ಕಿಷ್ಕಿಂದಾ ಅಂಜನಾದ್ರಿ ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ಪ್ರವಾಸಿಗರಿಗೆ ಬೈಕ್ ಬಾಡಿಗೆ ನಿರ್ಬಂಧ
Team Udayavani, Oct 16, 2019, 6:26 PM IST
ಗಂಗಾವತಿ: ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿರುವ ಕಿಷ್ಕಿಂದಾ ಅಂಜನಾದ್ರಿ ವಿರೂಪಾಪೂರಗಡ್ಡಿ ಆನೆಗೊಂದಿ ಪ್ರದೇಶದಲ್ಲಿ ಪ್ರವಾಸಿಗರಿಗೆ ಬೈಕ್ ಬಾಡಿಗೆ ಡುವುದಕ್ಕೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ.
ಇಲ್ಲಿಗೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರು ಹಲವು ದಿನಗಳ ಕಾಲ ಇಲ್ಲಿ ರೆಸಾರ್ಟ್ ಹೊಟೇಲುಗಳಲ್ಲಿ ಉಳಿದುಕೊಂಡು ಸುತ್ತಲಿರುವ ಪಂಪಾಸರೋವರ, ಹನುಮನಹಳ್ಳಿ, ಋಷಿಮುಖ ಮುಖಪರ್ವತ, ಶಬರಿ ಗುಹೆ, ವಾಲೀಕಿಲ್ಲಾ ಆದಿಶಕ್ತಿ ಸಾಣಾಪೂರ ಕೆರೆ (ಲೇಖ್) ಸೇರಿ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಬೆಳ್ಳಿಗ್ಗೆ ಮತ್ತು ಸಂಜೆ ಸೂರ್ಯೋದಯ ಮತ್ತು ಸೂರ್ಯಾಸ್ತ ದೃಶ್ಯ ವೀಕ್ಷಣೆ ಮಾಡುತ್ತಾರೆ.
ಕಿಷ್ಕಿಂದಾ ಅಂಜನಾದ್ರಿ ವಿರೂಪಾಪೂರಗಡ್ಡಿ ಆನೆಗೊಂದಿ ಸೇರಿ ಇಲ್ಲಿಯ ಗ್ರಾಮಗಳು ಏಳು ಗುಡ್ಡದ ಪ್ರದೇಶದಲ್ಲಿ ಬರುವುದರಿಂದ ಪ್ರವಾಸಿಗರು ಸ್ಥಳೀಯರ ಬೈಕ್ ಬಾಡಿಗೆ ಪಡೆದು ಇಡೀ ಪ್ರದೇಶವನ್ನು ಸುತ್ತುತ್ತಾರೆ. ಇದೀಗ ಪೊಲಿಸ್ ಇಲಾಖೆ ಪ್ರವಾಸಿಗರಿಗೆ ಬಾಡಿಗೆ ಬೈಕ್ ಕೊಡದಂತೆ ತಾಕೀತು ಮಾಡಿದ್ದು ಬೈಕ್ ಬಾಡಿಗೆ ನೀಡಿ ಉದ್ಯೋಗ ಮಾಡಿಕೊಂಡಿದ್ದವರಿಗೆ ತೊಂದರೆಯಾಗಿದೆ.
ಹಳದಿ ಬಣ್ಣ ನಾಮಫಲಕವಿದ್ದರೆ ಓಕೆ:
ರಾಜ್ಯದಲ್ಲಿ ಕೆಲ ಪ್ರವಾಸಿ ತಾಣಗಳಲ್ಲಿ ಈಗಾಗಲೇ ಹಳದಿ ಬಣ್ಣದ ನಾಮಫಲಕ ಹೊಂದಿದ ಬೈಕ್ ಗಳನ್ನು ಪ್ರವಾಸಿಗರಿಗೆ ಬಾಡಿಗೆ ನೀಡಲಾಗುತ್ತಿದ್ದು ಇದೇ ಮಾದರಿಯಲ್ಲಿ ಆನೆಗೊಂದಿ ವಿರೂಪಾಪೂರಗಡ್ಡಿ ಪ್ರದೇಶದಲ್ಲಿ ಬಾಡಿಗೆ ಬೈಕ್ ನೀಡುವವರು ಸಾರಿಗೆ ಇಲಾಖೆಯ ನಿಯಮದಂತೆ ಹಳದಿ ನಾಮಫಲಕ ನಿಯಮ ಪಾಲನೆ ಮಾಡಬೇಕಿದೆ.
ಶೀಘ್ರ ಸಭೆ:
ಪ್ರವಾಸಿತಾಣವಾಗಿರುವ ಆನೆಗೊಂದಿ ವಿರೂಪಾಪೂರಗಡ್ಡಿ ಸಾಣಾಪೂರ ಪ್ರದೇಶದಲ್ಲಿ ಸಾರಿಗೆ ಇಲಾಖೆ ವತಿಯಿಂದ ಬೈಕ್ ಬಾಡಿಗೆ ಕೊಡುವವರ ಸಭೆ ನಡೆಸಿ ಏಕಗವಾಕ್ಷ ಮೂಲಕ ಬೈಕ್ ಗಳಿಗೆ ಹಳದಿ ನಾಮಫಲಕ ನಿಯಮದಂತೆ ಪರವಾನಿಗೆ ನೀಡಲಾಗುತ್ತದೆ ಎಂದು ಜಿಲ್ಲಾ ಸಾರಿಗೆ ಪ್ರಾದೇಶಿಕ ಅಧಿಕಾರಿ ಎನ್.ಶೇಖರ್ ಉದಯವಾಣಿ ಜತೆ ಮಾತನಾಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ