ಆಯುಕ್ತರ ಬಳಿ ಕೊಳೆಯುತ್ತಿದೆ 40 ಕೋಟಿ ಬೆಳೆವಿಮೆ


Team Udayavani, Sep 8, 2019, 11:31 AM IST

Udayavani Kannada Newspaper

ಕೊಪ್ಪಳ: ಜಿಲ್ಲೆಯಲ್ಲಿ 2016-17ನೇ ಹಿಂಗಾರು ಹಂಗಾಮಿನಲ್ಲಿ ಬರದ ಪರಿಸ್ಥಿತಿಯಿಂದ ರೈತರ ಖಾತೆಗೆ ಜಮೆಯಾಗಬೇಕಿದ್ದ 40 ಕೋಟಿ ಬೆಳೆ ವಿಮೆಯೂ ಕೃಷಿ ಇಲಾಖೆ ಆಯುಕ್ತರ ಬಳಿ ಕೊಳೆಯುತ್ತಿದೆ. 17,773 ರೈತರ ಖಾತೆಯಲ್ಲಿ ವ್ಯತ್ಯಾಸವಾಗಿದೆ ಎಂದು ಕೃಷಿ ಇಲಾಖೆ ನೆಪ ಹೇಳುತ್ತಿದ್ದು, ಇತ್ತೀಚೆಗೆ ಆರಂಭಿಕ 200 ಖಾತೆಗೆ ಹಣ ಜಮೆ ಮಾಡಲು ಮತ್ತೆ ತೊಂದರೆ ಉಂಟಾಗಿದೆ. ಹೀಗಾಗಿ ವಿಮೆ ಬರೋದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಹೌದು. ಕೊಪ್ಪಳ ಜಿಲ್ಲೆ ಪದೇ ಪದೆ ಬರಕ್ಕೆ ತುತ್ತಾಗಿ ರೈತ ಸಮೂಹ ಸಂಕಷ್ಟ ಎದುರಿಸುತ್ತಿದೆ. ಬೆಳೆ ವಿಮೆಯಾದರೂ ರೈತರ ಕೈ ಹಿಡಿಯಲಿದೆ ಎಂದು ನಂಬಿ 2016-17ರಲ್ಲಿ ಹಿಂಗಾರಿನ ಹಂಗಾಮಿನಲ್ಲಿ ಸಾವಿರಾರು ರೈತರು ಬ್ಯಾಂಕ್‌ಗಳ ಮುಂದೆ ನಿಂತು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಕೆಲವು ರೈತರ ಖಾತೆಗೆ ವಿಮೆ ಮೊತ್ತ ಬಂದಿದ್ದರೆ ಇನ್ನೂ ಹಲವು ರೈತರಿಗೆ ವಿಮೆ ಮೊತ್ತವೇ ಬಂದಿಲ್ಲ. ರೈತರು ನಮಗೆ ವಿಮೆ ಬಂದಿಲ್ಲವೆಂದು ಹಲವು ಬಾರಿ ಡಿಸಿ ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಪ್ರತಿಭಟನೆ, ಹೋರಾಟ, ಮನವಿಯನ್ನು ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ರೈತರ ಬ್ಯಾಂಕ್‌ ಖಾತೆಯಲ್ಲಿನ ದೋಷ, ವ್ಯತ್ಯಾಸದಿಂದ 17,723 ರೈತರ ಖಾತೆಗೆ 40 ಕೋಟಿ ರೂ. ಬೆಳೆ ವಿಮೆ ಮೊತ್ತ ಬರಬೇಕಿದೆ. ವಿಮಾ ಮೊತ್ತವನ್ನು ಕಂಪನಿಯೂ ಕೃಷಿ ಇಲಾಖೆಗೆ ವರ್ಗಾಯಿಸಿದೆ. ಸದ್ಯ ರಾಜ್ಯ ಕೃಷಿ ಇಲಾಖೆಯ ಖಾತೆಯಲ್ಲಿ ಜಿಲ್ಲೆಯ 40 ಕೋಟಿ ರೂ. ಹಣವಿದೆ.

ಆಗಿರುವುದು ಏನು?: ಬೆಳೆ ವಿಮೆ ತುಂಬುವ ವೇಳೆ ನಮ್ಮ ಬಳಿ ಇರುವ ಬ್ಯಾಂಕ್‌ ಖಾತೆ ಸಂಖ್ಯೆ ನೀಡಿದ್ದೇವೆ. ದೋಷ ನಮ್ಮಿಂದ ಆಗಲಿಲ್ಲ. ಕೆಲವೊಂದು ಮರಣದ ಪ್ರಕರಣಗಳು ಬಿಟ್ಟರೆ ರೈತನ ಕಡೆಯಿಂದ ದೊಡ್ಡ ಪ್ರಮಾಣದ ತಪ್ಪಾಗಿಲ್ಲ. ವಿನಾಕಾರಣ ಕೃಷಿ ಹಾಗೂ ವಿಮಾ ಕಂಪನಿ ವಿಳಂಬ ಮಾಡುತ್ತಿವೆ. ಬ್ಯಾಂಕ್‌ನ ಸಿಬ್ಬಂದಿ ರೈತನ ಬ್ಯಾಂಕ್‌ ಖಾತೆ, ಇತರೆ ಮಾಹಿತಿ ಸರಿಯಾಗಿ ನಮೂದು ಮಾಡಿದರೆ ಇಷ್ಟೆಲ್ಲ ತೊಂದರೆ ಎದುರಾಗಲ್ಲ. ಅವರು ಮಾಡುವ ಎಡವಟ್ಟಿನಿಂದ ವಿಮೆ ಮೊತ್ತ ನಮ್ಮ ಕೈ ಸೇರದಂತಹ ಪರಿಸ್ಥಿತಿ ಬಂದಿದೆ ಎನ್ನುತ್ತಿದೆ ರೈತ ಸಮೂಹ.

ಕೃಷಿ ಇಲಾಖೆ ಹೇಳ್ಳೋದೇನು?: ಬೆಳೆ ವಿಮೆ ಮಾಡಿಸುವ ವೇಳೆ ರೈತರು ಕೊಟ್ಟ ಬ್ಯಾಂಕ್‌ ಖಾತೆಯಲ್ಲಿ ಕೆಲವೊಂದು ವ್ಯತ್ಯಾಸ ಇವೆ. ಅಲ್ಲದೇ, ಇತ್ತೀಚಿನ ವರ್ಷದಲ್ಲಿ ಒಂದೇ ಬ್ಯಾಂಕ್‌ನಲ್ಲಿ ಹಲವು ಬ್ಯಾಂಕ್‌ಗಳು ವಿಲೀನವಾಗಿವೆ. ಹಾಗಾಗಿ ಆಯಾ ಬ್ಯಾಂಕ್‌ಗಳ ಐಎಸ್‌ಎಸ್‌ಸಿ ಕೋಡ್‌, ಬ್ಯಾಂಕ್‌ ಕೋಡ್‌ ಸೇರಿ ಇತರೆ ಕೆಲವು ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ. ಇದರಿಂದ ನಮಗೆ ತೊಂದರೆಯಾಗಿದೆ. ಕೆಲ ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗಿಲ್ಲ ಎನ್ನುತ್ತಿದೆ ಕೃಷಿ ಇಲಾಖೆ.

ಪ್ರಾರಂಭಿಕ 200 ಖಾತೆಯಲ್ಲಿ ದೋಷ: ಸದ್ಯ 40 ಕೋಟಿ ರೂ. ವಿಮೆ ಮೊತ್ತ ಕೃಷಿ ಇಲಾಖೆಯಲ್ಲಿದ್ದು, 17,723 ರೈತರ ಖಾತೆಯಲ್ಲಿ ಈಗಷ್ಟೇ 200 ರೈತರ ಖಾತೆಯನ್ನು ರಾಜ್ಯ ಇಲಾಖೆಗೆ ಕಳುಹಿಸಿದ್ದು, ಅದರಲ್ಲೂ ವ್ಯತ್ಯಾಸ ಕಂಡು ಬಂದಿವೆ. ಹೀಗಾಗಿ ಮತ್ತೆ ಅದನ್ನು ಸರಿಪಡಿಸಲು ಕೃಷಿ ಇಲಾಖೆ ತಲೆ ಬಿಸಿ ಮಾಡಿಕೊಂಡಿದೆ. ಇದೆಲ್ಲವನ್ನೂ ನೋಡಿದರೆ ಬೆಳೆ ವಿಮೆ ಹಣ ರೈತರ ಖಾತೆಗೆ ಜಮೆ ಆಗುವುದು ವಿಳಂಬ ಎನ್ನುವುದು ಇಲಾಖೆಯ ಮೂಲಗಳಿಂದೇ ಕೇಳಿ ಬಂದಿದೆ. ಯಾರೋ ಮಾಡುವ ಎಡವಟ್ಟಿಗೆ ರೈತರು ಬೆಳೆ ವಿಮೆ ಹಣಕ್ಕಾಗಿ ಪರಿತಪಿಸುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಬ್ಯಾಂಕ್‌ ಸಿಬ್ಬಂದಿ ಎಡವಟ್ಟು, ಕೃಷಿ ಇಲಾಖೆಯ ನಿಷ್ಕಾಳಜಿ ಇಲ್ಲಿ ಎದ್ದು ಕಾಣುತ್ತಿದೆ ಎಂದು ರೈತ ಸಮೂಹ ಆಪಾದನೆ ಮಾಡುತ್ತಿದೆ.

ವಿಮೆ ಮೊತ್ತ ಜಮೆ ಮಾಡಲು 17,723 ರೈತರ ಖಾತೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ 40 ಕೋಟಿ ಇಲಾಖೆಯಲ್ಲಿದ್ದು, ಖಾತೆ ವ್ಯತ್ಯಾಸ ಸರಿಪಡಿಸುತ್ತಿದ್ದೇವೆ. ಇತ್ತೀಚೆಗೆ 200 ಖಾತೆ ಸರಿಪಡಿಸಿ ರಾಜ್ಯ ಇಲಾಖೆಗೆ ಸಲ್ಲಿಸಿದ್ದೇವೆ. ಅದರಲ್ಲೂ ಮತ್ತೆ ವ್ಯತ್ಯಾಸ ಕಂಡು ಬಂದಿವೆ. ಎಲ್ಲವೂ ಸರಿಪಡಿಸುವ ಕೆಲಸ ನಡೆದಿದೆ.•ಶಬಾನಾ ಶೇಖ್‌, ಜಂಟಿ ಕೃಷಿ ನಿರ್ದೇಶಕಿ

 

•ದತ್ತು ಕಮ್ಮಾರ

ಟಾಪ್ ನ್ಯೂಸ್

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.