ರೈಲ್ವೆ ಪ್ರಯಾಣಿಕರಿಗೆ ದುಬಾರಿಯಾದ ಆಟೋ ಪ್ರಯಾಣ
ರೈಲು ನಿಲ್ದಾಣದಿಂದ ಸಿಟಿ ಬಸ್ ಸಂಚಾರ ಭರವಸೆ ಈಡೇರಿಲ್ಲ ಆಟೋದವರಿಂದ 50ರಿಂದ 100 ರೂ. ವಸೂಲಿ
Team Udayavani, Jun 15, 2019, 11:10 AM IST
ಗಂಗಾವತಿ: ರೈಲ್ವೆ ನಿಲ್ದಾಣದ ಕಾಣದ ಸಿಟಿ ಬಸ್ಗಳು.
ಗಂಗಾವತಿ: ಹುಬ್ಬಳ್ಳಿ ಮತ್ತು ಗಂಗಾವತಿ ಮಧ್ಯೆ ರೈಲು ಸಂಚಾರ ಆರಂಭವಾಗಿದ್ದು, ನಿತ್ಯ ಸಾವಿರಾರು ಜನ ರೈಲು ಪ್ರಯಾಣ ಮಾಡುತ್ತಿದ್ದಾರೆ. ನಗರದ ಹೊರ ವಲಯದಲ್ಲಿರುವ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ತೆರಳು ಈಶಾನ್ಯ ಸಾರಿಗೆ ಸಂಸ್ಥೆ ಸಿಟಿ ಬಸ್ ವ್ಯವಸ್ಥೆ ಮಾಡದೇ ಇರುವ ಕಾರಣ ಪ್ರಯಾಣಿಕರು ಆಟೋದವರಿಗೆ ಅಧಿಕ ಹಣ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಬಹು ವರ್ಷಗಳ ಬೇಡಿಕೆಯ ರೈಲು ಸಂಚಾರ ಗಂಗಾವತಿಯಿಂದ ಹುಬ್ಬಳ್ಳಿಗೆ ಪ್ರತಿದಿನ ಬೆಳಗ್ಗೆ 5:40ಕ್ಕೆ ಹಾಗೂ ಮಧ್ಯಾಹ್ನ 2:30ಕ್ಕೆ. ಹುಬ್ಬಳ್ಳಿಯಿಂದ ಗಂಗಾವತಿಗೆ ಬೆಳಗ್ಗೆ 10ಕ್ಕೆ, ಸಂಜೆ 5:10ಕ್ಕೆ ರೈಲು ಸಂಚಾರ ಆರಂಭವಾಗಿದೆ. ಸಾಮಾನ್ಯ ರೈಲಿಗೆ 35 ರೂ., ಎಕ್ಸಪ್ರಸ್ ರೈಲಿಗೆ 70 ರೂ. ಪ್ರಯಾಣ ದರ ನಿಗದಿಯಾಗಿದ್ದು ಪ್ರತಿ ದಿನ ಸಾವಿರಾರು ಜನ ಗದಗ, ಕೊಪ್ಪಳ ಮತ್ತು ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದಾರೆ.
ಸಿಟಿಬಸ್ ವ್ಯವಸ್ಥೆ ಇಲ್ಲ: ವಿಶೇಷ ವೇಳೆಯಲ್ಲಿ ನಗರದ ವಿವಿಧ ಭಾಗದಿಂದ ರೈಲ್ವೆ ನಿಲ್ದಾಣಕ್ಕೆ ಸಿಟಿ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ ಅವರು ರೈಲ್ವೆ ಆರಂಭದ ದಿನ ಭರವಸೆ ನೀಡಿದ್ದರು. ಆದರೆ ಇನ್ನೂ ಸಿಟಿ ಬಸ್ ಸಂಚಾರ ಆರಂಭವಾಗಿಲ್ಲ. ನಗರದಿಂದ ಸುಮಾರು ಎರಡರಿಂದ ಮೂರು ಕಿ.ಮೀ.ದೂರ ಇರುವುದರಿಂದ ಆಟೋದವರು ಪ್ರಯಾಣಿಕರಿಂದ 50ರಿಂದ 100 ರೂ. ವರೆಗೆ ಹಣ ಪಡೆಯುತ್ತಿದ್ದಾರೆ. ಕೂಡಲೇ ಶಾಸಕ ಪರಣ್ಣ ಮುನವಳ್ಳಿ ಮುತುವರ್ಜಿ ವಹಿಸಿ ರೈಲ್ವೆ ನಿಲ್ದಾಣದಿಂದ ವಡ್ಡರಹಟ್ಟಿ, ಸಂಗಾಪೂರ, ಜಯನಗರ, ಹೊಸಳ್ಳಿ, ಹೇರೂರು ಗ್ರಾಮಗಳಿಂದ ರೈಲ್ವೆ ಸಮಯಕ್ಕೆ ಸರಿಯಾಗಿ ಸಿಟಿ ಬಸ್ ಸಂಚಾರದ ವ್ಯವಸ್ಥೆ ಮಾಡಬೇಕಿದೆ. ಇಲ್ಲದಿದ್ದರೆ ಹುಬ್ಬಳ್ಳಿಯಿಂದ ಕೇವಲ 35 ಮತ್ತು 70 ರೂ.ಗಳಲ್ಲಿ ಗಂಗಾವತಿಗೆ ಆಗಮಿಸುವ ಜನರು ಮನೆ ಸೇರಲು ನೂರಾರು ರೂ. ಖರ್ಚು ಮಾಡಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ