ಬಿರುಗಾಳಿ-ಮಳೆಗೆ ಭತ್ತ ಬೆಳೆಗಾರರು ಕಂಗಾಲು
Team Udayavani, May 11, 2020, 4:49 PM IST
ಸಿದ್ದಾಪುರ: ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರವಿವಾರ ಗಂಟೆಗೂ ಹೆಚ್ಚಾ ಬಿರುಗಾಳಿ ಸಹಿತ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು.
ಮಧ್ಯಾಹ್ನ 2:30ಕ್ಕೆ ಆರಂಭವಾದ ಬಿರುಗಾಳಿ ಸಹಿತ ಭಾರಿಮಳೆ ಸುಮಾರು ಒಂದೂ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದಾದ ಬಳಿಕ ಮತ್ತೆ ಸಣ್ಣಗೆ (ಜಿನುಗು) ಮಳೆ ಆರಂಭಗೊಂಡು ಸಂಜೆ 6:30ರವರೆಗೂ ಇತ್ತು. ಇದರಿಂದಾಗಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಮತ್ತು ಇತರೆಡೆ ಖಾಲಿ ಸ್ಥಳಗಳಲ್ಲಿ ಒಣಗಿಸಲು ಹಾಕಿದ್ದ ಭತ್ತ ನೆನೆದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಇನ್ನೂ ಸಿದ್ದಾಪುರ ಹೋಬಳಿ ವ್ಯಾಪ್ತಿಯ ಶ್ಯಾಲಿಗನೂರು ಆಲಿಕಲ್ಲು ಮಳೆ ಸುರಿದ್ದಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಕಾಳುಗಳು ನೆಲಕ್ಕುದಿರಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಕೂಡಲೇ ನೆರವಿಗೆ ಧಾವಿಸಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಬೆನ್ನೂರು, ಉಳೇನೂರು, ಈಳಿಗನೂರು, ಜಮಾಪುರ, ಕಕ್ಕರಗೋಳ, ನಂದಿಹಳ್ಳಿ ಗ್ರಾಮಗಳಲ್ಲೂ ಬಿರುಗಾಳಿ ಸಹಿತ ಆಲಿಕಲ್ಲಿ ಮಳೆಯಾಗಿದ್ದು, ಭತ್ತ ಹಾನಿಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ