ಭೈರಾಪೂರ ಬ್ಯಾರೇಜ್ಗೆ ಗವಿಶ್ರೀ ಭೇಟಿ
Team Udayavani, Feb 18, 2020, 3:33 PM IST
ಕೊಪ್ಪಳ: ನಗರ ಸಮೀಪದ 26 ಕಿಲೋ ಮೀಟರ್ ಹಳ್ಳ ಸ್ವಚ್ಛ ಮಾಡಿ ದೇಶದ ಗಮನ ಸೆಳೆದ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಾಲೂಕಿನ ಭೈರಾಪೂರ ಗ್ರಾಮ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್ ಸ್ಥಳಕ್ಕೆ ಭೇಟಿ ನೀಡಿ ಹೂಳೆತ್ತುವ ಪ್ರಸ್ತಾಪ ಮಾಡಿದ್ದಾರೆ.
ತಾಲೂಕಿನ ಭೈರಾಪೂರ ಗ್ರಾಮಕ್ಕೆ ರವಿವಾರ ಸಂಜೆ ಸದ್ದಿಲ್ಲದೇ ತೆರಳಿದ ಶ್ರೀಗಳು ಹೂಳು ತುಂಬಿಕೊಂಡಿರುವ ಬ್ರಿಜ್ ಕಂ ಬ್ಯಾರೇಜ್ನ್ನು ವೀಕ್ಷಣೆ ಮಾಡಿದರು. ಬ್ಯಾರೇಜ್ ನಿರ್ಮಾಣ ಮಾಡಿ 4 ವರ್ಷ ಗತಿಸಿದ್ದು ಎಲ್ಲ ಗೇಟ್ಗಳು ಕಿತ್ತು ಹೋಗಿವೆ. ಸೇತುವೆಯಲ್ಲಿ ಹೂಳು ತುಂಬಿದ್ದರಿಂದ ನೀರು ಸಂಗ್ರಹ ಆಗುತ್ತಿರಲಿಲ್ಲ. ಇದರ ಮಾಹಿತಿ ಅರಿತ ಶ್ರೀಗಳು ಸದ್ದಿಲ್ಲದೇ ಗ್ರಾಮಕ್ಕೆ ತೆರಳಿದ್ದರು. ಶ್ರೀಗಳು ಊರಿಗೆ ಆಗಮಿಸಿದ್ದನ್ನು ನೋಡಿದ ಜನ ನಮ್ಮೂರಿಗೆ ದೇವರೇ ಬಂದರೆಂದು ಎಲ್ಲೆಡೆಯೂ ಅವರಿಗೆ ಸ್ವಾಗತ ದೊರೆಯಿತು. ಆದರೆ ನೇರ ಸೇತುವೆಯ ಸ್ಥಳಕ್ಕೆ ತೆರಳಿದ ಶ್ರೀಗಳು ಹೂಳು ತುಂಬಿಕೊಂಡಿರುವುದನ್ನು, ಗೇಟ್ ಇರದೇ ಇರುವುದನ್ನು ಗಮನಿಸಿದರು.
ಅಲ್ಲದೇ ಗ್ರಾಮ ಸಮೀಪವೇ ಇನ್ನೆರಡು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೂ ಶ್ರೀಗಳು ಮನಸ್ಸು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸೀಮೆ ಹಳ್ಳಕ್ಕೆ ಹಾಗೂ ದೊಡ್ಡಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಇಂಜಿನಿಯರ್ ಜೊತೆ ಸ್ಥಳ ಪರಿಶೀಲನೆಯೂ ಮಾಡಿದ್ದಾರೆ. ಈ ಭಾಗದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದರೆ 400ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಮಳೆಗಾಲದ ಸಂದರ್ಭದಲ್ಲಿ ನೀರು ಸಂಗ್ರಹವಾಗಿ ರೈತರ ಬದುಕು ಬಂಗಾರವಾಗಲಿದೆ. ಹಳ್ಳದ ಎರಡೂ ಬದಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಲಿದೆ.
ಈ ಗ್ರಾಮಕ್ಕೆ ಶ್ರೀಗಳು ಸದ್ದಿಲ್ಲದೇ ಬಂದು ಸೇತುವೆ ನೋಡಿ ತೆರಳಿದ್ದು ಸ್ವತಃ ಗ್ರಾಮಸ್ಥರಲ್ಲಿಯೇ ಅಚ್ಚರಿ ಮೂಡಿಸಿದೆ.
ಶ್ರೀಗಳು ನಮ್ಮೂರಿಗೆ ಆಗಮಿಸಿದ್ದಾರೆಂದರೆ ನಮ್ಮೂರಿನ ಸಮಸ್ಯೆ ಬಗೆ ಹರಿದಂತಾಗಲಿದೆ. ರೈತರ ಬದುಕಿಗೆ ಒಂದು ಮಾರ್ಗ ಸಿಕ್ಕಂತಾಗಲಿದೆ ಎನ್ನುವ ಕನಸು ಕಂಡಿದ್ದಾರೆ. ಶ್ರೀಗಳಿಗೆ ಗ್ರಾಪಂ ಸದಸ್ಯ ನಿಂಗಪ್ಪ ಮೇಟಿ, ದೇವಪ್ಪ ಮೇಟಿ, ದೇವಪ್ಪ ರಡ್ಡೆರ್, ಯಲ್ಲಪ್ಪ ಹರನಾಳಗಿ, ರವಿ ಮೇಟಿ, ರಾಮಣ್ಣ ಸನ್ನಪೂರ, ಭರಮಪ್ಪ ಸಿಂದೋಗಿ, ಬಸಯ್ಯ ಸಿಂದೋಗಿ, ಸಿದ್ಲಿಂಗಪ್ಪ ಹೊಳಿಯಾಚಿ, ಶರಣಪ್ಪ ತಟ್ಟಿ, ಕೊಟ್ರಯ್ಯ ಸಸಿ, ಶರೀಫ್ಸಾಬ್ ಬೆಳಗಟ್ಟಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ