ನಿರ್ಬಂಧಗಳ ನಡುವೆ ಕಿಷ್ಕಿಂದಾ ಅಂಜನಾದ್ರಿ ದರ್ಶನಕ್ಕೆ ಅವಕಾಶ
Team Udayavani, Sep 3, 2021, 6:15 PM IST
ಗಂಗಾವತಿ: ಕೋವಿಡ್ ಮೂರನೇ ಅಲೆ ತಡೆಯಲು ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಕಿಷ್ಕಿಂದಾ ಅಂಜನಾದ್ರಿ ದೇವಸ್ಥಾನ ಪ್ರವೇಶಕ್ಕೆ ಸಾರ್ವಜನಿಕರಿಗೆ ಹೇರಿದ್ದ ನಿರ್ಬಂಧವನ್ನು ಗುರುವಾರ (ಸೆ.2) ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ
ಕೋವಿಡ್ ಮೂರನೇ ಅಲೆಯ ಮಾರ್ಗಸೂಚಿ ಅನ್ವಯ ಪ್ರತಿ ಶನಿವಾರ ರವಿವಾರ ಮತ್ತು ಅಮಾವಾಸ್ಯೆಯಂದು ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧ ಮಾಡಲಾಗಿದೆ. ಪ್ರತಿನಿತ್ಯ ದೇಗುಲದ ಸಿಬ್ಬಂದಿ ಮತ್ತು ಅರ್ಚಕರು ಮಾತ್ರ ಪೂಜೆ ಧಾರ್ಮಿಕ ಕಾರ್ಯಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಉಳಿದ ದಿನಗಳಲ್ಲಿ ದೇಗುಲ ಪ್ರವೇಶವನ್ನು ಮಾರ್ಗಸೂಚಿ ಅನುಸರಿಸಿ ಕಲ್ಪಿಸಲಾಗಿದೆ.
ಅಂಜನಾದ್ರಿಗೆ ಬರುವ ಭಕ್ತರಿಗೆ ಪ್ರಸಾದ ತೀರ್ಥ ವಿತರಣೆ ಮಾಡಲಾಗುವುದಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇಗುಲ ಕಮಿಟಿಯವರು ಇಟ್ಟಿರುವ ಸ್ಯಾನಿಟೈಜರ್ ಬಳಕೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.