ಅಪ್ಪು ಪ್ಲೀಸ್… ಒಮ್ಮೆ ಭೇಟಿಯಾಗಿ: ಪವರ್ ಸ್ಟಾರ್ ಆಗಮನದ ನಿರೀಕ್ಷೆಯಲ್ಲಿ ಅಂಧ ಸಹೋದರಿಯರು !
Team Udayavani, Oct 18, 2020, 3:55 PM IST
ಗಂಗಾವತಿ: ಕನ್ನಡ ಚಿತ್ರರಂಗದ ಮೇರು ಕಲಾವಿದ ದಿ. ಡಾ. ರಾಜಕುಮಾರ್ ಅಭಿಮಾನಿಗಳ ಹೃದಯ ಗೆದ್ದ ಕಲಾವಿದರಾಗಿದ್ದು, ಕನ್ನಡನಾಡಿನಲ್ಲಿ ಡಾ.ರಾಜ್ ಕುಟುಂಬದವರು ಎಲ್ಲೇ ಹೋದರೂ ಸಾವಿರಾರು ಜನ ಅಭಿಮಾನಿಗಳು ಸೇರುತ್ತಾರೆ.
ತಾಲೂಕಿನ ಮಲ್ಲಾಪೂರ ಗ್ರಾಮದ ನಾಲ್ವರು ಅಂಧ ಡಾ.ರಾಜ್ ಕುಟುಂಬದ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಂಡು ಮಾತನಾಡಿಸುವ ಅಭಿಲಾಷೆಯಿಂದ ಪುನೀತ್ ರಾಜಕುಮಾರ್ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಮಲ್ಲಾಪೂರದ ಹತ್ತಿರದ ವಾಣೀಭದ್ರೇಶ್ವರ ಬೆಟ್ಟದಲ್ಲಿ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಚೇತನ ನಿರ್ದೇಶನದ ಜೇಮ್ಸ್ ಸಿನೆಮಾ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಮಲ್ಲಾಪೂರ ಗ್ರಾಮದಲ್ಲಿರುವ ಬೆಳ್ಳೇಶ್ವರಿ, ಪ್ರಮೀಳಾ, ಶಾಂತಮ್ಮ ಮತ್ತು ರೇಣುಕಾ ಎಂಬ ನಾಲ್ವರು ಅಂಧ ಸಹೋದರಿಯರು ಶೂಟಿಂಗ್ ಸ್ಥಳಕ್ಕೆ ಹೋದರೂ ಅಪ್ಪುವನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಅಂಧ ಅಭಿಮಾನಿಗಳು ನಿರಾಸೆಯಿಂದ ವಾಪಾಸ್ಸಾಗಿದ್ದರು.
ಇದನ್ನೂ ಓದಿ: ಪ್ರವಾಹ ಸಂತೃಸ್ಥರಿಗೆ ಊಟ ನೀಡಲು ಹಣವಿಲ್ಲ,ಇದು ಸರಕಾರದ ವೈಫಲ್ಯ: ಸತೀಶ್ ಜಾರಕಿಹೊಳಿ
ಈ ಹಿಂದೆ ಪುನೀತ್ ರಾಜಕುಮಾರ್ ಖಾಸಗಿ ವಾಹಿನಿಯಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸುತ್ತಿದ್ದಾಗ, ಅಂಧೆಯಾಗಿರುವ ಬೆಳ್ಳೇಶ್ವರಿ ಕಾರ್ಯಕ್ರಮಕ್ಕೆ ತೆರಳಲು ಸಿದ್ದತೆ ನಡೆಸಿದರೂ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಉಳಿದ ಮೂರು ಜನ ಸಹೋದರಿಯರು ಕೂಡ ನಿರಾಸೆ ಅನುಭವಿಸಿದ್ದರು. ಇದೀಗ ಮಲ್ಲಾಪೂರ ಗ್ರಾಮದ ಹತ್ತಿರ ಶೂಟಿಂಗ್ ನಡೆಯುತ್ತಿದ್ದು ಈಗಲಾದರೂ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿಸುವ ಕನಸು ನನಸಾಗುವ ನಿರೀಕ್ಷೆಯಲ್ಲಿ ಕಣ್ಣಿಲ್ಲದ ನಾಲ್ವರು ಸಹೋದರಿಯರಿದ್ದಾರೆ.
ಇದನ್ನೂ ಓದಿ: ಭಾರತಕ್ಕಿಂತ ಪಾಕಿಸ್ಥಾನವೇ ಉತ್ತಮವಾಗಿ ಕೋವಿಡ್ ನಿಯಂತ್ರಣ ಮಾಡಿದೆ: ಶಶಿ ತರೂರ್
ಕನಸು ನನಸಾಗಬೇಕು: ಡಾ.ರಾಜ್ ಕುಮಾರ್ ಕನ್ನಡ ಆಸ್ತಿಯಾಗಿದ್ದಾರೆ. ಡಾ.ರಾಜ್ ಕುಟುಂಬದವರನ್ನು ಹತ್ತಿರದಿಂದ ಮಾತನಾಡಿಸುವ ನಮ್ಮ ಕನಸನ್ನು ಪುನೀತ್ ರಾಜ್ ಕುಮಾರ್ ಈಡೇರಿಸುವ ಭರವಸೆಯಿದೆ. ನಾಲ್ವರು ಸಹೋದರಿಯರು ಹುಟ್ಟಿನಿಂದ ಕುರುಡರಾಗಿದ್ದು ಡಾ.ರಾಜಕುಮಾರ ಅಭಿಮಾನಿಗಳಾಗಿದ್ದೇವೆ. ಟಿವಿಯಲ್ಲಿ ಪ್ರಸಾರವಾಗುವ ಡಾ.ರಾಜಕುಮಾರ್ ಹಾಗೂ ಕುಟುಂಬದವರ ಸಿನೆಮಾ ನೋಡಲು ಎಲ್ಲರಿಗೂ ಇಷ್ಟವಾಗಿದೆ ಅವರ ಆಗಮನದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಅಂಧರ ಕುಟುಂಬದ ಹಿರಿಯ ಸಹೋದರಿ ರೇಣುಕಾ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ