”ಕಿಡ್ನ್ಯಾಪ್ ಮಾಡಿ ಮುಖಕ್ಕೆ ಸ್ಪ್ರೇ ಹೊಡೆದರು”: ಗಂಗಾವತಿ ನಗರಸಭೆ ಸದಸ್ಯನ ಹೇಳಿಕೆ
Team Udayavani, Oct 30, 2020, 12:45 PM IST
ಅಪಹರಣವಾಗಿದ್ದ ಮನೋಹರ ಸ್ವಾಮಿ ಮತ್ತು ಅಪಹರಣಕ್ಕೆ ಬಳಸಿದ ಕಾರು
ಕೊಪ್ಪಳ: ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮುಖಕ್ಕೆ ಸ್ಪ್ರೇ ಮಾಡಿ ಏಳು ಜನರ ತಂಡವು ಎರಡು ವಾಹನದಲ್ಲಿ ಕಿಡ್ನ್ಯಾಪ್ ಮಾಡಿರುವುದಾಗಿ ಮನೋಹರ ಸ್ವಾಮಿ ಅವರು ಹೇಳಿಕೊಂಡಿದ್ದಾರೆ.
ನಿನ್ನೆ ರಾತ್ರಿ ನಕ್ಷತ್ರ ಲಾಡ್ಜ್ ನಲ್ಲಿ ಕುಳಿತಿದ್ದೆವು. ರಾತ್ರಿ ಹತ್ತು ಗಂಟೆ ಸುಮಾರಿಗೆ ಕೆಲವರು ನನ್ನನ್ನ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಹೊರಗೆ ಕರೆದುಕೊಂಡು ಬಂದು ಮುಖಕ್ಕೆ ಸ್ಪ್ರೇ ಹೊಡೆದರು. ಹಾಗಾಗಿ ನನಗೆ ಪ್ರತ್ಞೆ ತಪ್ಪಿದೆ. ನನಗೆ ಎಚ್ಚರವಾದಾಗ ನನ್ನನ್ನ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ರಾತ್ರಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ನನ್ನ ಬದಲಾಯಿಸಿದ್ದರು ಎಂದು ಮನೋಹರ ಸ್ವಾಮಿ ಹೇಳಿಕೊಂಡಿದ್ದಾರೆ.
ಗುರುವಾರ ರಾತ್ರಿ ಗಂಗಾವತಿಯಲ್ಲಿ ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ ರನ್ನು ಏಳು ಮಂದಿಯ ತಂಡ ಅಪಹರಿಸಿತ್ತು. ಬಿಜೆಪಿ ಸದಸ್ಯರಿಂದ ಕಿಡ್ನಾಪ್ ಮಾಡಲಾಗಿದೆ ಎಂದು ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಚುನಾವಣೆ ಹಿನ್ನಲೆಯಲ್ಲಿ ಗಂಗಾವತಿ ಕೈ ಸದಸ್ಯನ ಕಿಡ್ನಾಪ್ ಕೇಸ್: ಕಾರವಾರದಲ್ಲಿ ಆರೋಪಿಗಳ ಬಂಧನ
ಈ ಸಂಬಂಧ ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಲಿಯಾಳ ಬಳಿ ಬಂಧಿಸಲಾಗಿದೆ. ಅನುಮಾನಸ್ಪದವಾಗಿ ಒಡಾಡುತ್ತಿದ್ದ ವ್ಯಾನ್ ಅನ್ನು ಪರಿಶೀಲಿಸಿದಾಗ ಕಿಡ್ನಾಪ್ ಪ್ರಕರಣ ಬಯಲಾಗಿದ್ದು, ಮೂರು ಜನ ಅಪಹರಣಕಾರರನ್ನು ಕಾರವಾರದ ಹಲಿಯಾಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್