ನಾನು ಯಾವಾಗಲೂ ಭಾಜಪ ಪರ: ಪ್ರೋ. ಡಾ.ಚಿದಾನಂದ ಮೂರ್ತಿ
Team Udayavani, Oct 2, 2019, 2:59 PM IST
ಗಂಗಾವತಿ: ನಾನು ಯಾವಾಗಲೂ ಭಾರತೀಯ ಜನತಾ ಪಾರ್ಟಿಯ ಪರವಾಗಿದ್ದು ನೀವು ಜನರ ಕೆಲಸ ಮಾಡುವ ಮೂಲಕ ಪ್ರಧಾನಿ ಮೋದಿ ಹಾಗೂ ಭಾಜಪಕ್ಕೆ ಒಳ್ಳೆಯ ಹೆಸರು ತರಬೇಕೆಂದು ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿಯವರಿಗೆ ಖ್ಯಾತ ಸಾಹಿತಿ ಸಂಶೋಧಕ ಪ್ರೋ.ಡಾ.ಚಿದಾನಂದ ಮೂರ್ತಿ ಕಿವಿಮಾತು ಹೇಳಿದರು.
ನಗರದ ಲಯನ್ಸ್ ಭವನದಲ್ಲಿ ಶಾಸಕರಿಂದ ಸನ್ಮಾನ ಸ್ವೀಕರಿಸಿ ಮುನವಳ್ಳಿಯವರನ್ನು ಹತ್ತಿರ ಕರೆದು ಈ ಮಾತನ್ನು ಹೇಳಿದರು. ದೇಶ ಹಾಗೂ ಧರ್ಮದ ಉಳುವಿಗಾಗಿ ಪ್ರತಿಯೊಬ್ಬರು ಕೆಲಸ ಮಾಡಬೇಕಿದೆ ಎಂದರು. ಈ ಮಾತಿಗೆ ಶಾಸಕ ಪರಣ್ಣ ಮುನವಳ್ಳಿಯವರು ಡಾ.ಚಿದಾನಂದ ಮೂರ್ತಿ ಯವರ ಕಾಲಿಗೆ ನಮಸ್ಕಾರ ಮಾಡಿ ನೀವು ಹೇಳಿದಂತೆ ಮಾಡುವುದಾಗಿ ತಲೆ ಅಲ್ಲಾಡಿಸಿದರು.
ಕಮ್ಮಟ ದುರ್ಗಾ ಕ್ಕೆ ಚಿದಾನಂದ ಮೂರ್ತಿ ಭೇಟಿ:
ನಾಡಹಬ್ಬ ಮಹಾನವಮಿ ದಸರಾ ಹಬ್ಬ ಮೊದಲು ತಾಲೂಕಿನ ಕಮ್ಮಟ ದುರ್ಗ ದಲ್ಲಿ ಆರಂಭಿಸಲಾಗಿದೆ ಎಂದು ಇತ್ತೀಚೆಗೆ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯ ಹಿನ್ನೆಲೆಯಲ್ಲಿ ಬುಧವಾರ ಕಮ್ಮಟ ದುರ್ಗ ಹಾಗು ಹೇಮಗುಡ್ಡ ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು. ದಸರಾ ಹಬ್ಬವನ್ನು ಸರಕಾರ ಕುಮ್ಮಟದುರ್ಗದಲ್ಲಿ ಆರಂಭಿಸಿ ಹಂಪಿಯ ಮಹಾನವಮಿ ದಿಬ್ಬದ ಹತ್ತಿರ ಕೊನೆಗೊಳ್ಳುತೆ ಆಚರಣೆ ಮಾಡಲು ಸರಕಾರಕ್ಕೆ ಪತ್ರ ಬರೆಯುವುದಾಗಿ ಪತ್ರಕರ್ತರಿಗೆ ತಿಳಿಸಿದರು.
ಶಾಸಕ ಪರಣ್ಣ ಮುನವಳ್ಳಿ, ಇತಿಹಾಸ ತಜ್ಞ ಡಾ.ಶರಣಬಸಪ್ಪ ಕೋಲ್ಕಾರ್,ಡಾ.ಶಿವಕುಮಾರ ಮಾಲೀಪಾಟೀಲಗ, ರಾಜೇಶನಾಯಕ,ಕೆ.ಬಸವರಾಜ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ