ಗಂಗಾವತಿಗೆ 11 ತಾಪಂ ಕ್ಷೇತ್ರ ಸೃಷ್ಟಿ


Team Udayavani, Mar 27, 2021, 4:36 PM IST

ಗಂಗಾವತಿಗೆ 11 ತಾಪಂ ಕ್ಷೇತ್ರ ಸೃಷ್ಟಿ

ಗಂಗಾವತಿ: ಅಖಂಡ ಗಂಗಾವತಿ ತಾಲೂಕು ಒಡೆದ ನಂತರ ಗಂಗಾವತಿ ತಾಲೂಕು ವ್ಯಾಪ್ತಿ ಕಡಿಮೆಯಾಗಿದೆ. ಅಖಂಡ ಗಂಗಾವತಿಯಲ್ಲಿಒಟ್ಟು 7 ಜಿಪಂ, 31 ತಾಪಂ ಕ್ಷೇತ್ರಗಳಿದ್ದವು. ಆದರೆ ಕಾರಟಗಿ ಹಾಗೂ ಕನಕಗಿರಿ ಪ್ರತ್ಯೇಕ ತಾಲೂಕು ರಚನೆ ನಂತರ ಆಯಾ ತಾಲೂಕಿನಲ್ಲಿ ತಾಪಂ ಹಾಗೂ ಜಿಪಂಗಳು ರಚನೆ ಮಾಡಲಾಗಿದ್ದು,ಗಂಗಾವತಿ ತಾಲೂಕಿನಲ್ಲಿ ಅಭಿವೃದ್ಧಿಗೆ ಪೂರಕವಾಗಿ ನಾಲ್ಕು ಜಿಪಂ, 11 ತಾಪಂ ಸ್ಥಾನಗಳನ್ನು ರಚನೆ ಮಾಡಲಾಗಿದೆ.

ನೂತನವಾಗಿ ರಚನೆಯಾದ ಜಿಪಂಕ್ಷೇತ್ರಗಳ ಜನಸಂಖ್ಯೆಯನ್ನು ಮಿತಗೊಳಿಸಿಕ್ಷೇತ್ರ ರಚನೆ ಮಾಡಲಾಗಿದ್ದು, ಸಣ್ಣಕ್ಷೇತ್ರಗಳಿಂದ ಪ್ರಗತಿಯ ವೇಗ ಹೆಚ್ಚಾಗುತ್ತದೆ ಎಂದು ಪರೋಕ್ಷವಾಗಿತಿಳಿಸಲಾಗಿದೆ. ನೂತನವಾಗಿ ಆನೆಗೊಂದಿ, ವೆಂಕಟಗಿರಿ, ಮರಳಿ,ಹೇರೂರು ಜಿಪಂ ಕ್ಷೇತ್ರಗಳಾಗಿವೆ.ಆನೆಗೊಂದಿ, ಚಿಕ್ಕಜಂತಗಲ್‌, ಜಂಗಮರಕಲ್ಗುಡಿ, ಶ್ರೀರಾಮನಗರ,  ಹೇರೂರು, ಮರಳಿ, ವಡ್ಡರಹಟ್ಟಿ, ಬಸಾಪಟ್ಟಣ, ಕೇಸರಟ್ಟಿ,ವೆಂಕಟಗಿರಿ ಮತ್ತು ಹಿರೇಬೆಣಕಲ್‌ತಾಪಂ ಕ್ಷೇತ್ರಗಳಾಗಿವೆ. ಪ್ರಸ್ತುತ ಎರಡು ತಾಪಂಗಳು ಕಡಿಮೆಯಾಗಿವೆ.

ಆನೆಗೊಂದಿ ಜಿಪಂ ಕ್ಷೇತ್ರದಲ್ಲಿಸಾಣಾಪೂರ, ಆನೆಗೊಂದಿ,ಮಲ್ಲಾಪೂರ, ಸಂಗಾಪೂರಚಿಕ್ಕಜಂತಗಲ್‌ ಗ್ರಾಪಂಗಳು, ವೆಂಕಟಗಿರಿಜಿಪಂ ಕ್ಷೇತ್ರದಲ್ಲಿ ಬಸಾಪಟ್ಟಣ, ವೆಂಕಟಗಿರಿ,ಆಗೋಲಿ ಮತ್ತು ಚಿಕ್ಕಬೆಣಕಲ್‌ ಗ್ರಾಪಂಗಳು,ಹೇರೂರು ಕ್ಷೇತ್ರದಲ್ಲಿ ವಡ್ಡರಹಟ್ಟಿ, ಹೇರೂರು,ಹಣವಾಳ ಮತ್ತು ಕೇಸರಟ್ಟಿ ಗ್ರಾಪಂಗಳು, ಮರಳಿಜಿಪಂ ಕ್ಷೇತ್ರದಲ್ಲಿ ಢಣಾಪೂರ, ಜಂಗಮರ ಕಲ್ಗುಡಿ,ಮರಳಿ ಶ್ರೀರಾಮನಗರ ಮತ್ತು ಹೊಸ್ಕೇರಾ ಗ್ರಾಪಂಗಳು ಬರುತ್ತವೆ.

ಮೀಸಲಾತಿ ಕರಾಮತ್ತು: ತಾಲೂಕಿನಲ್ಲಿ ಪ್ರಸ್ತುತ ರಚನೆಯಾದ ನಾಲ್ಕು ಜಿಪಂ ಕ್ಷೇತ್ರಗಳ ಪೈಕಿಆನೆಗೊಂದಿ, ವೆಂಕಟಗಿರಿ ಕ್ಷೇತ್ರಗಳು ಈ ಬಾರಿಸಾಮಾನ್ಯ ಅಥವಾ ಬಿಸಿಎ ಕೆಟಗರಿ ಬರುವ ಸಾಧ್ಯತೆಇದ್ದು ಮರಳಿ ಹೇರೂರು ಎಸ್ಸಿ, ಎಸ್ಟಿ ಪುರುಷಅಥವಾ ಮಹಿಳಾ ಮೀಸಲಾತಿ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಈ ಮಧ್ಯೆ ಆನೆಗೊಂದಿ ಮತ್ತುವೆಂಕಟಗಿರಿ ಜಿಪಂ ಕ್ಷೇತ್ರದಲ್ಲಿ ಮೀಸಲಾತಿಯ ಅನುಕೂಲವಾದರೆ ಶಾಸಕ ಪರಣ್ಣ ಮುನವಳ್ಳಿಪುತ್ರ ಸಾಗರ ಮುನವಳ್ಳಿ, ಮಾಜಿ ಸಚಿವರಾದ ಇಕ್ಬಾಲ್‌ ಅನ್ಸಾರಿ ಪುತ್ರ ಇಮ್ತಿಯಾಜ್‌ ಅನ್ಸಾರಿ ಮತ್ತು ಮಲ್ಲಿಕಾರ್ಜುನ ನಾಗಪ್ಪ ಪುತ್ರ ಸರ್ವೇಶಮಾಂತಗೊಂಡ ಮತ್ತು ಶ್ರೀರಂಗದೇವರಾಯಲು ಕುಟುಂಬದ ಸದಸ್ಯರೊಬ್ಬರು ತಮ್ಮ ತಮ್ಮ ಪಕ್ಷದಿಂದ ಸ್ಪರ್ಧೆ ಮಾಡಲು ಈಗಾಗಲೇ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಗಳ ಮೀಸಲಾತಿಯನ್ನು ತಮಗೆ ಅನುಕೂಲವಾಗುವಂತೆ ಮಾಡಿಸಿಕೊಂಡುಬರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕೆಲ ಕ್ಷೇತ್ರಗಳಲ್ಲಿ ಜಿಪಂ ಮಾಜಿ ಸದಸ್ಯರು ತಮ್ಮ ಮಕ್ಕಳಿಗೆ ಅವಕಾಶ ಕಲ್ಪಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಸ್ಥಳೀಯರು ಸ್ಪರ್ಧಿಸಲಿ: ಶಾಸಕರು ಮತ್ತು ಮಾಜಿಸಚಿವರ ಮಕ್ಕಳು ಸ್ಪರ್ಧೆ ಮಾಡುವ ಮೂಲಕ ಸ್ಥಳೀಯರಿಗೆ ಅವಕಾಶವಿಲ್ಲದಂತಾಗುತ್ತಿದ್ದು,ನಮ್ಮೂರಿನವರೇ ಸ್ಪರ್ಧೆ ಮಾಡಿದರೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲುಸಾಧ್ಯವಾಗುತ್ತದೆ. ವಿವಿಧ ಪಕ್ಷಗಳ ಜನಪ್ರತಿನಿ ಧಿಗಳ ಮಕ್ಕಳೇ ಸ್ಪರ್ಧೆ ಮಾಡಿದರೆ ಕಾರ್ಯಕರ್ತರಿಗೆ ಅವಕಾಶವಿಲ್ಲದಂತಾಗುತ್ತದೆ.

 

-ಕೆ. ನಿಂಗಜ್ಜ

ಟಾಪ್ ನ್ಯೂಸ್

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.