ಸಂಕಷ್ಟದಲ್ಲಿ ಮಣ್ಣೆತ್ತು ತಯಾರಕರು
ಮಣ್ಣೆತ್ತುಗಳಿಗೆ ಅಂತಿಮ ರೂಪ ; ಜೋರಾಗಿದೆ ಮಣ್ಣಿನ ಎತ್ತುಗಳ ತಯಾರಿ ಕಾರ್ಯ
Team Udayavani, Jun 28, 2022, 4:38 PM IST
ಕಾರಟಗಿ: ಮುಂಗಾರು ಮಳೆ ಈ ಭಾಗದಲ್ಲಿ ಸಂಪೂರ್ಣವಾಗಿ ಕ್ಷೀಣಿಸಿದ್ದು, ಮುಂಗಾರಿನ ಹುಮ್ಮಸ್ಸಿನ ಹುರುಪು ಕಾಣುತ್ತಿಲ್ಲವಾದರೂ ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮದಿಂದ ಆಚರಿಸುವ ಮಣ್ಣೆತ್ತಿನ ಅಮವಾಸ್ಯೆಯಂದು ಪೂಜಿಸುವ ಮಣ್ಣಿನ ಎತ್ತುಗಳ ತಯಾರಿ ಮಾತ್ರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೋರಾಗಿಯೇ ನಡೆದಿದೆ.
ಜೂ. 29ರಂದು ಬುಧವಾರ ಅಮವಾಸ್ಯೆ ಇದ್ದು, ಗ್ರಾಮೀಣ ಪ್ರದೇಶದಲ್ಲಿ ಹಬ್ಬ-ಹರಿದಿನಗಳನ್ನು ಜನತೆ ಸಂಭ್ರಮದಿಂದಲೇ ಆಚರಿಸುತ್ತಾರೆ. ರೈತಾಪಿ ವರ್ಗಕ್ಕೆ ಹಬ್ಬದ ಸಂಭ್ರಮ ನಿರೀಕ್ಷಿಸುವಂತಿದ್ದರೆ ತಯಾರಕರಿಗೆ ಮಾತ್ರ ಅಮಾವಾಸ್ಯೆಯ ಕತ್ತಲು ಆವರಿಸಿರುತ್ತದೆ. ಮಾರುಕಟ್ಟೆಗಳಲ್ಲಿ ಪರ ಊರಿನ ಮೂರ್ತಿಗಳ ಅಬ್ಬರಕ್ಕೆ ಮೂರ್ತಿಗಳ ತಯಾರಿಸುವ ಸ್ಥಳೀಯ ಕೆಲ ಕುಟುಂಬಗಳು ತಮ್ಮ ಕಾಯಕವನ್ನೇ ಕೈಬಿಟ್ಟಿವೆ.
ಆದರೆ ಇದ್ಯಾವುದನ್ನೂ ಲೆಕ್ಕಿಸದೇ ಹಲವು ಕುಟುಂಬಗಳು ಹಿರಿಯರ ಮಾರ್ಗ ಅನುಸರಿಸಿ ಕುಲಕಸಬು ಮುನ್ನಡೆಸುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಪಟ್ಟಣದ ಕೋಟೆ ಪ್ರದೇಶದ ಅಶೋಕ ಚಿತ್ರಗಾರ ಹಲವು ದಶಕಗಳಿಂದ ಮಣ್ಣಿನ ಮೂರ್ತಿಗಳ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕಾಯಕ ಮಾಡುತ್ತಿದೆ. ಹಬ್ಬದಲ್ಲಿ ಮಣ್ಣಿನ ಎತ್ತುಗಳನ್ನು ಕಡಿಮೆ ಬೆಲೆಗೆ ಕೇಳುತ್ತಾರೆ. ಮಣ್ಣು ಹೊತ್ತು ತಂದು ಮೂರ್ತಿ ಮಾಡಿದಷ್ಟು ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ. ಬೇಡಿಕೆ ಇದೆ ಆದರೆ 40-50 ರೂ. ಗಳಿಗೆ ಒಂದು ಜತೆ ಮಣ್ಣೆತ್ತುಗಳನ್ನು ಕೊಟ್ಟರು ಮಾರುಕಟ್ಟೆಗಳಲ್ಲಿ ಚೌಕಾಸಿ ಮಾಡುವುದನ್ನು ಜನ ಬಿಡಲ್ಲ. ಅಲ್ಲದೇ ಎತ್ತುಗಳನ್ನು ತಯಾರಿಸಲು ಈ ಭಾಗದಲ್ಲಿ ಸೂಕ್ತ ಕೆಂಪು ಮಣ್ಣು ಸಿಗುತ್ತಿಲ್ಲ. ಹರಳು ಮಿಶ್ರಿತ ಮಣ್ಣು ಇರುವುದರಿಂದ ಈ ಬಾರಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಿಂದ ಕೆಂಪುಮಣ್ಣು ತಂದು ಮಣ್ಣಿನ ಎತ್ತುಗಳನ್ನು ತಯಾರಿಸಿದ್ದೇವೆ. ಆದರೂ ಹೊಟ್ಟೆಪಾಡಿಗೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಮಾಲಾ ಅಶೋಕ ಜಿನಗಾರ
ದಿಗಂಬರ ಎನ್ ಕುರ್ಡೆಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ
MUST WATCH
ಹೊಸ ಸೇರ್ಪಡೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ