ಊರಿಗೆ ತೆರಳಲು ಜಾರ್ಖಾಂಡ್ ರಾಜ್ಯದ ಕಾರ್ಮಿಕರ ಪರದಾಟ
Team Udayavani, May 4, 2020, 8:50 AM IST
ಗಂಗಾವತಿ: ಗಿಣಿಗೇರಿ ಮಹೆಬೂಬನಗರ ರೈಲ್ವೆ ಮಾರ್ಗದ ಕಾಮಗಾರಿ ಮಾಡಲು ಆಗಮಿಸಿ ಕೋವಿಡ್-19 ಕರ್ಪ್ಯೂ ನಲ್ಲಿ ಸಿಲುಕಿರುವ ಜಾರ್ಖಾಂಡ್ ರಾಜ್ಯದ ಕೂಲಿಕಾರ್ಮಿಕರು ತಮ್ಮ ಊರಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ.
ಕೋವಿಡ್-19 ವೈರಸ್ ಹರಡದಂತೆ ವಿಧಿಸಲಾಗಿರುವ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇರುವುದರಿಂದ ದೇಶದ ವಿವಿಧ ರಾಜ್ಯಗಳಲ್ಲಿ ಕೂಲಿ ಕೆಲಸಕ್ಕಾಗಿ ಹೋಗಿರುವ ಕೂಲಿಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ತೆರಳಲು ಕೇಂದ್ರಹಾಗೂ ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ.
ಕಾರಟಗಿ ತಾಲ್ಲೂಕಿನಲ್ಲಿ ನಡೆದಿರುವ ರೈಲ್ವೆಮಾರ್ಗದ ಕಾಮಗಾರಿಯಲ್ಲಿ ಕೂಲಿಕೆಲಸ ಮಾಡುವ ಮತ್ತು ಟಿಪ್ಪರ್ ಲಾರಿ ಚಾಲನೆ ಮಾಡುವ 10ಕ್ಕೂ ಹೆಚ್ಚು ಜಾರ್ಖಾಂಡ್ ರಾಜ್ಯದ ಕೊಡರಾಂ ಜಿಲ್ಲೆಯ ಮದನಗುಂಡಿ ಗ್ರಾಮದ ಕೂಲಿಕಾರ್ಮಿಕರು ತಮ್ಮ ಊರಿಗೆ ತೆರಳಲು ಪರದಾಡುತ್ತಿದ್ದಾರೆ.
“ಇಲ್ಲಿ ಮಾಡಲು ಕೆಲಸವಿಲ್ಲ ಊರಿಗೆ ಹೋಗಲು ಹಣವಿಲ್ಲ ಸರಕಾರ ನಮಗೆ ಸಹಾಯ ಮಾಡಬೇಕು. ಸ್ವಂತ ಊರಿಗೆ ಹೋಗಲು ಎರಡು ದಿನಗಳ ಹಿಂದೆ ಕೇಂದ್ರ ಅವಕಾಶ ಕಲ್ಪಿಸಿದ್ದು ಆನ್ ಲೈನ್ ಆಪ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದು ಇದುವರೆಗೂ ಯಾವುದೇ ಮೆಸೇಜ್ ಬಂದಿಲ್ಲ. ಗಂಗಾವತಿ ತಹಸೀಲ್ದಾರ್ ಕಚೇರಿಗೆ ತೆರಳಿ ಊರಿಗೆ ಹೋಗಲು ಸಹಾಯ ಕೋರಲಾಗುತ್ತದೆ. ಕೆಲಸಕ್ಕೆ ಕರೆದುಕೊಂಡು ಬಂದಿದ್ದ ಗುತ್ತಿಗೆದಾರ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಎಂದು ಜಾರ್ಖಂಡ್ ರಾಜ್ಯದ ಕೂಲಿಕಾರ್ಮಿಕ ರಾಮಪ್ರಸಾದ ಪಾಸ್ವಾನ್ ಉದಯವಾಣಿ ಗೆ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ