ಈ ಗ್ರಾಮದ ಜನರಿಗೆ, ಶಾಲಾ ಮಕ್ಕಳಿಗೆ ಮಂಗಗಳದ್ದೇ ಕಿರಿಕಿರಿ : ಮಂಗಗಳ ಸ್ಥಳಾಂತರಕ್ಕೆ ಒತ್ತಾಯ

ಮಂಗಗಳನ್ನು ಕಂಡು ಓಡಿಹೋಗುವ ಶಾಲಾ ಮಕ್ಕಳು

Team Udayavani, Aug 4, 2022, 8:44 AM IST

ಈ ಗ್ರಾಮದ ಜನರಿಗೆ, ಶಾಲಾ ಮಕ್ಕಳಿಗೆ ಮಂಗಗಳದ್ದೇ ಕಿರಿಕಿರಿ : ಮಂಗಗಳ ಸ್ಥಳಾಂತರಕ್ಕೆ ಒತ್ತಾಯ

ದೋಟಿಹಾಳ: ಗ್ರಾಮದ ಗ್ರಾಮಸ್ಥರಿಗೆ ಮಂಗಗಳದ್ದೇ ದೊಡ್ಡ ತಲೆನೋವು. ಇಲ್ಲಿನ ಶಾಲಾ ಮಕ್ಕಳು ಶಾಲೆಗೆ ಹೋಗಿ ಬರುವಾಗ ಮಂಗಗಳ(ಕೋತಿ)ನ್ನು ಕಂಡು ಓಡಿಹೋಗುವಂಥ ಭಯದ ಸನ್ನಿವೇಶ ಇದೆ.. ಇನ್ನೂ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿAದ ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯವರು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಒಂದು ವರ್ಷಗಳಿಂದಲೂ ಊರಿನಲ್ಲಿ ಬೀಡು ಬಿಟ್ಟಿರುವ 50ಕ್ಕೂ ಹೆಚ್ಚು ಮಂಗಗಳು ಗ್ರಾಮದ ಜನತೆಗೆ ಒಂದಿಲ್ಲೊAದು ಕಾಟ ನೀಡುತ್ತಾ ಬಂದಿವೆ. ಊರಿನ ಜನರೆಲ್ಲ ಮಂಗಗಳ ಕಾಟಕ್ಕೆ ಬೇಸತ್ತು ಹೋಗಿದ್ದಾರೆ. ಮಕ್ಕಳನ್ನು ರಸ್ತೆಯಲ್ಲಿ ಬಿಡಲಾಗುತ್ತಿಲ್ಲ. ಹೊಲಗಳಲ್ಲಿ ಹಣ್ಣಿನ ಬೆಳೆ ತೆಗೆಯಲಾಗುತ್ತಿಲ್ಲ ಎಂಬುದು ಊರ ಜನರ ಗೋಳು.. ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಮನೆಗಳಿವೆ. ಅಲ್ಲಿರುವ ಜನರು ಹಗಲು ರಾತ್ರಿ ಎನ್ನದೆ ಸದಾಕಾಲ ಬಾಗಿಲು ಮುಚ್ಚಿಕೊಂಡಿರಬೇಕು. ಇನ್ನೂ ಮನೆಗಳ ಮೇಲೆ ಹೊದಿಸಿರುವ ಜಿಂಕ್‌ಶೀಟೆ(ತಗಡು) ಮೇಲೆ ಜಿಗಿಯುತ್ತಿರುವುದರಿಂದ ಶೀಟ್‌ಗಳು ಬೆಂಡಾಗುತ್ತಿವೆ. ಮಂಗಗಳ ಉಪಟಳವನ್ನು ತಪ್ಪಿಸಲು ಗ್ರಾಮಸ್ಥರು ಮನೆಗಳ ಮಾಳಿಗೆ ಏರಿದರೆ. ಜನರನೇ ಮಂಗಗಳು ಎದ್ದರುಸುತ್ತಿವೆ. ಮನೆಗಳ ಮುಂದೇ ಒಣಗಿಸಲು ಇಡುವ ನಾನಾ ಪದಾರ್ಥಗಳನ್ನು ನಿರಾತಂಕವಾಗಿ ಮಂಗಗಳು ಎತ್ತಿಕೊಂಡು ಒಯ್ಯುತ್ತವೆ ಈ ಬಗ್ಗೆ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮನೆ ಲೂಟಿ: ಬೆಳಗಾದಂತೆ ಮಂಗಗಳು ಕೆಲವು ಗುಂಪುಗಳಾಗಿ ಗ್ರಾಮದ ಎಲ್ಲಾ ಮನೆಯ ಮೇಲೆ ಸವಾರಿ ಹೊರಡುತ್ತವೆ. ಇಲ್ಲಿನ ಅಷ್ಟೂ ಮನೆಗಳ ಅಡುಗೆ ಕೋಣೆಗಳು ಎಲ್ಲಾ ಕೋತಿಗಳಿಗೂ ಚಿರಪರಿಚಿತವಾಗಿಬಿಟ್ಟಿದೆ. ಮನೆಯವರು ಬಾಗಿಲನ್ನು ತೆರೆದು ಕೆಲಸದಲ್ಲಿ ತೊಡಗಿದ್ದರೆ ಅಡುಗೆ ಮನೆಗೆ ನುಗ್ಗಿ ಎಲ್ಲವನ್ನು ಸೂರೆ ಮಾಡುವುದರೊಂದಿಗೆ ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು ಹಿಡಿದುಕೊಂಡು ಹೋಗುತ್ತವೆ. ಅಲ್ಲದೆ ಮನೆಯ ಮೇಲಿನ ಹಂಚು ತೆರೆದು ಒಳ ಪ್ರವೇಶಿಸಿ ಎಲ್ಲವನ್ನು ಹಾಳು ಮಾಡುತ್ತಿವೆ. ಇವುಗಳನ್ನು ಓಡಿಸಲು ಮುಂದಾದರೆ ಬೆದರಿಸು ವಷ್ಟು ಗಟ್ಟಿಯಾಗಿ ಬೇರೂರಿವೆ. ನಾವೇನಾದರೂ ಓಡಿಸಲು ಮುಂದಾದರೆ ನಮ್ಮ ಮೇಲೂ ಗುರ್ ಎಂದು ಅಟ್ಟಿ ಬರುತ್ತವೆ. ಹಾಗಾಗಿ ನಾವುಗಳು ಕೈಯಲ್ಲಿ ದೊಣ್ಣೆ ಹಿಡಿದು ಓಡಾಡ ಬೇಕಿದೆ ಎಂದು ಗ್ರಾಮಸ್ಥರು ಅಲವತ್ತುಕೊಳ್ಳುತ್ತಾರೆ.

ಇನ್ನೂ ಮನೆಗಳ ಮೇಲೆ ಹೊದಿಸಿರುವ ಜಿಂಕ್‌ಶೀಟೆ(ತಗಡು) ಮೇಲೆ ಜಿಗಿಯುತ್ತಿರುವುದರಿಂದ ಶೀಟ್‌ಗಳು ಬೆಂಡಾಗುತ್ತಿವೆ. ಜನರನೇ ಮಂಗಗಳು ಎದ್ದರುಸುತ್ತಿವೆ. ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಿಗಿದು ಗ್ರಾಮಸ್ಥರಿಗೆ ಸಾಕಾಗಿದೆ. ಹೀಗಾಗಿ ಅರಣ್ಯ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪುಲಿಕೇಶ ಕೊಳ್ಳಿ, ಸಂಗನಗೌಡ ಕಡೆಕೊಪ್ಪ, ಖಾಜೆಸಾಬ ಗಚ್ಚಿನಮನಿ, ಅಬ್ದುಲ್ ಖಾದರ ಬಿಜಕತ್ತಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವುದು ಗ್ರಾಮಸ್ಥರಿಂದ ತಿಳಿದು ಬಂದಿದ್ದು. ಅವುಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಅರಣ್ಯ ಇಲಾಖೆಯವರಿಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳುತ್ತೇವೆ.
– ಮುತ್ತಪ್ಪ ಛಲವಾದಿ. ಪಿಡಿಒ ದೋಟಿಹಾಳ ಗ್ರಾಪಂ.

ದೋಟಿಹಾಳ ಗ್ರಾಮದಲ್ಲಿ ಮಂಗಗಳ ಹಾವಳಿಯ ಬಗ್ಗೆ ಮಾಹಿತಿ ಇಲ್ಲ. ಗ್ರಾಪಂನಿAದ ಅಥವಾ ಗ್ರಾಮಸ್ಥರಿಂದ ದೂರು ಬಂದರೆ ಮಂಗಗಳನ್ನು ಬೇರೆ ಕಡೆಗೆ ಬಿಟ್ಟುಬರಲು ಅವಕಾಶ ಇದೆ. ವೃತ್ತಿನಿರತರನ್ನು ಸ್ಥಳಕ್ಕೆ ಕೆರಯಿಸಿ, ಮಂಗಗಳನ್ನು ಬೇರೆ ಕಡೇಗೆ ಸಾಗಿಸವ ಕೆಲಸ ಮಾಡುತ್ತೇವೆ.
– ಶಿವಶಂಕರ ರ‍್ಯಾವಣಿಕಿ, ಉಪವಲಯ ಅರಣ್ಯ ಅಧಿಕಾರಿ ಕುಷ್ಟಗಿ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.