ಮಾಹಿತಿಗೆ ಕೃಷಿ ವಿವಿ ಹೆಲ್ಪ್ ಲೈನ್

"ಬೀಜ ದಿನೋತ್ಸವ'ದಂದು ಆರಂಭಿಸಲು ಅಣಿ

Team Udayavani, Sep 25, 2019, 12:23 PM IST

kopala-tdy-1

ಕೊಪ್ಪಳ: ಯಾವ ಬೆಳೆಗೆ ಯಾವ ಔಷಧಿ ಸಿಂಪರಣೆ ಮಾಡಬೇಕು? ಬೆಳೆಯು ಒಣಗುತ್ತಿದ್ದರೆ ಏನು ಮಾಡಬೇಕು ಯಾರನ್ನು ಕೇಳಬೇಕು? ಯಾವ ಹೊಲ(ಭೂಮಿ)ದಲ್ಲಿ ಯಾವ ಯಾವ ಬೆಳೆ ಬೆಳೆದರೆ ಸೂಕ್ತ..

ಇವೆಲ್ಲ ವಿಷಯಗಳ ಕುರಿತು ರೈತ ಇನ್ಮುಂದೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸಕಾಲಕ್ಕೆ ವಿಜ್ಞಾನಿಗಳಿಂದ ಮಾಹಿತಿ ನೀಡಲು ರಾಯಚೂರು ಕೃಷಿ ವಿಶ್ವವಿದ್ಯಾಲಯ ಮೊಟ್ಟ ಮೊದಲ ಬಾರಿಗೆ ಶುಲ್ಕ ರಹಿತ 1800-425-0470 ಸಹಾಯವಾಣಿ (ಹೆಲ್ಪ್ಲೈನ್‌) ಆರಂಭಿಸಲು ಸಿದ್ಧತೆ ನಡೆಸಿದೆ. ಸೆ. 25ರಂದು “ಬೀಜ ದಿನೋತ್ಸವ’ದಂದು ಆರಂಭಿಸಲು ಅಣಿ ಮಾಡಿಕೊಂಡಿದೆ. ರೈತಾಪಿ ವಲಯ ಉಚಿತವಾಗಿ ಕರೆ ಮಾಡಿ ಕೃಷಿ ಸಂಬಂಧಿತ ಮಾಹಿತಿ ಪಡೆಯಬಹುದು.

ಪ್ರಾದೇಶಿಕತೆಗೆ ಅನುಗುಣವಾಗಿ ರೈತ ಯಾವ ಬೆಳೆ ಬೆಳೆಯಬೇಕು? ಬೆಳೆಗಳಿಗೆ ಬರುವ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ವಿಧಾನ, ರೋಗ ಬಾಧೆ ನಿಯಂತ್ರಣಕ್ಕೆ ಸಿಂಪರಣೆ ಮಾಡುವ ಔಷಧಿ ಮತ್ತು ಬಳಕೆಯ ಪ್ರಮಾಣ ಇನ್ನಿತರ ವಿಷಯಗಳ ಕುರಿತಂತೆ ಅನ್ನದಾತನಿಗೆ ವಿವಿಯಿಂದ ಕ್ಷಣಾರ್ಧದಲ್ಲಿ ಮಾಹಿತಿ ದೊರೆಯಲಿದೆ.

ವಿಜ್ಞಾನಿಗಳಿಂದ ನೇರ ಮಾಹಿತಿ: ಸರ್ಕಾರ ಕೃಷಿ ಇಲಾಖೆಯಿಂದ ಆರಂಭಿಸಿರುವ ಹೆಲ್ಪ್ ಲೈನ್ ನಲ್ಲಿ ಸಿಬ್ಬಂದಿ ರೈತನಿಗೆ ಮಾಹಿತಿ ನೀಡಿದರೆ, ರಾಯಚೂರು ಕೃಷಿ ವಿವಿಯಲ್ಲಿ ರೈತ ಮಾಡುವ ಕರೆ ವಿಜ್ಞಾನಿಗಳಿಗೆ ವರ್ಗವಾಗಿ ಮಾಹಿತಿ ದೊರೆಯಲಿದೆ. ಮೊದಲು ಕರೆ ವಿವಿ ಕಾಲ್‌ ಸೆಂಟರ್‌ಗೆ ತೆರಳುತ್ತದೆ. ಅಲ್ಲಿನ ಸಿಬ್ಬಂದಿ ರೈತನಿಂದ ಮಾಹಿತಿ ಪಡೆದು ಆತನ ಪ್ರಶ್ನೆಗಳಿಗೆ ಅನುಸಾರ ಮಾಹಿತಿ ನೀಡುವ ವಿಜ್ಞಾನಿಗಳಿಗೆ ಕರೆಯನ್ನು ವರ್ಗಾಯಿಸುತ್ತಾರೆ. ಹಿರಿಯ ವಿಜ್ಞಾನಿಗಳು ರೈತನ ಪ್ರಶ್ನೆಗೆ ಪೂರ್ಣ ಮಾಹಿತಿ ನೀಡಲಿದ್ದಾರೆ. ರಾಯಚೂರು ಕೃಷಿ ವಿವಿಯಲ್ಲಿ 250 ವಿಜ್ಞಾನಿಗಳಿದ್ದು, ಈ ಪೈಕಿ 40-50 ಹಿರಿಯ ತಜ್ಞ ವಿಜ್ಞಾನಿಗಳನ್ನು ರೈತರಿಗೆ ಮಾಹಿತಿ ನೀಡಲು ಆಯ್ಕೆ ಮಾಡಲಾಗಿದೆ. ಆಯಾ ವಿಭಾಗದ ವಿಜ್ಞಾನಿಗಳು ರೈತನ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.

ಹೆಲ್ಪ್ ಲೈನ್  ಸಮಯ:  ಉಚಿತ ಕರೆ ಎಂದಾಕ್ಷಣ ರೈತ ಯಾವಾಗ ಬೇಕಾದರೂ ಕರೆ ಮಾಡುವಂತಿಲ್ಲ. ವಿವಿಯ ಕಚೇರಿ ಅವಧಿಯಲ್ಲಿ ಅಂದರೆ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯೊಳಗೆ ಕರೆ ಮಾಡಿ ಯಾವ ಮಾಹಿತಿ ಬೇಕಾದರೂ ರೈತ ಪಡೆಯಬಹುದು. ರಜಾ ದಿನಗಳಲ್ಲಿ ಕರೆ ಮಾಡುವಂತಿಲ್ಲ ಎನ್ನುವ ಕೆಲವು ನಿಯಮಗಳನ್ನು ಇಲ್ಲಿ ಅಳವಡಿಸಲಾಗಿದೆ.

ರೈತರು ಕೃಷಿ ಸಂಬಂಧಿತ ಮಾಹಿತಿಗಾಗಿ ಇಲಾಖೆಗಳಿಗೆ ಅಲೆದಾಡಬೇಕಿಲ್ಲ. ರಾಯಚೂರು ಕೃಷಿ ವಿವಿಯಿಂದ ಮೊದಲ ಬಾರಿಗೆ ಹೆಲ್ಪ್ ಲೈನ್   ಆರಂಭಿಸಲಾಗುತ್ತಿದೆ. ರೈತರು ಕೃಷಿ ಸಂಬಂಧ ಯಾವ ಮಾಹಿತಿಯನ್ನಾದರೂ ವಿಜ್ಞಾನಿಗಳಿಂದ ನೇರವಾಗಿ ಪಡೆಯಬಹುದು.-ಡಾ| ಪ್ರಮೋದ ಕಟ್ಟಿ, ರಾಯಚೂರು ಕೃಷಿ ವಿವಿ ಆಡಳಿತಾಧಿಕಾರಿ.

 

-ದತ್ತು ಕಮ್ಮಾರ

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.