ಗಣಿಗಾರಿಕೆ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಆದೇಶ
Team Udayavani, Sep 1, 2019, 11:40 AM IST
ಕುಷ್ಟಗಿ: ತಾಲೂಕಿನ ಸೇಬಿನಕಟ್ಟಿ ಸೀಮಾದಲ್ಲಿರುವ ಸರ್ವೇ ನಂ. 49/1 ಪ್ರದೇಶದ ದಾಖಲಾತಿಗಳ ಪ್ರಕಾರ ಸರ್ವೇ ಮಾಡಿ ಪ್ರಕರಣ ಇತ್ಯರ್ಥ ಗೊಳಿಸುವವರೆಗೂ ಸದರಿ ಪ್ರದೇಶದಲ್ಲಿ ಬೆಂಗಳೂರು ಮೂಲದ ಮೆ. ವಿವೇಕ್ ಎಕ್ಸಪೋಟ್ಸ್ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ಕುಮಾರ ಆದೇಶಿಸಿದ್ದಾರೆ.
ಸೇಬಿನಕಟ್ಟಿ ಸೀಮಾಂತರದಲ್ಲಿರುವ ಸರ್ವೇ ನಂ. 49/1ರಲ್ಲಿ ಒಟ್ಟು 79 ಎಕರೆ 14 ಗುಂಟೆ ಜಮೀನು ಇದ್ದು, ಇದರಲ್ಲಿ ಕಂದಾಯ ಇಲಾಖೆ 16 ಎಕರೆ ಪ್ರದೇಶವನ್ನು ಮ್ಯೂಟೇಷನ್ ಮಾಡಿಕೊಂಡಿದೆ. ಇದು ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 6(1)ರಂತೆ ಅಸಿಂಧುವಾಗಿ ವರದಿ ನೀಡಿ, ಬೆಂಗಳೂರಿನ ಮೆ. ವಿವೇಕ ಎಕ್ಸ್ಪೋಟ್ಸ್ 16 ಎಕರೆ ಪಿಂಕ್ ಗ್ರಾನೈಟ್ ಗುತ್ತಿಗೆ ಅನುಮತಿಸಿದೆ. ಈ ಗಣಿ ಗುತ್ತಿಗೆಯನ್ನು ರದ್ದುಗೊಳಿಸಿ, ಸದರಿ ಜಮೀನು ಪಹಣಿ ಪತ್ರಿಕೆಯಲ್ಲಿ ಅರಣ್ಯ ಎಂದು ನಮೂದಿಸಲು ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೋರಿರುವ ಹಿನ್ನೆಲೆಯಲ್ಲಿ ಸರ್ವೇ ನಂ. 49/1 ಪ್ರದೇಶದ ದಾಖಲೆಗಳ ಪ್ರಕಾರ ಸರ್ವೇ ಮಾಡಿ ವರದಿ ಪಡೆದು ಇತ್ಯಾರ್ಥವಾಗುವವರೆಗೆ ಈ ಪ್ರದೇಶದಲ್ಲಿ ಮೆ. ವಿವೇಕ್ ಎಕ್ಸಪೋಟ್ಸ್ ಬೆಂಗಳೂರು ಹೆಸರಿಗೆ ಮಂಜೂರಾದ ಕಲ್ಲು ಗಣಿ ಗುತ್ತಿಗೆ 826ರಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವ ಸೂಚ್ಯವಾಗಿ ತಿಳಿಸಿದ್ದಾರೆ.
ಏನಿದು ಪ್ರಕರಣ: ಸೇಬಿನಕಟ್ಟಿ ಸೀಮಾಂತರದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು, ಅರಣ್ಯಾಧಿಕಾರಿಗಳು ನಿರ್ಲಕ್ಷೆವಹಿಸಿದ್ದಾರೆ ಎಂದು ಏ.14ರಂದು ಮಾಹಿತಿ ಹಕ್ಕು ಕಾರ್ಯಕರ್ತ ಲಕ್ಷ್ಮಿಪತಿ ಅವರು ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಥಾನಿಕ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸ್ಥಳೀಯ ವಲಯ ಅರಣ್ಯಾಧಿಕಾರಿಗೆ ಆದೇಶಿಸಿದ್ದರು.
ಸರ್ವೇ ನಂ. 49/1ರಲ್ಲಿ ಒಟ್ಟು 79 ಎಕರೆ 14 ಗುಂಟೆ ಜಮೀನು ಇದ್ದು, ಇದರಲ್ಲಿ 16 ಎಕರೆ ಪ್ರದೇಶ 1995ರ 6 ಸೆಕ್ಷನ್-4ರ ಅಡಿ ಮೀಸಲು ಅರಣ್ಯ ಎಂದು ಸರ್ಕಾರ ಘೋಷಿಸಿ ಸರ್ಕಾರ ಅಧಿಸೂಚನೆ ಜಾರಿ ಮಾಡಿತ್ತು. ನಂತರ 1997ರಲ್ಲಿ ಅರಣ್ಯ ಮರುಸ್ಥಾಪನಾ ಅಧಿಕಾರಿ ಈ ಅಧಿಸೂಚನೆಯನ್ನೇ ರದ್ದು ಪಡಿಸುವಂತೆ ಕೋರಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸನ್ನು ಪ್ರಶ್ನಿಸಿ ಆಗಿನ ರಾಯಚೂರು ಡಿಎಫ್ ಓ ಅವರು ಕರ್ನಾಟಕ ಮೇಲ್ಮನವಿ ಪ್ರಾಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಸದರಿ ಡಿಎಫ್ ಓ ಅವರ ಮೇಲ್ಮನವಿಯನ್ನು ಪ್ರಾಧೀಕಾರವು 1998 ಅ.31ರಂದು ವಜಾಗೊಳಿಸಿತ್ತು. ಈ ಮಧ್ಯೆ ಪ್ರಾಧಿಕಾರದ ವಜಾ ಆದೇಶದ ವಿರುದ್ಧ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸುವ ಸಂಬಂಧ ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಮಾಹಿತಿ ವರದಿಯಲ್ಲಿ ಉಲ್ಲೇಖೀಸಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ