ಅಮೃತ ಮಹೋತ್ಸವದ ನೆನಪಿಗಾಗಿ 6000 ರಾಷ್ಟ್ರ ಧ್ವಜ ಹಾಗೂ ಸಸಿಗಳ ವಿತರಣೆ
Team Udayavani, Aug 13, 2022, 6:14 PM IST
ಗಂಗಾವತಿ: ಪರಕೀಯರಿಂದ ದೇಶವನ್ನು ಸ್ವಾತಂತ್ರ್ಯಗೊಳಿಸಿದ ಮಹನೀಯರನ್ನು ಯುವಜನರು ಸದಾ ಸ್ಮರಣೆ ಮಾಡುವ ಮೂಲಕ ದೇಶದ ಪ್ರಗತಿಗೆ ಶ್ರಮಿಸುವಂತೆ ಬಿಜೆಪಿ ಯುವ ಮುಖಂಡ ಕಿರಣಕುಮಾರಗೌಡ ಹೇಳಿದರು.
ಅವರು ನಗರದ ಕೊಂಡಮಿ ವಿನಾಯಕ ಶಾಲೆಯಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಾಷ್ಟ್ರ ಧ್ವಜ ಹಾಗೂ ಸಸಿಗಳನ್ನು ಶಿವನಗೌಡ ಸೇವಾ ಟ್ರಸ್ಟ್ ಉಚಿತವಾಗಿ ವಿತರಿಸಿ ಮಾತನಾಡಿದರು.
ಸ್ವಾತಂತ್ರ್ಯದ ಅಮೃತಮಹೋತ್ಸವದ ನಿಮಿತ್ತ ನಮ್ಮ ಶಿವನಗೌಡ ಸೇವಾ ಟ್ರಸ್ಟ್ ವತಿಯಿಂದ ಗಂಗಾವತಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಒಟ್ಟು 6000 ರಾಷ್ಟ್ರ ಧ್ವಜ ಹಾಗೂ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿರುವುದರಿಂದಾಗಿ ಈ ಭಾರಿ ಸ್ವಾತಂತ್ರ್ಯದ ಅಮೃತಮಹೋತ್ಸವ ಇಷ್ಟು ವೈಭವದಿಂದ ದೇಶದ ಜನರು ಆಚರಣೆ ಮಾಡುತ್ತಿದ್ದಾರೆ. ಧರ್ಮ ದೇಶ ಉಳಿಯಲು ಬಿಜೆಪಿ ಪಕ್ಷ ಅಧಿಕಾರದಲ್ಲಿರಬೇಕು. ಜತೆಗೆ ಮೋದಿಯವರು ಪ್ರಧಾನಿಯಾಗಿ ಇನ್ನೂ ಬಹಳಷ್ಟು ವರ್ಷ ಆಡಳಿತ ನಡೆಸುವಂತೆ ಜನರು ಆಶೀರ್ವಾದ ಮಾಡಬೇಕೆಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎ.ಜೆ.ರಂಗನಾಥ, ಹಿರಿಯ ಪತ್ರಕರ್ತರಾದ ಕೆ.ನಿಂಗಜ್ಜ, ಇಂಗಳಗಿ ನಾಗರಾಜ, ರಾಮಮೂರ್ತಿ ನವಲಿ, ಎಸ್.ಎಂ.ಪಟೇಲ್, ಚಂದ್ರಶೇಖರ್ ಮುಕ್ಕುಂದಿ, ಚಂದ್ರಶೇಖರಗೌಡ, ಶಿವಪ್ಪ ನಾಯಕ, ವಿಶ್ವನಾಥ ಬೆಳಗಲ್ ಮಠ, ದೇವಿಕೇರಿ ಶ್ರೀನಿವಾಸ, ಕಾಶಿನಾಥ, ಮಲ್ಲಿಕಾರ್ಜುನ ಗೋಟೂರು, ಹನುಮೇಶ ಭಟಾರಿ, ಮುಖ್ಯಶಿಕ್ಷಕ ಶ್ರೀನಿವಾಸ ನಾಯ್ಡು, ದೈ.ಶಿಕ್ಷಕ ಎ.ಉಜ್ಜನಗೌಡ ಇದ್ದರು.ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಶಾಲಾವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಸಿಬ್ಬಂದಿಯವರಿಗೆ ರಾಷ್ಟ್ರ ಧ್ವಜ ಹಾಗೂ ಸಸಿಗಳನ್ನು ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ