ಈ ವರ್ಷವೂ 28 ಕೋಟಿ ಅನುದಾನ ವಾಪಸ್‌!


Team Udayavani, Mar 29, 2021, 5:28 PM IST

ಈ ವರ್ಷವೂ 28 ಕೋಟಿ ಅನುದಾನ ವಾಪಸ್‌!

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ವ್ಯಾಪ್ತಿಯ ರೈತರಿಗೆ ಪ್ರತ್ಯಕ್ಷ ಪರೋಕ್ಷವಾಗಿ ನೆರವಾಗಲು ರಾಜ್ಯ ಸರಕಾರ ತನ್ನ ಬಜೆಟ್‌ನಲ್ಲಿ ಕೋಟ್ಯಂತರ ರೂ. ಗಳನ್ನು ಮೀಸಲಿಡುತ್ತದೆ. ಅಧಿಕಾರಿಗಳು-ಜನಪ್ರತಿನಿಧಿಗಳ ನಿರ್ಲಕ್ಷ್ಯದ ಫಲವಾಗಿ ಕಳೆದ 6 ವರ್ಷಗಳಿಂದ ಕ್ರಿಯಾಯೋಜನೆ ಇಲ್ಲದೇ ಅನುದಾನ ವಾಪಸ್‌ ಹೋಗುತ್ತಿದೆ.

2020-21 ನೇ ಸಾಲಿನಲ್ಲಿ ಕಾಡಾ ಪ್ರದೇಶದ ವ್ಯಾಪ್ತಿಯಲ್ಲಿ ಖರ್ಚು ಮಾಡಲು ರಾಜ್ಯ ಸರಕಾರ28 ಕೋಟಿ ರೂ.ಗಳನ್ನು ಮೀಸಲಿರಿಸಿದ್ದರೂಅದನ್ನು ಖರ್ಚು ಮಾಡದೇ ನಿರ್ಲಕ್ಷé ವಹಿಸಿದ್ದರಿಂದ ಮಾರ್ಚ್‌ 31 ನಂತರ ಈಹಣವನ್ನು ಸರಕಾರ ವಾಪಸ್‌ ಪಡೆಯಲಿದೆ. ತುಂಗಭದ್ರಾ ಕಾಡಾ ವ್ಯಾಪ್ತಿಯ ರಾಯಚೂರು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರಿಗೆ ಮತ್ತು ಪರೋಕ್ಷವಾಗಿ ಕೃಷಿಗೆನೆರವಾಗಲು ಸರಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುತ್ತದೆ. ಈ ಹಣವನ್ನುಕಾಡಾ ಅಧಿಕಾರಿಗಳು ಕ್ರಿಯಾಯೋಜನೆ ಸಿದ್ಧ ಮಾಡಿ ಹಣ ಖರ್ಚು ಮಾಡಬೇಕಾಗುತ್ತದೆ.

ಪ್ರಸಕ್ತ ವರ್ಷ ಸರಕಾರ 28 ಕೋಟಿ ರೂ.ಗಳನ್ನು ತುಂಗಭದ್ರಾ ಕಾಡಾಗೆ ಮಂಜೂರು ಮಾಡಿತ್ತು.ಸಿಬ್ಬಂದಿ ಕೊರತೆ ನೆಪದಲ್ಲಿ ಇಲ್ಲಿಯ ಆಡಳಿತಾಧಿಕಾರಿಗಳು ಕ್ರಿಯಾ ಯೋಜನೆ ತಯಾರು ಮಾಡದೇ ಇರುವ ಕಾರಣ ಹಣ ಮರಳಿಹೋಗುತ್ತಿದೆ. ಈ ಕುರಿತು ಅಚ್ಚುಕಟ್ಟು ವ್ಯಾಪ್ತಿಯ ಸಂಸದರು ಶಾಸಕರು-ಸಚಿವರು-ವಿಧಾನ ಪರಿಷತ್‌ ಸದಸ್ಯರಿಗೆ ಮಾಹಿತಿ ಇದ್ದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಪ್ರಕ್ರಿಯೆ ಕಳೆದ ಆರು ವರ್ಷಗಳಿಂದ ನಡೆಯುತ್ತಿದ್ದರೂ ಈ ಭಾಗದರೈತರು ನೀರು ಬಳಕೆದಾರರ ಸಂಘದವರು ಚಕಾರವೆತ್ತುತ್ತಿಲ್ಲ.

ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಹೊಲ ಗದ್ದೆಗಳಿಗೆ ಹೋಗಲು ರಸ್ತೆ,ಗೋಡೌನ್‌, ನೀರು ಬಳಕೆದಾರರಸಹಕಾರಿ ಸಂಘದ ಕಟ್ಟಡ ನಿರ್ಮಾಣ ರಿಪೇರಿ, ಬೆಳೆ ಒಕ್ಕಲು ಕಣ,ಉಪಕಾಲುವೆಗಳ ಜಂಗಲ್‌ ಕಟಿಂಗ್‌,ಸಮಗ್ರ ಬೆಳೆ ಪದ್ಧತಿ ವೈಜ್ಞಾನಿಕ ಕೃಷಿಮಾಡಲು ರೈತರಿಗೆ ತರಬೇತಿ ಮತ್ತುಸವಳು ಮತ್ತು ಬರಡು ಭೂಮಿಯನ್ನು ಫಲವತ್ತತೆಮಾಡುವ ಯೋಜನೆ ಮತ್ತು ಎಸ್ಸಿ-ಎಸ್ಟಿ ಕೆಟಗರಿಒಂದರಲ್ಲಿ ಬರುವ ರೈತರಿಗೆ ಸಾಮೂಹಿಕ ಪಂಪ್‌ಸೆಟ್‌ ಯೋಜನೆ ಮಾಡಿ ಕೊಳ್ಳಲು ಹಣ ನೀಡಲುಕಾಡಾ ಯೋಜನೆಯಲ್ಲಿ ಅವಕಾಶವಿದೆ.ರಾಜ್ಯ ಸರಕಾರ ಕೊಟ್ಟ ಹಣವನ್ನುಪ್ರಸಕ್ತ ಹಣಕಾಸು ಯೋಜನೆಯಲ್ಲಿಖರ್ಚು ಮಾಡದಿದ್ದರೆ ಪ್ರತಿ ವರ್ಷ ಶೇ.25ಅನುದಾನ ಕಡಿತವಾಗುತ್ತದೆ. ಕಳೆದ ವರ್ಷ33 ಕೋಟಿ ರೂ. ಹಣ ಸರಕಾರಕ್ಕೆ ವಾಪಸ್‌ಹೋಗಿದೆ. ಪ್ರಸಕ್ತ ಸಾಲಿನಲ್ಲಿ 7ಕೋಟಿ ರೂ. ಕಡಿತವಾಗಿ 28 ಕೋಟಿರೂ. ಹಣ ತುಂಗಭದ್ರಾ ಕಾಡಾಗೆ ಮಂಜೂರಿಯಾಗಿದ್ದರೂ ಅಧಿಕಾರಿಗಳು ಸೂಕ್ತ ಕ್ರಿಯಾ ಯೋಜನೆಮಾಡಿ ಹಣ ಹಂಚಿಕೆ ಮಾಡದೇಇರುವುದರಿಂದ ಪುನಃ ಅನುದಾನ ವಾಪಸ್‌ ಹೋಗುತ್ತಿದೆ.

ಸಿಬ್ಬಂದಿ ಕೊರತೆ: ತುಂಗಭದ್ರಾ ಕಾಡಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು 291 ಜನ ಅಧಿಕಾರಗಳು ಸೇರಿ ಸಿಬ್ಬಂದಿ ವರ್ಗದವರ ಅವಶ್ಯವಿದ್ದು, ಕಳೆದ 10 ವರ್ಷಗಳಿಂದ 98 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿ ದೊಡ್ಡದಿರುವುದರಿಂದ ಕೇವಲ 98ಜನರಿಂದ ಕಾರ್ಯ ಮಾಡಲು ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ಕಳೆದ ಹತ್ತು ವರ್ಷಗಳಿಂದ ತುಂಗಭದ್ರಾ ಕಾಡಾ ಕಚೇರಿಯ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಆಡಳಿತಾಧಿಕಾರಿಗಳು

ನಿವೃತ್ತಿಗೆ 6 ತಿಂಗಳು ಅವಧಿ ಇರುತ್ತದೆ. 6 ತಿಂಗಳ ಅವಧಿ ಇರುವ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಹಣಕಾಸು ಜವಾಬ್ದಾರಿತೆಗೆದುಕೊಳ್ಳಲು ಹಿಂದೇಟು ಹಾಕುವುದುಸಹಜವಾಗಿದೆ. ಪ್ರಸ್ತುತ ಇರುವ ಆಡಳಿತಾಧಿಕಾರಿ ಸಿಬ್ಬಂದಿ ಹಾಗೂ ಕ್ರಿಯಾಯೋಜನೆ ನೆಪದಲ್ಲಿ 28 ಕೋಟಿ ರೂ. ಹಣ ವಾಪಸ್‌ ಹೋಗಲು ಕಾರಣರಾಗಿದ್ದಾರೆ ಎನ್ನಲಾಗುತ್ತಿದೆ.

ಕೃಷಿ-ರೈತರ ಅಭಿವೃದ್ಧಿಗಾಗಿ ಸರಕಾರ ಪ್ರತಿವರ್ಷ ರಾಜ್ಯದ ಇತರೆ 5 ಕಾಡಾಗಳಿಗೆ ಕೊಟ್ಟಂತೆ ತುಂಗಭದ್ರಾ ಕಾಡಾಕ್ಕೆ ಹಣ ಮೀಸಲಿರಿಸುತ್ತದೆ. ಕಳೆದ 6 ವರ್ಷಗಳಿಂದ ಅಧಿಕಾರಿಗಳ ಕುಂಟು ನೆಪದಿಂದ ನೂರು ಕೋಟಿ ರೂ.ಗೂ ಅ ಧಿಕ ಹಣ ಸರಕಾರಕ್ಕೆ ಮರಳಿ ಹೋಗಿದೆ. ರೈತರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ಹಣ ಖರ್ಚು ಮಾಡಲು ಅವಕಾಶವಿದ್ದು, ಸದ್ಯ 28 ಕೋಟಿ ರೂ.ಗಳನ್ನು ವಾಪಸ್‌ ಕಳಿಸಲು ಸಿದ್ಧತೆ ನಡೆದಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ಕ್ರಿಮಿನಾಶಕ ರಸಗೊಬ್ಬರ ಬಳಕೆಯಿಂದ ಭೂಮಿ ಸವಳು ಮತ್ತು ಬರಡಾಗಿದ್ದು ರೈತರಿಗೆ ಸಮಗ್ರ ಕೃಷಿ ಸೇರಿ ಹಲವಾರು ಯೋಜನೆ ತರಬೇತಿ ನೀಡಲು ಮತ್ತು ಎಸ್ಸಿ-ಎಸ್ಟಿ ಹಿಂದುಳಿದ ವರ್ಗದ ರೈತರು ಸಾಮೂಹಿಕ ಪಂಪ್‌ಸೆಟ್‌, ಕಾಲುವೆ ದುರಸ್ತಿ ಗೋಡೌನ್‌ ನಿರ್ಮಾಣಕ್ಕೆ ಕ್ರಿಯಾಯೋಜನೆ ಮೂಲಕ ಹಣ ಖರ್ಚು ಮಾಡದೇ ಆಡಳಿತಾಧಿಕಾರಿಗಳ ನಿರ್ಲಕ್ಷéದಿಂದ ಹಣ ವಾಪಸ್‌ ಹೋಗುತ್ತಿದೆ. ಸಿಬ್ಬಂದಿ ಕೊರತೆ ಇದ್ದರೆ ಜನಪ್ರತಿನಿಧಿಗಳಿಗೆ ಮನವಿ ಮಾಡುವ ಮೂಲಕ ಹುದ್ದೆಗಳ ಭರ್ತಿ ಅಥವಾ ನಿಯೋಜನೆ ಪಡೆದು ಹಣ ಖರ್ಚು ಮಾಡಲು ಅವಕಾಶವಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ಹಣ ವಾಪಸ್‌ ಹೋಗುತ್ತಿದೆ.- ಎಂ.ಆರ್‌.ವೆಂಕಟೇಶ, ತುಂಗಭದ್ರಾ ಉಳಿಸಿ ಆಂದೋಲನ ಸಂಚಾಲಕರು

ಸರಕಾರ ಅನುದಾನ ಕೊಟ್ಟರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಹಣವಾಪಸ್‌ ಹೋಗುತ್ತಿದೆ. ಸಿಬ್ಬಂದಿ ಕೊರತೆ ಸೇರಿ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣವಾಗಿದೆ. ಪ್ರಸಕ್ತ ಸಾಲಿನ 28 ಕೋಟಿ ರೂ. ಅನುದಾನ ವಾಪಸ್‌ ಹೋಗಿರುವುದು ಸತ್ಯ. ಆಡಳಿತಾಧಿಕಾರಿ ಇದಕ್ಕೆ ನೇರ ಹೊಣೆ ಯಾಗಿದ್ದಾರೆ. ಈ ಕುರಿತು ಸರಕಾರದ ಗಮನಕ್ಕೆ ತರಲಾಗುತ್ತದೆ. ಮುಂದಿನ ವರ್ಷ 100 ಕಾಡಾ ಅನುದಾನ ತಂದು ಮುಂಚಿತವಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅರಿವು ಮೂಡಿಸಿ ಅನುದಾನ ಖರ್ಚು ಮಾಡಲಾಗುತ್ತದೆ. ಹಾಲಿ ಇರುವ ಆಡಳಿತಾಧಿಕಾರಿ ಸರಿಯಾಗಿ ಸ್ಪಂದನೆ ಇಲ್ಲದ ಕಾರಣ ವರ್ಗ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲಾಗುತ್ತದೆ. ವರ್ಗವಾಗಿದ್ದರೂ ಸರಕಾರ ಮರಳಿ ತುಂಗಭದ್ರಾ ಕಾಡಾಕ್ಕೆ ಹಾಲಿ ಆಡಳಿತಾಧಿಕಾರಿಯನ್ನು ನಿಯೋಜಿಸಿದ್ದು, ಸದ್ಯ ಇರುವ ಆಡಳಿತಾಧಿಕಾರಿ ಬದಲಿಸಿ ಬೇರೆಯವರನ್ನು ನಿಯೋಜಿಸುವಂತೆ ಶೀಘ್ರ ಸಿಎಂ ಅವರಿಗೆ ಕೋರಲಾಗುತ್ತದೆ.  -ತಿಪ್ಪೇರುದ್ರಸ್ವಾಮಿ, ಅಧ್ಯಕ್ಷರು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ

 

-ಕೆ.ನಿಂಗಜ್ಜ

ಟಾಪ್ ನ್ಯೂಸ್

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

ಸಂಸದ ಸಂಗಣ್ಣ ಕರಡಿ ಮನೆಗೆ ಲಕ್ಷ್ಮಣ ಸವದಿ ಭೇಟಿ

Koppal ಸಂಸದ ಸಂಗಣ್ಣ ಕರಡಿ ಮನೆಗೆ ಲಕ್ಷ್ಮಣ ಸವದಿ ಭೇಟಿ

1-qweqw-ew

High Court ಆದೇಶದಂತೆ ಏ.17,18 ರಂದು ನವವೃಂದಾವನಗಡ್ಡಿಯಲ್ಲಿ ಆರಾಧನೆ

1-waddasd

Gangavati; ಈದ್ಗಾ ಮೈದಾನದಲ್ಲಿ ರಾಜಕೀಯ: ಅನ್ಸಾರಿ-ಗಾಲಿ ರೆಡ್ಡಿ ಸಮರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.