ಹೆಸರು ಬೆಳೆಗೆ ತೇವಾಂಶ ಕೊರತೆ: ರೈತರಲ್ಲಿ ಆತಂಕ
ಮಳೆಯಾಗದಿದ್ದರೆ ಶೇ. 75ರಷ್ಟು ಹೆಸರು ಬೆಳೆ ಹಾನಿ
Team Udayavani, Jun 25, 2019, 8:35 AM IST
ದೋಟಿಹಾಳ: ಕ್ಯಾದಗುಂಪಿ ರಸ್ತೆ ಬದಿ ಹೊಲದಲ್ಲಿ ತೇವಾಂಶ ಕೊರತೆಯಿಂದ ಒಣಗುತ್ತಿರುವ ಹೆಸರು ಬೆಳೆ.
ದೋಟಿಹಾಳ: ನಿಗದಿತ ಅವಧಿಗಿಂತ ಮೊದಲೇ ಬಿತ್ತನೆಯಾಗಿರುವ ಹೆಸರು ಬೆಳೆ ಸರಿಯಾದ ಮಳೆ ಇಲ್ಲದೇ ತೇವಾಂಶದ ಕೊರತೆ ಎದುರಿಸುವಂತ್ತಾಗಿದೆ.
ರೋಹಿಣಿ ಮಳೆಗೆ ಮುಂಗಾರು ಹಂಗಾಮು ಬಿತ್ತನೆಗೆ ಸಕಾಲ ಎಂಬುದು ಕೃಷಿ ಇಲಾಖೆ ಸೂಚನೆ. ಬಿತ್ತನೆಗೆ ನಿಗದಿಯಾಗಿರುವ ಅವಧಿಗಿಂತ ಮೊದಲೇ ಹೆಸರು ಬಿತ್ತನೆ ಮಾಡಿದರೆ ಮೂರು ತಿಂಗಳಲ್ಲೇ ಕಟಾವಿಗೆ ಬರುವ ಈ ಬೆಳೆಯ ನಂತರ ಸಜ್ಜೆ ಅಥವಾ ಹುರುಳಿ ಬಿತ್ತನೆ ಮಾಡಬಹುದು ಎಂಬುದು ರೈತರ ಲೆಕ್ಕಾಚಾರವಾಗಿತ್ತು. ಆದರೆ ತಾಲೂಕಿನಲ್ಲಿ ಅಲಲ್ಲಿ ಕೃತಿಕಾ ಮಳೆ ಸುರಿದಿತ್ತು. ಬಿತ್ತನೆಗೆ ಅಗತ್ಯವಿದ್ದಷ್ಟು ಹಸಿಯಾಗಿದ್ದಕ್ಕೆ ರೈತರು ಒಳ್ಳೆ ಅವಕಾಶ ಎಂದೇ ಭಾವಿಸಿ ಹೆಸರು ಬಿತ್ತನೆ ಮಾಡಿದ್ದಾರೆ. ಕೃತಿಕಾ ಮಳೆಗೆ ಬಿತ್ತನೆಯಾಗಿರುವ ಹೆಸರು ಈಗಾಗಲೇ 25-30 ದಿನದ ಬೆಳೆ ಇದೆ. ಇದರ ಅವ 75-80 ದಿನಗಳ ಮಾತ್ರ. ಮಳೆ ಕೊರತೆಯಿಂದ ಶೇ. 75ರಷ್ಟು ಬೆಳೆ ಕೈಕೊಟ್ಟಿದೆ ಎಂದು ರೈತರು ತಿಳಿಸಿದರು. ಕಳೆದ 1-2 ವಾರಗಳಿಂದ ಮಳೆ ಸುಳಿವಿಲ್ಲ, ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದೆ. ತಕ್ಷಣ ಮಳೆ ಸುರಿದರೆ ಬಿತ್ತನೆಯಾಗಿರುವ ಹೆಸರು ಬೆಳೆ ಉಳಿಯುತ್ತದೆ. ಮಳೆಯಾಗದಿದ್ದರೆ ಎಳೆಯ ನಾಟಿಯಾಗಿರುವ ಬೆಳೆ ಕಮರುತ್ತದೆ. ಬೀಜ, ಗೊಬ್ಬರ, ಗಳೆ ಬಾಡಿಗೆಗಳಿಗೆ ರೈತರು ಸಾಕಷ್ಟು ಖರ್ಚು ಮಾಡಿದ್ದಾರೆ. ಮಳೆ ಆಗದಿದ್ದರೆ ರೈತರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ. ಒಂದು ವಾರಗಳಿಂದ ಮೋಡ ಕವಿಯುತ್ತಿದ್ದರೂ ಮಳೆ ಸುರಿಯುತ್ತಿಲ್ಲ. ದೋಟಿಹಾಳ, ಕೇಸೂರು, ಕ್ಯಾದಗುಂಪಿ, ಜಾಲಿಹಾಳ, ಮುದೇನೂರು, ಶಿರಗುಂಪಿ, ಗೋತಗಿ ಗ್ರಾಮ ವ್ಯಾಪ್ತಿಯಲ್ಲಿ ಬಿತ್ತನೆ ಕೈಗೊಂಡ ರೈತರು ಆತಂಕಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ