ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ದೋಟಿಹಾಳದಲ್ಲಿ ರಾಜ್ಯ ಮಟ್ಟದ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ
Team Udayavani, Dec 12, 2021, 7:32 PM IST
ದೋಟಿಹಾಳ: ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ದೋಟಿಹಾಳದ ಕೇಸೂರ ಗ್ರಾಮದಲ್ಲಿ ರಾಜ್ಯ ಮಟ್ಟದ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ ನಡೆಯಿತು.
ಪ್ರಥಮ ಬಹುಮಾನ ಅರ್ಥ ತೊಲಿ ಬಂಗಾರ, ದ್ವಿತೀಯ ಬಹುಮಾನ-15001, ತೃತೀಯ ಬಹುಮಾನ-11001, ಚತುರ್ಥ ಬಹುಮಾನ-8001, ಪಂಚಮ ಬಹುಮಾನ-6001 ಇಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರು ಚಾಲನೆ ನೀಡಿದರು.
ಈ ಸ್ಪರ್ಧೆಯಲ್ಲಿ ಬಾಗಲಕೋಟೆ, ಕೊಪ್ಪಳ, ರಾಯಚೂರು, ಬಳ್ಳಾರಿ, ಗದಗ ಸೇರಿದಂತೆ ಭಾಗಗಳಿಂದ ರೈತರು ಎತ್ತುಗಳನ್ನು ಭಾಗವಹಿಸಿದ್ದವು.
ಈ ಎತ್ತಿನ ಓಟ ನೋಡಲು ಸುಮಾರು ಸಾವಿರಾರು ಜನ ಆಗಮಿಸಿದ್ದರು.