ಡ್ಯಾಂ ಗೇಟ್ ದುರಸ್ತಿ ಶೇ. 80 ಯಶಸ್ವಿ


Team Udayavani, Aug 17, 2019, 11:46 AM IST

kopala-tdy-2

ಕೊಪ್ಪಳ: ಇಳಿಬಿಟ್ಟ 12 ಟನ್‌ ಮರಳಿನ ಮೂಟೆ.

ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಕಿತ್ತು ಹೋದ ಪ್ರಕರಣಕ್ಕೆ ಸಂಬಂಸಿದಂತೆ ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿದ್ದು, ಶುಕ್ರವಾರ ಸಂಜೆ ವೇಳೆ ಶೇ. 80ರಷ್ಟು ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅಧಿಕಾರಿ ವರ್ಗ ಹಾಗೂ ಜನ ನಾಯಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತುಂಗಭದ್ರಾ ಡ್ಯಾಂಗೆ ಈ ವರ್ಷ ಭಾರಿ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ಆ. 13ರೊಳಗೆ 90 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ನದಿಪಾತ್ರದಡಿ ಮಳೆ ಸುರಿದ ಹಿನ್ನೆಲೆಯಲ್ಲಿ ಒಳ ಹರಿವಿನ ಪ್ರಮಾಣವೂ 2 ಲಕ್ಷ ಕ್ಯೂಸೆಕ್‌ಗೂ ಹೆಚ್ಚಾಗಿತ್ತು. ಹಾಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೀರನ್ನು ನದಿಪಾತ್ರಗಳಿಗೆ ಹರಿ ಬಿಟ್ಟಿದ್ದರು. ಆದರೂ ಡ್ಯಾಂ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಸರಿಯಾದ ನಿರ್ವಹಣೆ ಇಲ್ಲದೇ ಮುರಿದು ಹೋದ ಹಿನ್ನೆಲೆಯಲ್ಲಿ ಡ್ಯಾಂನಿಂದ ಆ. 13ರಂದು ಬೆಳಗ್ಗೆ 8:30ಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಇದರಿಂದ ಆತಂಕಗೊಂಡ ಅಧಿಕಾರಿ ವರ್ಗ ಮೊದಲ ದಿನವೇ ನೀರು ನಿಲ್ಲಿಸುವ ಪ್ರಯತ್ನ ನಡೆಸಿ ವಿಫಲವಾಗಿತ್ತು. ಇದು ಸುತ್ತಲಿನ ಅಚ್ಚುಕಟ್ಟು ಪ್ರದೇಶದ ರೈತರಲ್ಲೂ ಆತಂಕ ಮೂಡಿಸಿದ್ದಲ್ಲದೇ, ಈ ಬಾರಿ ಕಾಲುವೆಗೆ ನೀರು ಹರಿದು ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ವ್ಯಕ್ತಪಡಿಸಿದ್ದರು.

ಕಾರ್ಯಾಚರಣೆ ಹೇಗೆ ನಡೆಯಿತು? : ಆ. 13ರಂದು ಒಂದು ಇಂಚ್ ಕಬ್ಬಿಣದ ಪ್ಲೇಟ್ನ್ನು ಗೇಟ್ ಕೆಳಗಿಳಿಸುವ ಕಾರ್ಯ ಜರುಗಿತು. ಆದರೆ ನೀರಿನ ರಭಸಕ್ಕೆ ಪ್ಲೇಟ್ ಕಿತ್ತು ಹೋಯಿತು. ಇನ್ನೂ ಎರಡನೇ ಹಂತದಲ್ಲಿ 5 ಟನ್‌ ಮರಳಿನ ಚೀಲಗಳನ್ನು ಇಳಿಸುವ ಕಾರ್ಯವೂ ಜರುಗಿತು. ಆಗಲೂ ನೀರಿನ ಒತ್ತಡ ಹೆಚ್ಚಾಗಿದ್ದರಿಂದ ಮರಳು ಕೊಚ್ಚಿ ಹೋಯಿತು. ಅಷ್ಟರೊಳಗೆ ಎರಡು ದಿನ ಕಾರ್ಯಾಚರಣೆ ವಿಳಂಬವಾಯಿತು. ಇನ್ನೂ ಆ. 14ರಂದು 1500 ಅಡಿ ಉದ್ದದ ದಪ್ಪನೆಯ ಹಗ್ಗವನ್ನು ತರಿಸಿ 12 ಟನ್‌ನಷ್ಟು ಮರಳನ್ನು ಚೀಲಗಳಲ್ಲಿ ತುಂಬಿಸಿ ಕಬ್ಬಿಣದ ಸರಪಳಿಯಿಂದ ಮೂಟೆಯಾಕಾರದಂತೆ ಸಿದ್ಧಪಡಿಸಲಾಯಿತು. ಮೂಟೆ ಸಿದ್ಧಪಡಿಸಲು ಎರಡು ದಿನ ಕಳೆದವು. ಶುಕ್ರವಾರ ಸಂಜೆ 100 ಟನ್‌ ಸಾಮರ್ಥ್ಯದ ಕ್ರೇನ್‌ ಮೂಲಕ ಬೃಹದಾಕಾರದ ಮೂಟೆಯನ್ನು ಡ್ಯಾಂನಲ್ಲಿ ಇಳಿ ಬಿಡುವ ಪ್ರಕ್ರಿಯೆ ಜರುಗಿತು. ಒಂದು ಹಂತಕ್ಕೆ ಮೂಟೆ ಇಳಿಯುತ್ತಿದ್ದಂತೆ ನೀರಿನ ಸೆಳೆತದಿಂದ ಮೂಟೆ ಹೊಯ್ದಾಡುತ್ತಿತ್ತು. ಇದನ್ನರಿತ ತಾಂತ್ರಿಕ ವರ್ಗ ಆ ಮೂಟೆಗೆ ಕಟ್ಟಲಾಗಿದ್ದ ದಪ್ಪನೆಯ ತಂತಿಯನ್ನು ಇಳಿ ಬಿಟ್ಟಿತ್ತು. ಮೂಟೆಯೂ ನೀರು ಹರಿಯುವ ಗೇಟಿನ ದ್ವಾರಕ್ಕೆ ಕುಳಿತಿದ್ದು, ಶೇ.70-80ರಷ್ಟು ನೀರು ಹರಿಯುವ ಪ್ರಮಾಣ ಕಡಿಮೆಯಾಗಿದೆ.

ಕಾರ್ಯಾಚರಣೆಯಲ್ಲಿದ್ದ ತಂಡ:ಗೇಟ್ ಮುರಿದು ಹೋದ ವಿಷಯ ತಿಳಿಯುತ್ತಿದ್ದಂತೆ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ ಗುಂಗೆ, ಸಿಇ ಮಂಜಪ್ಪ ಸ್ಥಳದಲ್ಲೇ ಠಿಕಾಣಿ ಹೂಡಿ ಹಲವು ಕಾರ್ಯತಂತ್ರಗಳ ಕುರಿತು ಯೋಜನೆ ರೂಪಿಸುತ್ತಿದ್ದರು. ಗೇಟ್‌ನ ಭಾಗದಲ್ಲಿ ಕೈಗೊಳ್ಳುವ ಕಾರ್ಯದ ಕುರಿತು ಚರ್ಚೆ ನಡೆಸಿದ್ದರು. ಇವರೊಂಡಿಗೆ ಬೆಳಗಾವಿ ಮುಳುಗು ತಜ್ಞರ ತಂಡ, ಜಿಂದಾಲ್ ತಜ್ಞರ ತಂಡ ಸೇರಿದಂತೆ ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ತಂಡವು ನಿರಂತರ ಕಾರ್ಯಾಚರಣೆ ನಡೆಸಿ ಒಂದು ಹಂತಕ್ಕೆ ಯಶಸ್ವಿ ಕಂಡಿದೆ.

ನೀರಿನ ಸೆಳೆತ ಇಳಿಮುಖ: ಗೇಟ್ ಮುರಿದ ಮೊದಲ ದಿನದಂದು ನೀರು ಹರಿದು 70 ಎಕರೆ ವಿಸ್ತಾರದ ಪಂಪಾವನದಲ್ಲಿ ಸಂಗ್ರಹವಾಗಿತ್ತು. ಇದು ಇಂಜನಿಯರ್‌ ತಂಡ ಸೇರಿದಂತೆ ಜನರಲ್ಲೂ ಆತಂಕ ಉಂಟು ಮಾಡಿತ್ತು. ಶುಕ್ರವಾರ ಮರಳಿನ ಮೂಟೆ ಇಳಿ ಬಿಟ್ಟಿರುವುದರಿಂದ ಕಾರ್ಯಾಚರಣೆಯಲ್ಲಿ ಸ್ವಲ್ಪ ನಿರಾಳ ಭಾವ ಮೂಡಿದೆ. ಪಂಪಾವನಕ್ಕೆ ಹರಿದು ಬರುವ ನೀರಿನಲ್ಲಿ ಇಳಿಮುಖವಾಗಿದ್ದು, ಗುಳ್ಳೆ ಆಕಾರದ ಸ್ಥಿತಿ ಕಡಿಮೆಯಾಗಿವೆ. ಹೀಗಾಗಿ ಇಂಜನಿಯರ್‌ ಸೇರಿದಂತೆ ಕಾರ್ಮಿಕ ವರ್ಗವು ಖುಷಿಯಲ್ಲಿದೆ.

ಒಟ್ಟಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಶುಕ್ರವಾರ ನೀರಾವರಿ ಇಲಾಖೆ ಅಧಿಕಾರಿಗಳು ಸ್ವಲ್ಪ ಯಶಸ್ಸು ಕಂಡಿದ್ದಾರೆ. ನೀರು ಹರಿದು ಹೋಗುವುದನ್ನು ತಡೆಯುವ ಕಾರ್ಯ ನಡೆದಿದ್ದು, ಶನಿವಾರ ಇದರ ಸ್ಪಷ್ಟ ಚಿತ್ರಣ ಸಿಗಲಿದೆ.

• 12 ಟನ್‌ ಮರಳಿನ ಮೂಟೆ ಇಳಿಬಿಟ್ಟ ಅಧಿಕಾರಿಗಳು

• 100 ಟನ್‌ ಸಾಮರ್ಥ್ಯದ ಕ್ರೇನ್‌ ಬಳಕೆ

• ನಾಲ್ಕು ದಿನಗಳಿಂದ ನಿರಂತರ ನಡೆದ ಕಾರ್ಯ

ಟಾಪ್ ನ್ಯೂಸ್

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

crime (2)

Koppal: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.