ಜನರ ಪ್ರತಿಭಟನೆ ನಂತರ ಶೌಚಾಲಯಕ್ಕೆ ಭೂಮಿಪೂಜೆ
ರಾಜಕೀಯ ಕುತಂತ್ರದಿಂದ ಶೌಚಾಲಯ ನಿರ್ಮಾಣ ಕಾಮಗಾರಿ ನಿಲ್ಲಿಸುವ ಹುನ್ನಾರ: ಜನರ ಆರೋಪ
Team Udayavani, Oct 2, 2022, 6:26 PM IST
ಕುಕನೂರು: ಮಹಿಳಾ ಶೌಚಾಲಯ ಭೂಮಿ ಪೂಜೆ ವೇಳೆ ನಿಗದಿಗೊಳಿಸಿ ಮೇಲಾಧಿಕಾರಿಗಳು ತಡೆ ನೀಡಿದ್ದಾರೆ ಎಂದು ಹೇಳಿದ್ದಕ್ಕೆ ಅಲ್ಲಿನ ಜನ ಪ್ರತಿಭಟನೆ ನಡೆಸಿದ ನಂತರ ಎಚ್ಚೆತ್ತ ಅಧಿಕಾರಿಗಳು ಕಾಮಗಾರಿ ಭೂಮಿಪೂಜೆ ನಡೆಸಿದ ಘಟನೆ ಕೋಳಿಪೇಟಿ 7ನೇ ವಾರ್ಡ್ನಲ್ಲಿ ಶನಿವಾರ ನಡೆಯಿತು.
ಪ್ರತಿಭಟನಾ ವೇಳೆ ಪಪಂ ಸದಸ್ಯ ಗಗನ ನೋಟಗಾರ ಮಾತನಾಡಿ, ಹತ್ತಾರು ವರ್ಷಗಳಿಂದ 7ನೇ ವಾರ್ಡ್ನಲ್ಲಿ ಮಹಿಳಾ ಶೌಚಾಲಯವಿಲ್ಲದೆ ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದು, ಇದೇ ವಾರ್ಡಿನಲ್ಲಿ ಸ್ಥಳ ಗುರುತಿಸಿ ಎಲ್ಲ ದಾಖಲೆಯೊಂದಿಗೆ ಪಪಂ 10 ಲಕ್ಷ ಅನುದಾನ ನೀಡಿ, ಟೆಂಡರ್ ಮುಗಿದು ಮೂರು ತಿಂಗಳ ನಂತರ ಕಾಮಗಾರಿಗೆ ಅಸ್ತು ನೀಡಿದ್ದರು. ಶನಿವಾರ ಮಹಿಳಾ ಶೌಚಾಲಯಕ್ಕೆ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದ್ದರು. ಪೂಜೆ ವೇಳೆ ಮೇಲಾಧಿಕಾರಿಗಳು ಪೋಟೋìಕಾಲ್ನಂತೆ ಸಚಿವರಿಂದ ಕಾಮಗಾರಿಗೆ ಚಾಲನೆ ನೀಡಬೇಕಿದೆ ಎಂದು ಇಲ್ಲದ ಸಬೂಬು ಹೇಳಿ ಭೂಮಿಪೂಜೆಗೆ ತಡೆ ಒಡ್ಡಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಮುಖಂಡ ಈಶಪ್ಪ ಸಬರದ ಮಾತನಾಡಿ, ನೀವು ಸರಕಾರಿ ಅಧಿಕಾರಿಗಳು. ಜನ ಪ್ರತಿನಿಧಿಗಳ ಕೈ ಕೆಳಗೆ ದುಡಿವವರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೌಚಾಲಯವಿಲ್ಲದೇ ಖಾಸಗಿಯವರ ಜಾಗದಲ್ಲಿ ಬಹಿರ್ದೆಸೆಗೆ ಹೋಗುವ ಮಹಿಳೆಯರ ಸ್ಥಿತಿ ಅರ್ಥ ಮಾಡಿಕೊಳ್ಳದೆ ರಾಜಕೀಯ ಕುತಂತ್ರದಿಂದ ಶೌಚಾಲಯ ನಿರ್ಮಾಣ ಕಾಮಗಾರಿ ನಿಲ್ಲಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ನಾವು ಯಾವತ್ತು ಬಗ್ಗಲ್ಲ. ಕಾಮಗಾರಿ ಭೂಮಿ ಪೂಜೆ ನೇರವೇರಿಸುವವರೆಗೆ ಪ್ರತಿಭಟನೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಮಹಿಳೆಯರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ನಂತರ ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಪ್ರತಿಭಟನಾಕಾರರ ಮನವೊಲಿಸಿ ಕಾಮಗಾರಿ ಭೂಮಿ ಪೂಜೆ ನಡೆಸಿದರು. ಇಂಜಿನಿಯರ್ ಶಿಲ್ಪಾ, ಪ್ರದಸ ಅರುಣಕುಮಾರ ನಾಯಕ್, ಪ್ರತಿಭಟನಾಕಾರರಾದ ನಾಗಪ್ಪ ಅಸಲಿ, ಮಲ್ಲಪ್ಪ ಸಬರದ, ಕಳಕಪ್ಪ ಇಬೇರಿ, ಶಂಕ್ರಪ್ಪ ನರೇಗಲ್, ಕಳಕಪ್ಪ ಕುಂಬಾರ, ಬಸವರಾಜ ಸಿಳ್ಳಿ, ಮುತ್ತು ವಾಲ್ಮೀಕಿ, ಶ್ರೀಕಾಂತ, ದೇವಪ್ಪ ಸೋಬಾನದ, ನೀಲಪ್ಪ ಸಿಳ್ಳಿ, ಪ್ರಕಾಶ ಚಂಡೂರು, ವಿರೂಪಾಕ್ಷಿ ಸಿಳ್ಳಿ, ಬಸವರಾಜ ಬಗಾನಾಳ, ಬಸವರಾಜ ಸಬರದ, ನಾಗಪ್ಪ ಕುಂಬಾರ, ದೇವಮ್ಮ ಕಿನ್ನಾಳ, ಬಸಮ್ಮ ಕಿನ್ನಾಳ, ಬಸಮ್ಮ, ಅನ್ನಮ್ಮ, ಗಂಗಮ್ಮ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Movie Review: ಆಡು ಜೀವಿದಂ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…