ಜಿಎಸ್ಟಿ: ರೈತರಿಗೆ ಮತ್ತಷ್ಟು ಕಹಿಯಾದ ಬೇವಿನ ಬೀಜ
Team Udayavani, Jul 2, 2018, 6:45 AM IST
ಕುಷ್ಟಗಿ: ಬೆಲೆ ಕುಸಿತ ಹಾಗೂ ಶೇ.5 ರಷ್ಟು ಜಿಎಸ್ಟಿಯಿಂದಾಗಿ ರೈತರಿಗೆ ಬೇವಿನ ಬೀಜ ಮತ್ತಷ್ಟು
ಕಹಿಯಾಗಿದೆ.
ಮುಂಗಾರು ಮಳೆ ವಿಳಂಬ ಸಂದರ್ಭದಲ್ಲಿ ಪರ್ಯಾಯವಾಗಿ ಉದ್ಯೋಗವಾಗಿರುವ ಬೇವಿನ ಬೀಜದ ಉತ್ಪನ್ನ ಹಾಗೂ ಬೆಲೆಯೂ ಕಡಿಮೆಯಾಗಿದ್ದರಿಂದ ಬೀಜವನ್ನು ಮಾರುಕಟ್ಟೆಗೆ ತರಲು ರೈತರು ಹಿಂದೇಟು ಹಾಕಿದ್ದಾರೆ.
ಬೇವಿನ ಬೀಜ ಮಾರಾಟಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಕುಷ್ಟಗಿಯೇ ದೊಡ್ಡ ಮಾರುಕಟ್ಟೆಯಾಗಿದೆ. ಬೇವಿನ ಬೀಜ ಮಾರಾಟ ಮಾಡಲು ಲಿಂಗಸುಗೂರು, ಸಿಂಧನೂರು, ಯಲಬುರ್ಗಾ,ಬಾಗಲಕೋಟೆ ಜಿಲ್ಲೆಯ ಹುನಗುಂದ, ಗದಗ
ಜಿಲ್ಲೆಯ ರೋಣ, ಗಜೇಂದ್ರಗಡ ಸೇರಿ ವಿವಿಧೆಡೆಗಳಿಂದ ರೈತರು ಆಗಮಿಸುತ್ತಾರೆ. ಆದರೆ ಈ ಸಲ ಉತ್ಪನ್ನವೂ ಕಡಿಮೆ, ದರವೂ ಕಡಿಮೆ ಇರುವುದರಿಂದ ಮಾರುವವರ ಸಂಖ್ಯೆಯೂ ಕಡಿಮೆಯಾಗಿದೆ.
ಕೆಲವರು ವಾರದ ಸಂತೆ, ದಿನಸಿ ಖರ್ಚು ಸೇರಿ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸಲು ಅನಿವಾರ್ಯವಾಗಿ ಬೇವಿನ ಬೀಜವನ್ನು ಮಾರಾಟ ಮಾಡಿದ್ದಾರೆ.
ಕಳೆದ ವರ್ಷ ಪ್ರತಿ ಚೀಲ (6ಡಬ್ಬಿ) 750 ರೂ.ದಿಂದ 820ರೂ. ಬೆಲೆಯಿತ್ತು. ಆದರೆ ಪ್ರಸಕ್ತಮಾರುಕಟ್ಟೆ ದರ 480ರಿಂದ 520 ರೂ. ಆಗಿದೆ.ಸಾಮಾನ್ಯವಾಗಿ ಉತ್ಪನ್ನ ಹೆಚ್ಚಿದ್ದಾಗ ದರ ಕಡಿಮೆ, ಉತ್ಪನ್ನ ಕಡಿಮೆ ಇದ್ದಾಗ ದರ ಹೆಚ್ಚಿ
ರುತ್ತದೆ. ಸದ್ಯ ಬೇವಿನ ಬೀಜದ ಉತ್ಪನ್ನ ಕಡಿಮೆ ಇದ್ದು, ಉತ್ತಮ ದರ ಸಿಗುತ್ತದೆ ಎನ್ನುವ ರೈತರ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಬೇವಿನ ಬೀಜ ಖರೀದಿಗೆ ಮೈಸೂರು, ತಮಿಳುನಾಡಿನ ಖರೀದಿದಾರರು ಇಲ್ಲಿನ ಮಾರುಕಟ್ಟೆಗೆ ಬರುತ್ತಾರೆ. ಪ್ರಸಕ್ತ ವರ್ಷದಿಂದ ಬೇವಿನ ಬೀಜದ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸಲಾಗಿದೆ.
ಬೇವಿನ ಬೀಜ ಎಣ್ಣೆಕಾಳು ಪಟ್ಟಿಗೆ ಸೇರಿಸಲಾಗಿದೆ. ಖರೀದಿದಾರರು ಜಿಎಸ್ಟಿ, ಮಾರುಕಟ್ಟೆ ಶುಲ್ಕದ ಜತೆಗೆ ಶೇ.1.5 ಪಾವತಿಸಬೇಕಿದ್ದು, ಇದು ಕೂಡ ಪ್ರಸಕ್ತ ವರ್ಷ ಬೇವಿನ ಬೀಜದ ಮೇಲೆ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಿದೆ.
ಪ್ರಸಕ್ತ ವರ್ಷ ನೆರೆಯ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಬೇವಿನ ಬೀಜ ಉತ್ಪನ್ನ ಲಭ್ಯವಿದ್ದು, ರಾಜ್ಯದ ಬೇವಿನ ಬೀಜ ಖರೀದಿಗೆ ವ್ಯಾಪಾರಸ್ಥರು ಮುಂದಾಗಿಲ್ಲ. ಸರಿಯಾಗಿ ಮಳೆಯಾಗದೇ ಇರುವುದರಿಂದ
ಉತ್ಪನ್ನವೂ ಕಡಿಮೆಯಾಗಿದೆ. ಬೆಲೆ ಕುಸಿತದಿಂದ ರೈತರು ಬೇವಿನ ಬೀಜದ ಉತ್ಪನ್ನ ಮಾರುಕಟ್ಟೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ.
– ಗೂಳೇಶ ಶಿವಶೆಟ್ಟರ್, ವರ್ತಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ