ಹೇಮಗುಡ್ಡ ದಸರಾ: ಆನೆ ಮೇಲೆ ಅಂಬಾರಿ ದುರ್ಗಾಪರಮೇಶ್ವರಿ ಮೆರವಣಿಗೆ, ರಂಗು ಹೆಚ್ಚಿಸಿದ ಕಲಾ ತಂಡ
Team Udayavani, Oct 5, 2022, 9:34 AM IST
ಗಂಗಾವತಿ :ನಾಡಹಬ್ಬ ದಸರಾ ನವರಾತ್ರಿ ಮಹೋತ್ಸವದ ನಿಮಿತ್ತ ತಾಲ್ಲೂಕಿನ ಹೇಮಗುಡ್ಡದಲ್ಲಿ ಆನೆಯ ಮೇಲೆ ಅಂಬಾರಿ ದುರ್ಗಾಪರಮೇಶ್ವರಿಯ ಮೆರವಣಿಗೆ ವೈಭವ ಮತ್ತು ಶ್ರದ್ಧೆಯಿಂದ ಜರುಗಿತು ಮೆರವಣಿಗೆಗೆ ಮಾಜಿ ಸಂಸದ ಹಿರಿಯ ಮುಖಂಡ ಎಚ್ ಜಿ ರಾಮುಲು ,ಸಂಸದ ಕರಡಿ ಸಂಗಣ್ಣ , ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಹೇಮಗುಡ್ಡದಲ್ಲಿ 9ದಿನಗಳ ಕಾಲ ಶ್ರೀ ದೇವಿಯ ಪುರಾಣ ನಡೆದು ಬುಧವಾರ ಬೆಳಿಗ್ಗೆ ಉಚಿತ ಸಾಮೂಹಿಕ ಜರುಗಿ ಸಂಜೆ ಆನೆಯ ಮೇಲೆ ಅಂಬಾರಿಯಲ್ಲಿ ದುರ್ಗಾಪರಮೇಶ್ವರಿಯ ನ ಮೆರವಣಿಗೆ ಮಾಡಲಾಗುತ್ತದೆ .ಮೆರವಣಿಗೆಯಲ್ಲಿ ನಾಡಿನ ವಿವಿಧ ಜನಪದ ಕಲಾತಂಡಗಳು ಮತ್ತು ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯ ಸೌರಭವನ್ನು ಹೆಚ್ಚಿಸಿದವು.
ದಸರಾ ಆನೆ ಅಂಬಾರಿ ಮೆರವಣಿಗೆ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಿಂದ 3ಕಿಲೋಮೀಟರ್ ಸಾಗಿ ಬಸವಣ್ಣ ಗುಡಿ ಹತ್ತಿರ ಕೊನೆಗೊಂಡಿತು .
ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹೇಮಗುಡ್ಡ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು .
ಈ ಸಂದರ್ಭದಲ್ಲಿ ಮಾಜಿ ಸಂಸದ ಎಚ್ .ಜಿ. ರಾಮುಲು,ಮಾಜಿ ಸಚಿವ ಶಿವರಾಜ್ ತಂಗಡಗಿ , ಸಂಸದ ಕರಡಿ ಸಂಗಣ್ಣ ,ಶಾಸಕ ಪರಣ್ಣ ಮುನವಳ್ಳಿ ಹಾಗೂ ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ,ಸಿಂಗನಾಳ ವಿರುಪಾಕ್ಷಪ್ಪ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕಿನ ಜನತೆ ಹೇಮಗುಡ್ಡದ ಸಭೆಯಲ್ಲಿ ಪಾಲ್ಗೊಂಡಿದ್ದರು .
ಇದನ್ನೂ ಓದಿ : ಎಲ್ಇಡಿ ಟಿವಿ ಸ್ಫೋಟಗೊಂಡು ಬಾಲಕ ಸಾವು, ಸ್ಫೋಟದ ಭೀಕರತೆಗೆ ಮನೆಯ ಗೋಡೆಯೇ ಛಿದ್ರ