ತೋಟಗಾರಿಕೆ ಪಾರ್ಕ್‌ನಲ್ಲಿ ಏನೆಲ್ಲಾ ಇರುತ್ತೆ?

| ತೋಟಗಾರಿಕಾ ಬೆಳೆಯ ತಳಿಗಳ ಅವಿಷ್ಕಾರ | ರೈತನಿಗೆ ಬಿತ್ತನೆಯಿಂದ ಮಾರುಕಟ್ಟೆ ವರೆಗೂ ಮಾಹಿತಿ

Team Udayavani, Mar 10, 2021, 6:25 PM IST

ತೋಟಗಾರಿಕೆ ಪಾರ್ಕ್‌ನಲ್ಲಿ ಏನೆಲ್ಲಾ ಇರುತ್ತೆ?

ಕೊಪ್ಪಳ: ದಶಕಗಳ ಹಿಂದೆ ತೋಟಗಾರಿಕೆಬೆಳೆಗಳಿಗೆ ಹೆಸರಾಗಿದ್ದ ಕೊಪ್ಪಳ ಜಿಲ್ಲೆಗೆಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್‌ ಘೋಷಣೆಯಾಗಿರುವುದು ಜಿಲ್ಲೆಗೊಂದು ವರದಾನವಾಗಲಿದೆ.

ಈ ಟೆಕ್‌ ಪಾರ್ಕ್ ನಲ್ಲಿ ಬೆಳೆ ತಳಿಗಳಿಂದ ಹಿಡಿದು ಬಿತ್ತನೆಯ ವಿಧಾನ, ರೈತರು ಹೇಗೆಲ್ಲಾ ಮಾರುಕಟ್ಟೆ ಮಾಡಬೇಕೆಂಬ ಸಮಗ್ರ ಮಾಹಿತಿಲಭಿಸಲಿದೆ. ರೈತರಿಗೆ ತರಬೇತಿ ಜೊತೆಗೆ ಮಳೆ ನೀರು ಸಂರಕ್ಷಣೆ, ಬೆಳೆಯ ಪೋಷಣೆಯ ಮಾಹಿತಿಯನ್ನೂ ಒಳಗೊಂಡಿರಲಿದೆ.ಜಿಲ್ಲೆಯ ಕನಕಗಿರಿ ತಾಲೂಕಿನ ಸಿರವಾರಗ್ರಾಮ ವ್ಯಾಪ್ತಿಯಲ್ಲಿ ತೋಟಗಾರಿಕೆಟೆಕ್‌ ಪಾರ್ಕ್‌ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಹಿಂದೆಯೇ ಕನಕಗಿರಿ ಶಾಸಕ ಬಸವರಾಜದಢೇಸುಗೂರು ಅವರು ಕ್ಷೇತ್ರಕ್ಕೆತೋಟಗಾರಿಕೆ ಪಾರ್ಕ್‌ ಘೋಷಣೆ ಮಾಡುವಂತೆಯೂ ಸಿಎಂ ಅವರಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಜಿಲ್ಲಾ ತೋಟಗಾರಿಕೆ ಇಲಾಖೆ ಪಾರ್ಕ್‌ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು.

ಈ ಬಜೆಟ್‌ನಲ್ಲಿ ತೋಟಗಾರಿಕೆ ಪಾರ್ಕ್‌ ಘೋಷಣೆಯಾಗಿದ್ದು, ಸ್ವಲ್ಪ ಖುಷಿಯ ವಿಚಾರವಾಗಿದೆ. ಭವಿಷ್ಯದ ದಿನಗಳಲ್ಲಿ ಬರದ ನಾಡಿನ ಕನಕಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿಉದ್ಯೋಗ ಸೃಜನೆಯ ಜೊತೆಗೆ ವಿವಿಧಅವಿಷ್ಕಾರಗಳ ತಾಣವಾಗಿಯೂ ರಾಜ್ಯ,ದೇಶಮಟ್ಟದಲ್ಲಿ ಗಮನ ಸೆಳೆಯಲಿದೆ.

ಪಾರ್ಕ್‌ಗೆ 200 ಎಕರೆಗೂ ಹೆಚ್ಚು ಭೂಮಿ: ತೋಟಗಾರಿಕೆ ಪಾರ್ಕ್‌ ನಿರ್ಮಾಣಕ್ಕೆ ಕನಿಷ್ಠವೆಂದರೂ 200 ಎಕರೆಗೂ ಹೆಚ್ಚುಭೂಮಿ ಬೇಕಾಗುತ್ತದೆ. ಕನಗಿರಿ ಭಾಗದ ಸ್ಥಿರವಾರ ಭಾಗದಲ್ಲಿ ಸರ್ಕಾರಿ ಜಮೀನಿದ್ದು ಆ ಜಮೀನಿನಲ್ಲೇ ಪಾರ್ಕ್‌ ನಿರ್ಮಿಸುವುದುಸರ್ಕಾರದ ಉದ್ದೇಶವಾಗಿದೆ. ಅಲ್ಲದೇ,ತೋಟಗಾರಿಕೆ ಇಲಾಖೆ ಈಗಾಗಲೇ 200ಎಕರೆ ಜಮೀನು ಅಗತ್ಯವಿದೆ ಎನ್ನುವಕುರಿತಂತೆ ಪ್ರಸ್ತಾವನೆಯಲ್ಲೂ ಈ ಅಂಶವನ್ನು ಸೇರಿಸಿದೆ.

200 ಕೋಟಿಗೂ ಅಧಿಕ ನೆರವು: ಪ್ರಸ್ತುತ ಸರ್ಕಾರ ತೋಟಗಾರಿಕೆ ಪಾರ್ಕ್‌ನ್ನು ಘೋಷಣೆ ಮಾಡಿದೆಯಾದರೂ ಅನುದಾನ ನೀಡಿಲ್ಲ. ಕನಿಷ್ಠವೆಂದರೂ ಈ ಟೆಕ್‌ ಪಾರ್ಕ್‌ಗೆ 200 ಕೋಟಿಗೂ ಅಧಿಕ ಅನುದಾನದಅಗತ್ಯವಿದೆ. ಇಲ್ಲಿ ಕಟ್ಟಡಗಳ ನಿರ್ಮಾಣಮಾಡಬೇಕಿದೆ. ರೈತರಿಗೆ ತರಬೇತಿ ಭವನ, ಆಧುನಿಕತೆಯ ತಂತ್ರಜ್ಞಾನದಕೊಠಡಿಗಳು, ಆವಿಷ್ಕಾರದ ಸಭಾಂಗಣದಜೊತೆಗೆ ಆಧುನಿಕ ಕೃಷಿಗೆ ಬೇಕಾದಯಂತ್ರೋಪಕರಣಗಳನ್ನು ಇರಿಸುವುದು,ತೋಟಗಾರಿಕೆ ತಜ್ಞರು, ವಿಜ್ಞಾನಿಗಳುವಿಚಾರ ಸಂಕಿರಣ ಹಮ್ಮಿಕೊಳ್ಳಲು ವ್ಯವಸ್ಥಿತ ಕಚೇರಿಗಳು ನಿರ್ಮಾಣವಾಗಬೇಕಿದೆ.

ಮಳೆ ನೀರು ಸಂರಕ್ಷಣೆ, ಬೆಳೆ ಪೋಷಣೆ:ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆಗಳನ್ನುಹೇಗೆ ಸಂರಕ್ಷಣೆ ಮಾಡಿಕೊಳ್ಳಬಹುದು.ಕಡಿಮೆ ನೀರಿನಲ್ಲೇ ಉತ್ತಮ ಲಾಭಪಡೆಯುವಂತ ಬೆಳೆಗಳನ್ನು ಬೆಳೆಯುವ ವಿಧಾನ, ತಾಂತ್ರಿಕತೆ, ಪ್ರಾತ್ಯಕ್ಷಿತೆಯನ್ನುಒಳಗೊಂಡ ಸಮಗ್ರ ಮಾಹಿತಿಯು ಟೆಕ್‌ ಮೂಲಕ ನೀಡಲಾಗುವುದು. ಪ್ರಸ್ತುತ ಮಳೆಯ ಕೊರತೆಯಲ್ಲಿ ಮಳೆ ನೀರನ್ನು ಸಂಗ್ರಹಿಸುವುದು, ಇಸ್ರೇಲ್‌ ಮಾದರಿಯ ಜೊತೆಗೆ ದೇಶಿ ಮಾದರಿಯಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತ ಮಾಹಿತಿಯೂ ತೋಟಗಾರಿಕೆ ಪಾರ್ಕ್‌ನಲ್ಲಿ ಒಳಗೊಂಡಿರಲಿದೆ.

ತೋಟಗಾರಿಕೆ ಟೆಕ್‌ನಲ್ಲಿ ಏನೆಲ್ಲಾ ಇರುತ್ತೆ?:

ತೋಟಗಾರಿಕೆ ಪಾರ್ಕ್‌ನಿಂದ ರೈತರಿಗೆ ಉತ್ತಮ ಗುಣಮಟ್ಟದ ತರಬೇತಿ, ಆಧುನಿಕಆವಿಷ್ಕಾರಗಳ ಮೂಲಕ ರೈತ ಆರ್ಥಿಕವಾಗಿ ಸಮೃದ್ಧಿಗೆ ಸಹಕಾರಿಯಾಗಲಿದೆ. ಆಧುನಿಕತಂತ್ರಜ್ಞಾನ ಉತ್ಪಾದನೆ, ಪಾತ್ಯಕ್ಷತೆ

ಕೈಗೊಳ್ಳುವ ಜೊತೆಗೆ ವಿವಿಧ ಬೆಳೆಗಳ ಸಂಪೂರ್ಣ ಉತ್ಪಾದನೆ, ಮೌಲ್ಯವರ್ಧನೆ ಸರಪಳಿ ಅಳವಡಿಸಿಕೊಂಡು ರೈತರ ಉತ್ಪಾದನೆಗಳಿಗೆ ಅಧಿಕ ಬೆಲೆ

ಒದಗಿಸುವುದು. ಸಮಗ್ರ ಮಳೆಯಾಶ್ರಿತ, ಒಣ ಬೇಸಾಯ ತೋಟಗಾರಿಕೆ  ಪ್ರಾತ್ಯಕ್ಷಿತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿ ಪರಿಹಾರ ಒದಗಿಸುವುದು.ಕೊಯ್ಲೋತ್ತರ ತಂತ್ರಜ್ಞಾನ, ಮೌಲ್ಯವರ್ಧನೆ ಮತ್ತು ಸಂಸ್ಕರಣೆ ತಾಂತ್ರಿಕತೆಗಳನ್ನು ನೀಡುವ ಮೂಲಕ ಫಾರ್ವರ್ಡ್‌,ಬ್ಯಾಕ್ವರ್ಡ್‌ ಲಿಂಕೇಜ್‌ಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಖಾತ್ರಿ ಪಡಿಸುವುದು.

ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಹೂವು, ಔಷ ಧಿ ಸಸ್ಯಗಳು, ಸುಗಂಧಿತ ಸಸ್ಯಗಳ ಸಂರಕ್ಷಣೆಯಜೊತೆಗೆ ಮಾರುಕಟ್ಟೆ ವ್ಯವಸ್ಥೆಯ ವಿಧಾನತಿಳಿಸಿಕೊಡುವ ಮೂಲಕ ಸ್ವಾವಲಂಬಿದಾರಿ ಮಾಡಿಕೊಟ್ಟು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದು. ರೈತರಿಗೆ ಬಿತ್ತನೆಯಿಂದ ಹಿಡಿದು ಮಾರುಕಟ್ಟೆಯವರೆಗೂ ಸಮಗ್ರತೆಯನ್ನು ಒದಗಿಸುವುದು, ಮಾರುಕಟ್ಟೆ ವ್ಯವಸ್ಥೆಯನ್ನು ತಿಳಿಸುವುದು.

ಜಿಲ್ಲೆಯಲ್ಲಿ ತೋಟಗಾರಿಕೆ ಪಾರ್ಕ್‌ ನಿರ್ಮಿಸುವ ಕುರಿತಂತೆ ಸರ್ಕಾರಕ್ಕೆ ನಾವು ಪ್ರಸ್ತಾವನೆ ಸಲ್ಲಿಸಿದ್ದೇವು. ಸರ್ಕಾರವು ಕನಕಗಿರಿಯ ಸಿರಾವರ ಬಳಿ ಪಾರ್ಕ್‌ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಪಾರ್ಕ್‌ ನಿರ್ಮಾಣದಿಂದ ಜಿಲ್ಲೆ ಸೇರಿದಂತೆ ರಾಜ್ಯದ ರೈತರಿಗೂ ವರದಾನವಾಗಿದೆ. ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ವಿಧಾನ, ನೀರಿನ ಸಂರಕ್ಷಣೆ, ಬೆಳೆ ತಳಿಗಳ ಅವಿಷ್ಕಾರ, ಯಂತ್ರೋಪಕರಣದಬಳಕೆ ಸೇರಿದಂತೆ ರೈತರಿಗೆ ತರಬೇತಿ ಸೇರಿ ಸಮಗ್ರ ತೋಟಗಾರಿಕೆ ಬೆಳೆಯ ಕುರಿತಂತೆ ಪಾರ್ಕ್‌ನಿಂದ ರೈತರಿಗೆ ಮಾಹಿತಿ ದೊರೆಯಲಿದೆ. – ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ

 

­ದತ್ತು ಕಮ್ಮಾರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.