
ದೋಟಿಹಾಳ: ಹಣವಿಲ್ಲವೆಂದು ಬ್ಯಾಂಕಿಗೆ ಬೀಗ ಹಾಕಿ ಹೋದ ಸಿಬ್ಬಂದಿ… ಗ್ರಾಹಕರು ಕಂಗಾಲು
Team Udayavani, Oct 3, 2022, 2:34 PM IST

ದೋಟಿಹಾಳ : ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಹಣವಿಲ್ಲವೆಂದು ನೆಪ ಹೇಳಿ, ಬ್ಯಾಂಕ್ ಬಾಗಿಲಿಗೆ ಸುಮಾರು ಎರಡುವರೆ ಗಂಟೆಗಳ ಕಾಲ ಬೀಗ ಹಾಕಿದ ಘಟನೆ ಸೋಮವಾರ ಗ್ರಾಮದಲ್ಲಿ ನಡೆದಿದೆ.
ಗ್ರಾಮೀಣ ಬ್ಯಾಂಕ್ ಬ್ಯಾಂಕಿನ ಬಾಗಿಲಿಗೆ ನೋ ಕ್ಯಾಶ್ ಎಂದು ನೋಟಿಸ್ ಅಂಟಿಸಿ ಬ್ಯಾಂಕಿನ ಸಿಬ್ಬಂದಿಗಳು ಬೀಗ ಹಾಕಿಕೊಂಡು ಹೋಗಿದ್ದಾರೆ.
ತಮ್ಮ ದೈನಂದಿನ ವ್ಯವಹಾರಕ್ಕಾಗಿ ಬ್ಯಾಂಕಿಗೆ ಆಗಮಿಸಿದ ಗ್ರಾಹಕರ ಪಾಡು ಹೇಳುತೀರಂತಾಗಿದೆ. ಬ್ಯಾಂಕಿನಲ್ಲಿ ಹಣ ಇಲ್ಲದಿದ್ದರೂ ಉಳಿದ ಕೆಲಸ ಕಾರ್ಯಗಳು ಮಾಡಬಹುದು ಆದರೆ ಇಲ್ಲಿಯ ಸಿಬ್ಬಂದಿಗಳು ಬೇಜವಾಬ್ದಾರಿತನದಿಂದ ನೋ ಕ್ಯಾಶ್ ಎಂದು ಬೋರ್ಡ್ ಹಾಕಿ ಬ್ಯಾಂಕಿನ ಬಂದು ಮಾಡಿರೋವದು ಎಷ್ಟರಮಟ್ಟಿಗೆ ಸರಿ ಎಂದು ಗ್ರಾಹಕರು ಪ್ರಶ್ನಿಸಿದರು. ಈ ಬ್ಯಾಂಕಿನಲ್ಲಿ ಮೆನೇಜರ್ ನಿಧನವಂದಿ ಒಂದು ತಿಂಗಳವಾದರೂ ಯಾರು ಇಲ್ಲಿಗೆ ಮೆನೇಜರ್ ಬಂದಿಲ್ಲ. ಹೀಗಾಗಿ ಈ ಬ್ಯಾಂಕಿನ ಸಿಬ್ಬಂದಿಗಳಿಗೆ ಯಾರು ಹೇಳೋರಿಲ್ಲ ಕೇಳೋರಿಲ್ಲಂತಾಗಿದೆ ಗ್ರಾಹಕರು ಆರೋಪಿಸುತ್ತಿದ್ದಾರೆ. ಗ್ರಾಹಕರಿಗೆ ಬ್ಯಾಂಕಿನ ಸಿಬ್ಬಂದಿ ಸಿಬ್ಬಂದಿಗಳಿಗೆ ಇದರ ಬಗ್ಗೆ ವಿಚಾರಿಸಿದರೆ. ಬೇಕಿದ್ದರೆ ಅಕೌಂಟನ್ನಿ ಕ್ಲೋಸ್ ಮಾಡಿಕೊಂಡು ಹೋಗಿ ಎಂದು ಹೇಳುತ್ತಾರೆ ಎಂದು ಗ್ರಾಹಕರು ತಿಳಿಸಿದರು.
ದೋಟಿಹಾಳದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಾಗಿಲಿಗೆ ಬೀಗ. ಬ್ಯಾಂಕ್ ಕೆಲಸಕ್ಕೆ ಆಗಮಿಸಿದ ಗ್ರಾಹಕರ ಪರದಾಟ ಮುಂಜಾನೆಯಿಂದಲೇ ಬ್ಯಾಂಕ್ ವ್ಯವಹಾರಕ್ಕಾಗಿ ಆಗಮಿಸಿದ ಗ್ರಾಹಕರು ಹಣವಿರದಿದ್ದರೂ, ಹಣ ಪಾವತಿಸಲು, ಬೇರೆ ಬೇರೆ ವ್ಯವಹಾರ ಮಾಡಲು ಬ್ಯಾಂಕ್ ಬೇಕು. ದೋಟಿಹಾಳಕ್ಕೆ ಸುತ್ತಲಿನ ಗ್ರಾಮಗಳಿಂದ ಬಂದಿರುವ ಗ್ರಾಹಕರು ಸುಮಾರು 60ಕ್ಕೂ ಹೆಚ್ಚು ಜನ ಗ್ರಾಹಕರು ಮುಂಜಾನೆಯಿಂದ ಕಾಯಿಯುತ್ತಿದ್ದಾರೆ. ಆದರೆ ಬ್ಯಾಂಕಿನ ಮುಂದೆ ಬ್ಯಾಂಕಿನ ಯಾವ ಸಿಬ್ಬಂದಿಯೂ ಇಲ್ಲದಿರುವುದು ಕಂಡು ಬಂತು. ಇದು ಕೇವಲ ಒಂದು ದಿನದ ಘಟನೆಯಲ್ಲ ಇಂತಹ ಘಟನೆಗಳು ಹಲವು ದಿನಗಳಿಂದ ನಡೆದುಕೊಂಡು ಬಂದಿದೆ.
ಈ ಬ್ಯಾಂಕಿನಲ್ಲಿ ಕೇವಲ ಇಬ್ಬರೇ ಮಹಿಳಾ ಸಿಬ್ಬಂದಿಗಳು ಇರುವುದರಿಂದ ಇಷ್ಟೆಲ್ಲಾ ಸಮಸ್ಯೆಯಾಗಿದೆ. ಇದರ ಬಗ್ಗೆ ವಿಚಾರಿಸಲು ಮೇಲಧಿಕಾರಿಗಳಿಗೆ ಫೋನ್ ಮಾಡಿದರು ಫೋನ್ ರಿಸೀವ್ ಮಾಡುತ್ತಿಲ್ಲ.
ನಾವು ಬ್ಯಾಂಕಿಗೆ ಕೇವಲ ಹಣ ಪಡೆಯಲು ಬರುವುದಿಲ್ಲ ಹಣ ಜಮಾ ಮಾಡಲು ಹಾಗೂ ಇನ್ನಿತರ ಕೆಲಸಗಳಿಗೆ ಬ್ಯಾಂಕಿಗೆ ಬರುತ್ತೇವೆ ಆದರೆ ಬ್ಯಾಂಕಿನಲ್ಲಿ ಹಣ ಇಲ್ಲದಿದ್ದರೇನು ನಾವು ಹಣ ಪಾವತಿಸಲು ಬಂದಿದ್ದೇವೆ ನಮಗಾದರೂ ಬ್ಯಾಂಕ್ ತೆಗೆದಿರಬೇಕಲ್ಲವೇ ಕ್ಯಾಶ್ ಇಲ್ಲ ಅಂತ ಹೇಳಿ ಬ್ಯಾಂಕ್ ಅನ್ನು ಬಂದು ಮಾಡುವದು ಎಷ್ಟರಮಟ್ಟಿಗೆ ಸರಿ ಎಂದು ಬಿಜಕಲ್ ಗ್ರಾಮದ ಮಂಜುನಾಥ್ ಅವರು ಆರೋಪಿಸಿದರು.
ಇದನ್ನೂ ಓದಿ : ಗುವಾಹಟಿ ಪಂದ್ಯದ ಬಳಿಕ ಡೇವಿಡ್ ಮಿಲ್ಲರ್ ಬಳಿ ಕ್ಷಮೆ ಕೇಳಿದ ಕ್ವಿಂಟನ್ ಡಿಕಾಕ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಚಿತ ಗಿಫ್ಟ್ ಗಳ ಮೇಲೆ ಚುನಾವಣಾ ಆಯೋಗದ ಕಣ್ಣು

ಜೆಡಿಎಸ್ ದ್ವಿತೀಯ ಪಟ್ಟಿ ಬಿಡುಗಡೆಗೆ ಸಿದ್ಧತೆ: ಫೆ. 8ರ ಆಸುಪಾಸು ಬಹಿರಂಗ ಸಾಧ್ಯತೆ

ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ತಾಲೂಕು ಮಟ್ಟದಲ್ಲೇ ಪ್ರಶ್ನೆ ಪತ್ರಿಕೆ

130 ಕ್ಷೇತ್ರಗಳಿಗೆ ಒಂದೇ ಹೆಸರು? ಕಾಂಗ್ರೆಸ್ ಪಟ್ಟಿ ಸಿದ್ಧಪಡಿಸಲು ಇಂದು ಮಹತ್ವದ ಸಭೆ

ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ತಾಲೂಕು ಮಟ್ಟದಲ್ಲೇ ಪ್ರಶ್ನೆ ಪತ್ರಿಕೆ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

ಪ್ರತಿಭಾವಂತ ಕ್ರಿಕೆಟ್ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ

ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು