ಕಲ್ಲಬಾವಿ ಕಾಯಕಲ್ಪಕ್ಕೆ ಮುಂದಾದ ಪುರಸಭೆ
Team Udayavani, Feb 14, 2021, 4:31 PM IST
ಕುಷ್ಟಗಿ: ಪಟ್ಟಣದ 21ನೇ ವಾರ್ಡ್ ನಲ್ಲಿರುವ ಐತಿಹಾಸಿಕ ಕಲ್ಲಬಾವಿಗೆ ಕಾಯಕಲ್ಪ ನೀಡಲು ಪುರಸಭೆ ಮುಂದಾಗಿದೆ. ಮೊದಲ ಹಂತವಾಗಿ ಕಲ್ಲಬಾವಿಯಲ್ಲಿನ ನೀರನ್ನು ಹೊರ ಹಾಕುವ ಕಾರ್ಯಾಚರಣೆ ಶನಿವಾರದಿಂದ ಕೈಗೆತ್ತಿಕೊಳ್ಳಲಾಗಿದೆ.
ಕಲ್ಲಬಾವಿಯಲ್ಲಿ ಮಲೀನ ನೀರು ತೆರವುಗೊಳಿಸುವ ಬಗ್ಗೆ ಸಾರ್ವಜನಿಕವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಕಲ್ಲಬಾವಿಯಲ್ಲಿ ನೀರು ಮಲೀನವಾಗಿದ್ದರಿಂದ ಸಂಪೂರ್ಣ ನೀರು ತೆಗೆದು, ಅದರಲ್ಲಿ ಹೂಳು ತೆಗೆದರೆ ಅಭಿವೃದ್ಧಿ ಸಾಧ್ಯ ಎನ್ನುವ ನಿರ್ಧಾರಕ್ಕೆ ಬಂದ ಹಿನ್ನೆಲೆಯಲ್ಲಿ ಶನಿವಾರದಿಂದ ಕಲ್ಲಬಾವಿಯಲ್ಲಿನ ಗಲೀಜು ನೀರು, ಹೊರ ಹಾಕುವ ಕಾರ್ಯ ಆರಂಭಿಸಲಾಗಿದೆ.
ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು ಪ್ರತಿನಿ ಧಿಸುವ 21ನೇ ವಾರ್ಡ್ನಲ್ಲಿ ಈ ಕಲ್ಲಭಾವಿ ಇದ್ದು, ಅವರ ಮೇಲುಸ್ತುವಾರಿಯಲ್ಲಿ ಈ ಕಾರ್ಯ ಕೈಗೆತ್ತಿಕ್ಕೊಳ್ಳಲಾಗಿದೆ. ಸದ್ಯ ನೀರೆತ್ತುವ ಪಂಪ್ಸೆಟ್ ಮೋಟಾರ್ಗಳಿಂದ ನೀರು ಹೊರ ಹಾಕುವ ಕೆಲಸ ಭರದಿಂದ ಸಾಗಿದೆ. ರವಿವಾರದಿಂದ ಇನ್ನೆರಡು ಮೋಟಾರ್ಗಳಿಂದ ನೀರೆತ್ತಿಸಿ, ಇದರಲ್ಲಿ ಹೂಳು ತೆಗೆದು ಸ್ವತ್ಛತಾ ಕಾರ್ಯ ವೇಗಗೊಳಿಸುವ ಉದ್ದೇಶ ಹೊಂದಲಾಗಿದೆ. ಕಲ್ಲಬಾವಿಯಲ್ಲಿನ ಮಲೀನ ನೀರು ತೆರವುಗೊಳಿಸಿದ ಬಳಿಕ ಕಾಯಕಲ್ಪಗೊಳಿಸುವ ನಿಟ್ಟಿನಲ್ಲಿ ಫೆ. 16ರಂದು ಬೆಳಗ್ಗೆ 11ಕ್ಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಲಭಾವಿ ಸಂರಕ್ಷಣೆ ಕುರಿತಂತೆ ಜನಾಭಿಪ್ರಾಯ ಸಂಗ್ರಹಿಸಿ ಅಭಿವೃದ್ಧಿ ಕಾರ್ಯಗತಗೊಳಿಸುವ ಹಿನ್ನೆಲೆಯಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ