ಗಂಗಾವತಿ: ನವಬೃಂದಾವನ ಕ್ಷೇತ್ರದಲ್ಲಿ ಯತಿದ್ವಾದಶಿ ಆಚರಣೆ
Team Udayavani, Sep 22, 2022, 2:19 PM IST
ಗಂಗಾವತಿ: ತಾಲೂಕಿನ ಆನೆಗೊಂದಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಯತಿದ್ವಾದಶಿ ಪ್ರಯುಕ್ತ ನವಬೃಂದಾವನ ಕ್ಷೇತ್ರದಲ್ಲಿ ವಿಶೇಷವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ನವಬೃಂದಾವನ ಕ್ಷೇತ್ರದಲ್ಲಿನ ಶ್ರೀಪದ್ಮನಾಭ ತೀರ್ಥರ, ಶ್ರೀಜಯತೀರ್ಥರ ಮೂಲ ವೃಂದಾವನ ಸೇರಿದಂತೆ ಎಲ್ಲಾ ಒಂಬತ್ತು ವೃಂದಾವನಕ್ಕೆ ವಿಶೇಷವಾಗಿ ನಿರ್ಮಲ್ಯ, ಪಂಚಾಮೃತಾಭಿಷೇಕ, ವಸ್ತ್ರ ಅಲಂಕಾರ, ಹೂವಿನ ಅಲಂಕಾರ, ಹಸ್ತೋದಕ ನೆರವೇರಿಸಲಾಯಿತು. ನಂತರ ಬ್ರಾಹ್ಮಣರ ಅಲಂಕಾರ ಜರಗಿತು. ಪಂಡಿತರಿಂದ ಉಪನ್ಯಾಸ, ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಆನೆಗೊಂದಿ ಮಠದ ವಿಚಾರಣಕರ್ತ ಡಾ.ಮಧುಸೂದನ, ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಪಂಡಿತರಾದ ಸುಳಾದಿ ಹನುಮೇಶ್ ಆಚಾರ್ಯ, ಸಂತೆಕೆಲೂರ್ ಶೇಷಗಿರಿರಾಜ, ಬಾಲ ಗೋಪಾಲದಾಸರು, ಸಿಂಧನೂರು ದೇಸಾಯಿ ರಾಘವೇಂದ್ರ, ಅನಂತ ಪದ್ಮನಾಭ, ನರಸಿಂಹ ಆಚಾರ್ಯ, ವಿಜಿಯಾಚಾರ್ಯ, ಸ್ವಾಮಿರಾವ್ ಸಂತೆಕೆಲೂರ್, ಗುರುರಾಜ್, ರಾಮಾಚಾರ್ಯ, ವೆಂಕಟೇಶ್ ಜೋಷಿ, ಶ್ರೀನಿವಾಸ ಆಚಾರ್ಯ ಹಾಗೂ ಸುತ್ತಮುತ್ತಲಿನ ಭಕ್ತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ