ಅಕ್ರಮ ಸಾಗಾಟಕ್ಕೆ ಬೇಕಿದೆ ಕಡಿವಾಣ
Team Udayavani, Aug 31, 2019, 11:49 AM IST
ಕನಕಗಿರಿ: ತಾಲೂಕು ವ್ಯಾಪ್ತಿಯ ನವಲಿ, ಯತ್ನಟ್ಟಿ, ಬುನ್ನಟ್ಟಿ, ಈಚನಾಳ, ಕರಡೋಣಿ ಭಾಗದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಮರಳು ಮಾಫಿಯಾದಿಂದ ಸಮೀಪದ ನವಲಿ ಗ್ರಾಮದಲ್ಲಿ ಮರುಳಿನ ದಿಬ್ಬ ಕುಸಿತು ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಕುರಿತು ತನಿಖೆ ನಡೆಸುತ್ತಿದೆ. ಈ ಘಟನೆ ನಂತರ ಎಚ್ಚೆತ್ತುಕೊಂಡ ಸಂಘ-ಸಂಸ್ಥೆಗಳು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸುತ್ತೀವೆ.
ಕೇಂದ್ರಗಳು ನಾಮಮಾತ್ರಕ್ಕೆ: ಬುನ್ನಟ್ಟಿ ಗ್ರಾಮದ ಸಮೀಪದ ಭೂ ಮತ್ತು ಗಣಿ ಇಲಾಖೆ ವತಿಯಿಂದ ಎರಡು ಮರಳು ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಕಳೆದ ಒಂದು ವರ್ಷ ಹಿಂದೆ ಟೆಂಡರ್ ಕೂಡಾ ಮಾಡಲಾಗಿದೆ. ಈ ಕೇಂದ್ರಗಳು ನಾಮ ಮಾತ್ರಕ್ಕೆ ತೆರಯಲಾಗಿದೆ. ಡಿ.ಡಿ.ಯನ್ನು ನೀಡದೇ ಇರುವ ಕಾರಣ ಅಕ್ರಮ ಮರಳು ನಡೆಸವವರು ಮನ ಬಂದಂತೆ ಎಲ್ಲಿ ಅದರಲ್ಲಿ ಮರಳು ಸಾಗಿಸುತ್ತಿದ್ದಾರೆ.
ಕಾರ್ಯಪ್ರವೃತ್ತರಿಲ್ಲದ ಅಧಿಕಾರಿಗಳು: ಕಳೆದ ನಾಲ್ಕು ತಿಂಗಳ ಹಿಂದೆ ಅಕ್ರಮ ಮರಳು ಸಾಗಿಸುವ ಕುರಿತು ‘ಉದಯವಾಣಿ’ ವರದಿ ಮಾಡಿತ್ತು. ನಂತರ ತಹಶೀಲ್ದಾರ್ ರವಿ ಅಂಗಡಿ ಅವರು ಎಲ್ಲ ಇಲಾಖೆಗಳನ್ನು ಒಳಗೊಂಡ ಸಮಿತಿ ರಚಿಸಿದ್ದರು. ಪ್ರತಿ ದಿನವೂ ಒಬ್ಬರು ತಾಲೂಕಿನ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಗಸ್ತು ತಿರುಗುವಂತೆ ಸೂಚಿಸಿದರು. ಆದರೆ ಅಧಿಕಾರಿಗಳು ಮಾತ್ರ ಎಷ್ಟರ ಮಟ್ಟಿಗೆ ಕಾರ್ಯ ಪ್ರವೃತ್ತರಾದರೂ ಎಂಬುವುದು ಮಾತ್ರ ಯಾರಿಗೂ ತಿಳಿದಿಲ್ಲ.
ಸ್ಥಳಕ್ಕೆ ಭೇಟಿ ನೀಡದ ಶಾಸಕ: ಮೂವರು ಮಕ್ಕಳ ಮೃತಪಟ್ಟ ಘಟನೆ ನಡೆದು ಮೂರು ದಿನಗಳ ಕಳೆದರೂ ಘಟನಾ ಸ್ಥಳಕ್ಕೆ ಇದುವರೆಗೂ ಶಾಸಕ ಬಸವರಾಜ ದಢೇಸೂಗೂರು ಭೇಟಿ ನೀಡಿ ಪರಿಶೀಲಿಸಿಲ್ಲ. ಮೃತಪಟ್ಟ ಕುಟುಂಬದವರಿಗೆ ಇದುವರೆಗೂ ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಪರಿಹಾರ ಕೂಡಿಸಲು ಶಾಸಕರು ಮುಂದಾಗಿಲ್ಲ.
ಎಲ್ಲಿ ಬೇಕಾದರಲ್ಲಿ ತೆಗ್ಗು ದಿನ್ನೆಗಳೇ: ತಾಲೂಕಿನ ಕೊನೆಯ ಭಾಗವಾದ ಯತ್ನಟ್ಟಿ ಮಾರ್ಗವಾಗಿ ಬುನ್ನಟ್ಟಿ, ಈಚನಾಳ, ನವಲಿ ಗ್ರಾಮದವರೆಗೆ ಹಳ್ಳವಿದೆ. ಹಳ್ಳದ ಅಕ್ಕಪಕ್ಕ ಇರುವ ಖಾಸಗಿ ಜಮೀನಗಳಲ್ಲಿ ಕೂಡಾ ಯೋಗ್ಯವಾದ ಮರಳು ಲಭ್ಯವಿದೆ. ಇದನ್ನೆ ಬಂಡವಾಳ ಮಾಡಿಕೊಂಡ ದಂಧೆಕೊರರು ಹಳ್ಳದ ಸುತ್ತಲೂ ಎಲ್ಲಿ ಬೇಕಾದರಲ್ಲಿ ತೆಗ್ಗುಗಳನ್ನು ಅಗೆದಿದ್ದಾರೆ. ಇವು ಕೂಡಾ ಬಲಿಗಾಗಿ ಕಾದು ಕುಳಿತಿವೆ. ಇವುಗಳನ್ನು ನೆಲ ಸಮ ಮಾಡುವವರು ಯಾರು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.
•ಶರಣಪ್ಪ ಗೋಡಿನಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್