ಅಂಗೈಯಲ್ಲಿ ಜೀವ ಹಿಡಿದು ತುಂಬಿ ಹರಿಯುತ್ತಿರುವ ಹಳ್ಳ ದಾಟಿದ ಜನತೆ
Team Udayavani, Aug 16, 2021, 9:21 PM IST
ಯಲಬುರ್ಗಾ : ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಗೆ ತಾಲೂಕಿನ ಬಂಡಿಹಾಳದ ಹಿರೇಹಳ್ಳ ಸಂಪೂರ್ಣ ತುಂಬಿ ಹರಿದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಸಂಜೆ ಆದರೂ ಹಳ್ಳದ ರಭಸ ಕಡಿಮೆಯಾಗದ ಹಿನ್ನಲೆಯಲ್ಲಿ ಜನತೆ ಹಗ್ಗ ಕಟ್ಟಿಕೊಂಡು ಜೀವ ಅಂಗೈಯಲ್ಲಿ ಹಿಡಿದುಕೊಂಡು ದಡ ಸೇರಿದ ಘಟನೆ ನಡೆದಿದೆ.
ತಾಲೂಕಿನ ಬಂಡಿಹಾಳ, ತೊಂಡಿಹಾಳ, ಚಿಕೇನಕೊಪ್ಪ, ಸಂಗನಾಳ ರೈತರ ಜಮೀನುಗಳು ಈ ಹಳ್ಳದ ಹತ್ತಿರ ಬರುತ್ತವೆ. ಮುಂಗಾರು ಹಂಗಾಮಿನ ಹೆಸರು ಕಾಯಿ ಬಿಡಿಸಲು ಹಾಗೂ ಉಳ್ಳಾಗಡ್ಡಿ ಕಳೆ ಕಸ ತೆಗೆಯಲು ನೂರಾರು ರೈತರು, ರೈತ ಮಹಿಳೆಯರು, ಯುವಕರು ಕೃಷಿ ಕಾರ್ಯಕ್ಕೆ ಜಮೀನುಗಳಿಗೆ ತೆರಳಿದ್ದರು.
ಮಧ್ಯಾಹ್ನ ಏಕಾಏಕಿ ಸುರಿದ ಮಳೆಗೆ ಹಳ್ಳ ರಭಸವಾಗಿ ಹರಿದಿದೆ. ಹಳ್ಳ ದಾಟಿ ಜಮೀನುಗಳಿಗೆ ಹೋದ ವಾಹನ, ಬಂಡಿಗಳು ಅಲ್ಲಿಯೇ ಉಳಿದಿವೆ. ರಸ್ತೆಗೆ ಬ್ರಿಡ್ಜ ಕಂ ಬ್ಯಾರೇಜ್ ಅತಿ ಅವಶ್ಯಕತೆ ಇದೆ ಶೀಘ್ರದಲ್ಲೇ ನಿರ್ಮಾಣಕ್ಕೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದರು.
ಸಾಹಸ : ಜನರು ನಡು ಮಟ್ಟದಲ್ಲಿ ಹರಿಯುವ ನೀರಿನಲ್ಲಿ ಧೈರ್ಯವಾಗಿ ಹಗ್ಗ ಕಟ್ಟಿಕೊಂಡು ಹಳ್ಳ ದಾಟಿದ್ದು ದೊಡ್ಡ ಸಾಹಸವೇ ಆಗಿದೆ.
ಎಲ್ಲರೂ ಸುರಕ್ಷಿತವಾಗಿ ದಡ ಸೇರಿದ್ದೇವೆ. ಆದರೇ ಬೆಳೆದ ಬೆಳಗಳು ಹಾನಿಯಾಗಿವೆ ಎಂದು ರೈತರಾದ ಮಲ್ಲೇಶಪ್ಪ ಬಂಡ್ರಿ, ಶರಣಪ್ಪ ಕಳಸಪ್ಪನವರ, ಮುತ್ತು ಸಂಗಣ್ಣನವರ, ಗಾಳೆಪ್ಪ ತಮ್ಮ ವೇದನೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
Koppala; ಶಿವರಾಜ ತಂಗಡಗಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ: ಕೃಷ್ಣಾ ಇಟ್ಟಂಗಿ
Koppal Lok Sabha constituency; ಲಿಂಗಾಯತ, ಅಹಿಂದ ಮತಗಳೇ ಇಲ್ಲಿ ನಿರ್ಣಾಯಕ
Koppala: ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡಿಯಿರಿ ಎಂದ ಸಚಿವ ತಂಗಡಗಿ ವಿರುದ್ಧ ಪ್ರಕರಣ ದಾಖಲು
“Modi ಜಪಿಸುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ’: ಶಿವರಾಜ ತಂಗಡಗಿ
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು