ಕನಕಾಚಲಪತಿ ಯಾತ್ರಾ ನಿವಾಸದಲ್ಲಿ ರಕ್ತದಾನ
Team Udayavani, Jun 1, 2020, 5:01 PM IST
ಕನಕಗಿರಿ: ರಕ್ತದಾನ ಮಾಡುವುದರಿಂದ ಜೀವ ಉಳಿಸಬಹುದಾಗಿದೆ. ಅದರೆ ಇಂತಹ ಕೋವಿಡ್ ವೈರಸ್ ಭೀತಿ ನಡೆವೆಯೂ ರಕ್ತದಾನ ಶಿಬಿರ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಹಶೀಲ್ದಾರ್ ರವಿ ಅಂಗಡಿ ಹೇಳಿದರು.
ಪಟ್ಟಣದ ಕನಕಾಚಲಪತಿ ಯಾತ್ರಾ ನಿವಾಸದಲ್ಲಿ ಕನಕಗಿರಿ ಪಟ್ಟಣದ ವಿವಿಧ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಎಲ್ಲ ದಾನಕ್ಕಿಂತ ರಕ್ತದಾನ ಮಹಾದಾನ. ರಕ್ತದಾನ ಮಾಡುವ ಮೂಲಕ ಹಲವು ಜೀವ ಉಳಿಸುವ ಪುಣ್ಯದ ಕೆಲಸ ಮಾಡಿ ಎಂದರು.
ಪೊಲೀಸರಿಂದ ರಕ್ತದಾನ: ಪಟ್ಟಣದ ಪೊಲೀಸ್ ಪೇದೆಗಳಾದ ಸಿದ್ರಾಮಪ್ಪ, ಸಿದ್ಧಯ್ಯ ಗುರುವಿನ, ಗಂಗಾಧರ ನಾಯಕ, ಬೈಲಪ್ಪ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿ, ಉಪತಹಶೀಲ್ದಾರ್ ವಿಶ್ವೇಶ್ವರಯ್ಯ, ಪ್ರಮುಖರಾದ ಕನಕರೆಡ್ಡಿ, ರಮೇಶ ಸೂಡಿ, ಮಲಕೇಶ ಕೋಟೆ, ಗೋಪಿನಾಥ, ರವಿ ಕಂಪ್ಲಿ, ನರಸಿಂಗ್, ಮಹ್ಮದ್ ರಫೀ ಹಂಚಿನಾಳ, ಬಸನಗೌಡ ಪಾಟೀಲ ಸೇರಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ