ಹಮಾಲರಿಗೆ ಪ್ಯಾಕೇಜ್ ಘೋಷಿಸಿ
Team Udayavani, May 9, 2020, 4:29 PM IST
ಕುಷ್ಟಗಿ: ಕೋವಿಡ್-19 ವೈರಾಣು ನಿಯಂತ್ರಿಸಲು ಲಾಕ್ಡೌನ್ ಜಾರಿಯಿಂದ ಸಂಕಷ್ಟದಲ್ಲಿರುವ ಅಸಂಘಟಿತ ಹಮಾಲರಿಗೆ ಪ್ಯಾಕೇಜ್ ಪರಿಹಾರ ಪ್ರಕಟಿಸಬೇಕೆಂದು ಬಜಾರ ಹಮಾಲಿ ಕಾರ್ಮಿಕರಿಗೂ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಗ್ರೇಡ್-2 ತಹಶೀಲ್ದಾರ್ ವಿಜಯಾ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಸಿಐಟಿಯು ಅಧ್ಯಕ್ಷೆ ಕಲಾವತಿ ಮೆಣೆದಾಳ ಮಾತನಾಡಿ, ಶ್ರಮಿಕ ವರ್ಗ ಹಮಾಲರು, ಲಾಕ್ಡೌನ್ ಜಾರಿಯಾದಾಗಿನಿಂದ ಸಂಕಷ್ಟದಲ್ಲಿದ್ದಾರೆ. ಈ ಜನರು ಆರ್ಥಿಕವಾಗಿ ದುರ್ಬಲರಾಗಿದ್ದು, ಇವರಿಗಾಗಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು. ಸದ್ಯ ಎಪಿಎಂಸಿ ಮಾರುಕಟ್ಟೆ ಯಾರ್ಡ ಆರಂಭವಾಗಿದ್ದು, ಲಾಕ್ಡೌನ್ ನಂತರದ ಪರಿಸ್ಥಿತಿಯಲ್ಲಿ ಶೇ. 10ರಷ್ಟು ಕೆಲಸ ಸಿಗುತ್ತಿದೆ. ಕೂಡಲೇ ಸರ್ಕಾರ ಈ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಪರಿಹಾರ ನೀಡಬೇಕೆಂದು ಹಕ್ಕೋತ್ತಾಯದ ಮನವಿ ಸಲ್ಲಿಸಿದರು.
ಬಜಾರ ಹಮಾಲರ ಸಂಘದ ಅಧ್ಯಕ್ಷ ಹನಮಂತ ಸಿಡ್ಲಭಾವಿ, ಹನುಮಂತ ಕತ್ತಿ, ಶರಣಪ್ಪ ಕತ್ತಿ, ರಂಗಪ್ಪ ಚೂರಿ, ತೊಂಡೆಪ್ಪ ಚೂರಿ, ದೇವಪ್ಪ ಕೋರಿ, ಬಸಪ್ಪ ಮಜ್ಜಗಿ, ಶರಣಪ್ಪ ಚೂರಿ, ಮಂಜುನಾಥ ಚೂರಿಮ, ಸಂಗಮೇಶ ಚೂರಿ, ರಮೇಶ ಕೋರಿ, ಸುರೇಶ ಕಟ್ಟಿಹೊಲ, ಹುಲ್ಲಪ್ಪ ಕುರಿ, ಫಕೀರಪ್ಪ, ಸಂತೋಷ ಚೂರಿ, ದೇವಪ್ಪ ಮನ್ನೇರಾಳ ಇದ್ದರು