ನೈರ್ಮಲ್ಯ ಮರೆತ ಗಂಗಾವತಿ ನಗರಸಭೆ ಅಧಿಕಾರಿಗಳು
ನಗರಸಭೆ ನೈರ್ಮಲ್ಯಾಧಿ ಕಾರಿಗಳ ನಿರ್ಲಕ್ಷ್ಯ ಮೊದಲಿನಂತಾದ ದುರುಗಮ್ಮನಹಳ್ಳ
Team Udayavani, Mar 19, 2020, 3:44 PM IST
ಗಂಗಾವತಿ: ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿಯಿಂದ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ಗಂಗಾವತಿ ನಗರದ ಮಾಂಸ ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಅಶುದ್ಧತೆ ಎದ್ದು ಕಾಣುತ್ತಿದೆ. ಮಾಂಸ ಮಾರುಕಟ್ಟೆಯಲ್ಲಿ ಚರ್ಮ, ಕೊಂಬು, ರಕ್ತದಿಂದ ಇಲ್ಲಿಯ ಚರಂಡಿಗಳು ತುಂಬಿವೆ.
ಕೋಳಿ ಪುಕ್ಕಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಇಡೀ ವಾತಾವರಣ ದುರ್ವಾಸನೆಯಿಂದ ಕೂಡಿದೆ. ಮಾಂಸದ ಮಾರುಕಟ್ಟೆಯಲ್ಲಿನ ನೊಣ ಮತ್ತು ಸೊಳ್ಳೆಗಳು ಪಕ್ಕದ ತರಕಾರಿ ಮಾರುಕಟ್ಟೆಯಲ್ಲಿನ ತರಕಾತಿ ಮೇಲೆ ಕುಳಿತು ಹೊಲಸು ಮಾಡುತ್ತಿವೆ. ಮಾಂಸ ಮತ್ತು ತರಕಾರಿ ಮಾರ್ಕೆಟ್ ಮಧ್ಯದ ಖಾಲಿ ಜಾಗದಲ್ಲಿ ಮಾಂಸದಂಗಡಿ ತ್ಯಾಜ್ಯ, ಕೋಳಿ ಪುಕ್ಕ, ಕೊಳೆತ ತರಕಾರಿ, ಹಣ್ಣುಗಳನ್ನು ವ್ಯಾಪಾರಿಗಳು ತಂದು ಹಾಕುತ್ತಿದ್ದಾರೆ. ಈ ಮಧ್ಯೆ ನಗರಸಭೆಯವರು ಇಲ್ಲಿ ಕಸ ಹಾಕುತ್ತಿರುವುದರಿಂದ ಪರಿಸರ ಇನ್ನಷ್ಟು ಹದಗೆಟ್ಟಿದೆ. ನಗರದ ಮಧ್ಯೆದಲ್ಲಿ ಹರಿಯುವ ದುರುಗಮ್ಮನಹಳ್ಳವನ್ನು ಸರ್ಕಾರಿ ಅನುದಾನ ಮತ್ತು ಸಾರ್ವಜನಿಕರ ವಂತಿಗೆ ಬಳಸಿ ಮೂರು ತಿಂಗಳ ಹಿಂದೆ ಸ್ವತ್ಛತೆ ಮಾಡಲಾಗಿತ್ತು.
ಈಗ ಪುನಃ ಅಕ್ಕಪಕ್ಕದವರು, ಮಾಂಸ, ತರಕಾರಿ ವ್ಯಾಪಾರಿಗಳು ತ್ಯಾಜ್ಯವನ್ನು ಹಳ್ಳಕ್ಕೆ ಸುರಿಯುತ್ತಿರುವುದರಿಂದ ಮಲೀನವಾಗಿದೆ. ಕೊರನಾ ವೈರಸ್ ಭೀತಿ ಮಧ್ಯೆ ಹಕ್ಕಿ ಜ್ವರ, ಡೆಂಘೀ ಜ್ವರ ಹರಡುತ್ತಿದ್ದು, ನಗರಸಭೆ ಸ್ವಚ್ಚತೆಗೆ ಆದ್ಯತೆ ಕೊಡುತ್ತಿಲ್ಲ. ನಗರದ ಬಹುತೇಕ ವಾರ್ಡ್, ರಸ್ತೆಗಳು ಧೂಳು ಮತ್ತು ಕಸದಿಂದ ಕೂಡಿವೆ. ಆರೋಗ್ಯ ದೃಷ್ಟಿಯಿಂದ ನಗರಸಭೆಯ ನಿರ್ಲಕ್ಷ್ಯ ಜನರಿಗೆ ಶಾಪವಾಗಿ ಪರಿಣಮಿಸಿದೆ.
ಪೌರಕಾರ್ಮಿಕರ ಕೊರತೆ ಮತ್ತು ಕೆಲಸದ ಒತ್ತಡದಿಂದ ರಸ್ತೆ ಮತ್ತು ಸ್ವಚ್ಛತಾ ಕಾರ್ಯ ವಿಳಂಬವಾ ಗುತ್ತಿದೆ. ಮಾಂಸ ಮತ್ತು ತರಕಾರಿ ಮಾರ್ಕೆಟ್ನಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಗಾಂಧಿ ವೃತ್ತದ ಬಳಿ ಹಾಕಿರುವ ಕಸವನ್ನು ಕೂಡಲೇ ಬೇರೆಡೆಗೆ ಸಾಗಿಸಲಾಗುತ್ತದೆ. ಸ್ವಚ್ಛತೆ ಕಾಪಾಡದ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಪರವಾನಗಿ ರದ್ದುಪಡಿಸಲಾಗುತ್ತದೆ.
ಶೇಖರಪ್ಪ, ಪೌರಾಯುಕ್ತ
ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ