ಜಿಂಕೆಗಳ ಕಾಟಕ್ಕೆ ಕಂಗಾಲಾದ ರೈತರು
Team Udayavani, Jul 29, 2019, 9:21 AM IST
ಕುಕನೂರು: ಭೀಕರ ಬರ ಜೀವ ಸಂಕುಲವನ್ನು ಸಂಕಷ್ಟಕ್ಕೆ ದೂಡಿರುವುದಕ್ಕೆ ತಾಲೂಕು ಸಾಕ್ಷಿಯಾಗುತ್ತಿದ್ದು, ಆಹಾರಕ್ಕಾಗಿ ಜಿಂಕೆಗಳು ನಡೆಸುತ್ತಿರುವ ಹೋರಾಟ ರೈತರಿಗೆ ಪ್ರಾಣ ಸಂಕಟವಾಗಿದೆ. ತಾಲೂಕು ಬರದಿಂದ ತತ್ತರಿಸಿದ್ದು, ಕುಡಿವ ನೀರು ಹಾಗೂ ಆಹಾರಕ್ಕಾಗಿ ಜಿಂಕೆಗಳ ಪರದಾಡುತ್ತಿವೆ. ಈ ನಡುವೆ ಅಲ್ಪಸ್ವಲ್ಪ ಸುರಿದ ಮಳೆಯನ್ನು ನಂಬಿ ಬಿತ್ತನೆಯಾದ ಬೆಳೆಗಳಿಗೆ ತೇವಾಂಶ ಕೊರತೆ ಎದುರಾಗಿದೆ. ಹೇಗಾದರೂ ಮಾಡಿ ಬೆಳೆ ರಕ್ಷಿಸಿಕೊಳ್ಳಬೇಕೆಂದು ಶ್ರಮಿಸುತ್ತಿರುವ ರೈತರಿಗೆ ಜೆಂಕೆಗಳ ಕಾಟ ನಿದ್ದೆಗೆಡಿಸಿದೆ. ರಾತ್ರಿ ಜಮೀನುಗಳಿಗೆ ನುಗ್ಗುವ ಜಿಂಕೆಗಳು ಬೆಳೆ ಹಾಳು ಮಾಡುತ್ತಿದ್ದು, ರೈತರು ನಿದ್ದೆಗೆಟ್ಟು ಬೆಳೆ ಕಾಯುವಂತಾಗಿದೆ.
ಸುಮಾರು ವರ್ಷಗಳಿಂದ ಜಿಂಕೆವನ ನಿರ್ಮಿಸುವಂತೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಎಲ್ಲ ಸರಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ. ಇನ್ನಾದರೂ ರೈತರ ಗೋಳಾಟ ಅಂತ್ಯವಾಗುತ್ತದೆ ಎಂಬುವ ನಂಬಿಕೆ ನನ್ನದು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಾಗಿದೆ.•ಅಂದಪ್ಪ ಕೊಳೂರು ರೈತ ಸಂಘದ ಜಿಲ್ಲಾಧ್ಯಕ್ಷ
ಈ ಬಾರಿ ಆಡಳಿತಕ್ಕೆ ಬಂದ ತಕ್ಷಣ ಕೊಪ್ಪಳ ಜಿಲ್ಲೆಯಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರೈತರು ಜಿಂಕೆಗಳಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಿಜೆಪಿ ಆಡಳಿತದ ಸಂದರ್ಭದಲ್ಲಿ ಜಿಂಕೆ ವನಕ್ಕೆ ಸುಮಾರು 50 ಲಕ್ಷ ರೂ. ಬಿಡುಗಡೆ ಮಾಡಿತ್ತು.•ಹಾಲಪ್ಪ ಆಚಾರ್ ಯಲಬುರ್ಗಾ ಶಾಸಕ
•ಎಲ್. ಮಂಜುನಾಥಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ