ಹದಿನೇಳು ವರ್ಷ ಕಳೆದರೂ ಫಲಾನುಭವಿಗೆ ದಕ್ಕದ ಮನೆ


Team Udayavani, Mar 10, 2020, 4:41 PM IST

kopala-tdy-1

ಗಂಗಾವತಿ: ಗುಡಿಸಲು ರಹಿತ ರಾಜ್ಯ ನಿರ್ಮಾಣಕ್ಕೆ ಸರಕಾರಗಳು ಬಜೆಟ್‌ನಲ್ಲಿ ಅನುದಾನ ಘೋಷಿಸುತ್ತವೆ. ಆಶ್ರಯ ಮನೆ ನಿರ್ಮಿಸಲು ಪ್ರತಿವರ್ಷ ಕೋಟ್ಯಂತರ ರೂ. ಖರ್ಚೂ ಮಾಡುತ್ತವೆ. ಆದರೆ ಅಧಿಕಾರಿಗಳು ಸ್ಪಂದಿಸದಿದ್ದರೆ ಸರಕಾರದ ಯೋಜನೆ ಅನುಷ್ಠಾನ ಕಷ್ಟವೆನಿಸುತ್ತದೆ. ಆ ಯೋಜನೆಯ ಫಲ ಆಯಾ ಫಲಾನುಭವಿಗಳಿಗೆ ತಲುಪುವುದೇ ಇಲ್ಲ.

ಹೌದು. ಗಂಗಾವತಿಯ ನೇಕಾರ ಓಣಿಯ ಸೊಂಡುರು ಸ್ವಾಮಿಯವರು ಮನೆಗಾಗಿ ಕಳೆದ 17 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಹಿಂದೆ ಸುತ್ತಾಡಿದರೂ ಸರ್ಕಾರದ ಯೋಜನೆಯ ಫಲ ಇನ್ನೂ ದೊರಕಿಯೇ ಇಲ್ಲ. 2003ರಲ್ಲಿ ಅಂದಿನ ಎಸ್‌.ಎಂ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ ಸರಕಾರ ಆಶ್ರಯ ಯೋಜನೆ ಕಲ್ಪಿಸಿತ್ತು. ಇದರಲ್ಲಿ ಗಂಗಾವತಿ ನೇಕಾರ ಓಣಿಯ ಸೊಂಡುರು ಸ್ವಾಮಿ ಕೂಡ ಫಲಾನುಭವಿಯಾಗಿದ್ದರು. ಕಂಪ್ಲಿ ರಸ್ತೆಯಲ್ಲಿ ಆಟೋನಗರ ನಿರ್ಮಿಸಿ ಆಟೋ ಚಾಲಕರು ಮತ್ತು ಬಡವರಿಗೆ ನಿವೇಶನವನ್ನೂ ಕಲ್ಪಿಸಲಾಯಿತು. ನಂತರ ಅಂಬೇಡ್ಕರ್‌ ನಿಗಮದ ಮೂಲಕ 4.5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳುವ ಯೋಜನೆಯಲ್ಲಿ ನಿವೇಶನ ಪಡೆದ ಕೆಲ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಅದರಲ್ಲಿ ಸೊಂಡುರು ಸ್ವಾಮಿಯವರೂ ಆಯ್ಕೆಯಾದರು. ಆಟೋನಗರದಲ್ಲಿ ಮೂಲಸೌಕರ್ಯ ಇಲ್ಲದ ಕಾರಣಕ್ಕೆ ಮನೆ ನಿರ್ಮಿಸಿಕೊಡಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕಿದರು.

ಅದಾದ ನಂತರ 17 ವರ್ಷ ಕಳೆದರೂ ಯಾರೂ ಗಮನ ಹರಿಸಲಿಲ್ಲ. ಸೊಂಡುರು ಸ್ವಾಮಿ ಅವರು ಶಾಸಕರು, ಸಂಸದರು, ಸಚಿವರು, ವಿಪಕ್ಷ ನಾಯಕರು, ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದೂ ಆಯ್ತು. ಕೊನೆಗೆ ದೆಹಲಿಗೆ ತೆರಳಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೂ ಆಯ್ತು. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಮನೆ ನಿರ್ಮಿಸಿಕೊಡಲು ಮನಸ್ಸು ಮಾಡಿಲ್ಲ. ಇದರ ಮಧ್ಯೆಯೇ ಸೊಂಡುರು ಸ್ವಾಮಿಯವರ ಪತ್ನಿ ಹೃದಯಾಘಾತದಿಂದ ಮೃತಪಟ್ಟರು. ಮಕ್ಕಳ ಮದುವೆ ಮಾಡಿ ಒಬ್ಬಂಟಿಯಾದ ಸೊಂಡುರು ಸ್ವಾಮಿ ಅನ್ಯರ ಮನೆಯಲ್ಲಿ ಸಾಮಾನುಗಳನ್ನಿಟ್ಟು ಕೂಲಿ-ನಾಲಿ ಮಾಡುತ್ತ ಗುಡಿ-ಗುಂಡಾರ, ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.

2003ರಲ್ಲಿ ಸರಕಾರ ನಿವೇಶನ ಮತ್ತು ಮನೆ ಮಂಜೂರು ಮಾಡಿದ್ದರೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇನ್ನೂ ಮನೆ ನಿರ್ಮಾಣವಾಗಿಲ್ಲ. ಪತ್ನಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕಳುಹಿಸಿದ್ದು, ಈಗ ಒಬ್ಬಂಟಿಯಾಗಿದ್ದೇನೆ. ಆಟೋ ನಗರದಲ್ಲಿ ಮೂಲಸೌಕರ್ಯಕ್ಕಾಗಿ 25 ಲಕ್ಷ ರೂ. ಮಂಜೂರು ಮಾಡಿಸಿದರೂ ಆಶ್ರಯ ಕಾಲೋನಿಯಲ್ಲಿ ಯಾವುದೇ ಸೌಕರ್ಯಗಳಿಲ್ಲ. ಮನೆ ನಿರ್ಮಿಸುವವರೆಗೂ ಹೋರಾಟ ನಡೆಸುತ್ತೇನೆ. ನನ್ನಂತೆ ಸಾವಿರಾರು ಫಲಾನುಭವಿಗಳು ಅಧಿಕಾರಿಗಳ ಧೋರಣೆಗೆ ಹಿಡಿಶಾಪ ಹಾಕುತ್ತಿದ್ದಾರೆ.-ಸೊಂಡುರುಸ್ವಾಮಿ, ಫಲಾನುಭವಿ.

ಕಂಪ್ಲಿ ರಸ್ತೆಯಲ್ಲಿರುವ ಆಟೋ ನಗರದಲ್ಲಿ ಸೊಂಡುರು ಸ್ವಾಮಿ ಅವರಿಗೆ 2003ರಲ್ಲಿ ನಿವೇಶನ ಮಂಜೂರಿಯಾಗಿದೆ. 2017-18ರಲ್ಲಿ ಅಂಬೇಡ್ಕರ್‌ ನಿಗಮದಿಂದ ಮನೆಯೂ ಮಂಜೂರಿಯಾಗಿದೆ. ಮೂಲಸೌಕರ್ಯ ಇಲ್ಲದ ಕಾರಣದಿಂದ ಇನ್ನೂ ಮನೆ ನಿರ್ಮಿಸಿಲ್ಲ. ಆಟೋ ನಗರದಲ್ಲಿ ಶೀಘ್ರ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಅಲ್ಲಿ ನಿವೇಶನ ಪಡೆದ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತದೆ.-ಶೇಖರಪ್ಪ ಈಳಿಗೇರ್‌, ಪೌರಾಯುಕ್ತ

 

-ಕೆ.ನಿಂಗಜ್ಜ

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.