ಕರಡಿ ಹಾವಳಿ: ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ನಷ್ಟ
Team Udayavani, Nov 3, 2019, 9:32 AM IST
ಗಂಗಾವತಿ: ಕರಡಿ ಹಾವಳಿಯಿಂದ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆ ನಷ್ಟವಾದ ಘಟನೆ ಗಂಗಾವತಿ ಹಾಗು ಕನಕಗಿರಿ ತಾಲೂಕಿನಲ್ಲಿ ಜರುಗಿದೆ.
ಉತ್ತಮ ಮಳೆಯಿಂದಾಗಿ ರೈತರು ತಮ್ಮ ಹೊಲದಲ್ಲಿ ಮೆಕ್ಜೆ ಜೋಳ, ಶೇಂಗಾ, ಸಜ್ಜೆ ಸೇರಿ ಇತರೆ ತೋಟಗಾರಿಕೆಯ ಬೆಳೆಗಳನ್ನು, ಗುಂಪು ಗುಂಪಾಗಿ ಬರುವ ಕರಡಿಗಳು ತಿಂದು ನಂತರ ಕೆಡಿಸುತ್ತಿದ್ದು ಅರ್ಧ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ನಾಶವಾಗಿವೆ.
ಕನಕಗಿರಿ ತಾಲ್ಲೂಕಿನ ಓಬಳಬಂಡಿ ಮುಸಲಾಪೂರ, ಹಿರೇಕೇಡ, ರಾಮದುರ್ಗ ಹಾಗೂ ಗಂಗಾವತಿ ತಾಲೂಕಿನ ಆಗೋಲಿ, ವಿಠಲಾಪೂರ, ವೆಂಕಟಗಿರಿ, ಬೆಣಕಲ್, ಮುಕ್ಕುಂಪಿ, ಏಳುಗುಡ್ಡದ ಪ್ರದೇಶದಲ್ಲಿ ಕರಡಿ ಹಾವಳಿ ವಿಪರೀತವಾಗಿದೆ. ಕರಡಿ ಹಾವಳಿ ಕುರಿತು ರೈತರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಕನಕಗಿರಿ ಗಂಗಾವತಿ ತಹಸೀಲ್ದಾರ್ ರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಕೂಡಲೇ ಕರಡಿಯನ್ನು ಹಿಡಿಯಲು ಬೋನ್ (ಪಂಜರ)ಇರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ