆ ಬಂದು ಖರೀ ದಿಸಿ ಮಾರುತ್ತಿದ್ದು, ನಿತ್ಯ 5ರಿಂದ 10 ಕ್ವಿಂಟಲ್ಗೂ ಅಧಿ ಕ ಹಣ್ಣು ಮಾರಾಟವಾಗುತ್ತಿದೆ.
ಇತ್ತೀಚಿನ ದಿನಮಾನಗಳಲ್ಲಿ ಪೇರಲ (ಸೀಬೆ) ಬೇಡಿಕೆ ಹೆಚ್ಚಿದ್ದು ಅದರಲ್ಲಿ ಮಧುಮೇಹ ರೋಗಿಗಳಿಗೆ ಇಷ್ಟವಾದ ಹಣ್ಣಾಗಿದ್ದು, ಇದರಲ್ಲಿ ಸಿ ವಿಟಾಮಿನ್ ಜಾಸ್ತಿ ಇದೆ. ಎಲ್ಲ ಕಾಯಿಲೆಗೂ ರಾಮಬಾಣ ಎನ್ನುವುದು ಪ್ರಚಲಿತದಲ್ಲಿದೆ. ದೇಹಕ್ಕೆ ಅಗತ್ಯವಿರುವಷ್ಟು ಪೌಷ್ಟಿಕಾಂಶ ನೀಡುತ್ತಿದ್ದು, ಡಯಟಿಂಗ್ ಹಾಗೂ ಕೊಬ್ಬಿನಾಂಶ ಪ್ರಮಾಣ ಕುಂಠಿತಗೊಳಿಸುತ್ತದೆ.
ಈ ಹಣ್ಣಿನಲ್ಲಿ ಪೈಬರ್ ಸಮೃದ್ಧವಾಗಿರುವುದರಿಂದ ಹೃದಯವನ್ನು ಉತ್ತಮಗೊಳಿಸಬಲ್ಲದು. ಇದರಲ್ಲಿ ಪೊಟ್ಯಾಷಿಯಂ ಇರುವ ಹಿನ್ನೆಲೆಯಲ್ಲಿ ರಕ್ತದ ಒತ್ತಡ ನಿಯಂತ್ರಿಸಬಲ್ಲದು, ಕೆಟ್ಟ ಕೊಲೆಸ್ಟಾಲ್ ಅಂಶವನ್ನು ಕಡಿಮೆಗೊಳಿಸಲಿದೆ. ಇದರಲ್ಲಿರುವ ಪಾಲಿಸ್ಯಾಕರೈಡ್ ಎಂಬ ಕಾಬ್ರೋಹೈಡ್ರೆಟ್ ಉತ್ಕರ್ಷಣ ನಿರೋಧಕವಾಗಿ ಕೆಲಸ ನಿರ್ವಹಿಸುತ್ತಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ಶಾಸಕರಿಂದಲೇ ಸಿಡಿ ಆರೋಪ ತನಿಖೆಯಾಗಲಿ-ಎಸ್ಆರ್.ಪಾಟೀಲ
ಪ್ರಥಮ ಪಿಯುಸಿ ಆರಂಭಕ್ಕೆ ಪ್ರಿನ್ಸಿಪಾಲರ ಒತ್ತಾಯ: ಸುರೇಶ್ ಕುಮಾರ್
ಭದ್ರತೆ ಹಿಂಪಡೆದ ಸರ್ಕಾರ: BSY ಗೆ ಧಿಕ್ಕಾರದ ಪತ್ರ ಬರೆದ ಯತ್ನಾಳ
ಉ.ಕರ್ನಾಟಕದಲ್ಲಿ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ 13 ಹೆದ್ದಾರಿಗಳ ಅಭಿವೃದ್ಧಿ: ಗಡ್ಕರಿ
ಸಾಲಬಾಧೆ: ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಹಿಡಿದು ರೈತ ಆತ್ಮಹತ್ಯೆ
MUST WATCH
ಪಾಕ್ ಪರ ಘೋಷಣೆ ವಿಚಾರ: ಮಂಗಳೂರಿನಲ್ಲಿ ಎಸ್ಡಿಪಿಐನಿಂದ ‘SP ಕಚೇರಿ ಚಲೋ’ ಪ್ರತಿಭಟನೆ
ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಡಾ. ಕೆ.ವಿ. ರಾಜೇಂದ್ರ
ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್
ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani
ಭಾರತ ಆತ್ಮನಿರ್ಭರವಾಗಲು ಗ್ರಾಹಕರು ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಬೇಕು
ಹೊಸ ಸೇರ್ಪಡೆ
ಬಿಜೆಪಿ ಶಾಸಕರಿಂದಲೇ ಸಿಡಿ ಆರೋಪ ತನಿಖೆಯಾಗಲಿ-ಎಸ್ಆರ್.ಪಾಟೀಲ
51ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೊದಲ ಬಾರಿಗೆ ಕನ್ನಡದ ನಟನಿಗೆ ಉದ್ಘಾಟನಾ ಗೌರವ
ಪ್ರಥಮ ಪಿಯುಸಿ ಆರಂಭಕ್ಕೆ ಪ್ರಿನ್ಸಿಪಾಲರ ಒತ್ತಾಯ: ಸುರೇಶ್ ಕುಮಾರ್
ಲ್ಯಾಂಡ್ ಲೈನ್ ಬಳಕೆದಾರರ ಗಮನಕ್ಕೆ: ಇನ್ನು ಮುಂದೆ ಮೊಬೈಲ್ ಗೆ ಕರೆಮಾಡುವ ಮುನ್ನ ‘0’ ಕಡ್ಡಾಯ
ಮೋದಿ ಸರ್ಕಾರ ರೈತರನ್ನು ಗೌರವಿಸುತ್ತಿಲ್ಲ, ಬದಲಾಗಿ ಕಡೆಗಣಿಸುತ್ತಿದೆ: ರಾಹುಲ್ ಗಾಂಧಿ