ವೀಡಿಯೋ ಬಿಡುಗಡೆಯಲ್ಲಿ ಸಿದ್ದರಾಮಯ್ಯ ಎಕ್ಸ್ ಪರ್ಟ್ , ಅವರಿಗೆ ನೊಬೇಲ್ ಪ್ರಶಸ್ತಿ ಕೊಡಬೇಕು
Team Udayavani, Nov 4, 2019, 5:38 PM IST
ಕೊಪ್ಪಳ: ಆಡಿಯೋ, ವೀಡಿಯೋ ರಿಲೀಸ್ ಮಾಡುವಲ್ಲಿ ಸಿದ್ದರಾಮಯ್ಯ ಎಕ್ಸ್ ಪರ್ಟ್, ಅವರಿಗೆ ನೋಬೆಲ್ ಪ್ರಶಸ್ತಿಯನ್ನು ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರದ್ದು ವೀಡಿಯೊ ಬಂತಲ್ಲ ಅದನ್ನು ಯಾರು ಬಿಡುಗಡೆ ಮಾಡಿದ್ದು, ಈಗ ಹೊರಬಂದ ವೀಡಿಯೋ ಬಗ್ಗೆ ಅವರು ಮಾತನಾಡುತ್ತಿದ್ದು ವೀಡಿಯೋ, ಆಡಿಯೋ ಬಿಡುಗಡೆ ಮಾಡುವಲ್ಲಿ ಫೇಮಸ್, ಅವರಿಗೆ ನೋಬಲ್ ಪ್ರಶಸ್ತಿ ಕೊಡಬೇಕು ಎಂದರು.
ಇನ್ನೂ ಅನರ್ಹ ಶಾಸಕರಿಂದಲೇ ನಮ್ಮ ಸರ್ಕಾರ ಬಂದಿರೋದು.
ನಾವು ಯಾವ ಕಾರಣಕ್ಕೂ ಅವರನ್ನ ಕೈ ಬಿಡಲ್ಲ.
ಸಂತೋಷದಿಂದ ನಾನು ಹೇಳ್ತೀನಿ,ಅವರಿಂದಲೇ ನಾನು ಮಂತ್ರಿಯಾಗಿದ್ದು ಎಂದರು.
ಅಧಿಕಾರ ಕಳೆದುಕೊಂಡ ಮೇಲೆ ಕಾಂಗ್ರೆಸ್ ನಾಯಕರ ನಾಲಿಗೆ ಸುಮ್ಮನಿರುತ್ತಿಲ್ಲ. ಅವರಿಗೆ ಮಾತಾಡದೆ ಹೋದ್ರೆ ತಿಂದ ಅನ್ನ ಕರಗಲ್ಲ ಎಂದರು.
ಕಾಂಗ್ರೆಸ್ ಗೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗ್ತಿಲ್ಲ.
ಸಿದ್ದರಾಮಯ್ಯ ಬ್ಲಾಕ್ ಮೇಲ್ ಮಾಡಿ ವಿರೋದ ಪಕ್ಷದ ನಾಯಕರಾಗಿದ್ದಾರೆ.
ಭಗವಂತನೇ ಕಾಂಗ್ರೆಸ್ ಪಾರ್ಟಿಯನ್ನ ಕಾಪಾಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ