ಹೂವಿನ ದರ ಕುಸಿತ; ತೋಟಕ್ಕೆ ಕುರಿ ಬಿಟ್ಟ ರೈತ
| ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟ | ಒಂದು ಎಕರೆಯಲ್ಲಿ ಗಲಾಟೆ ಹೂವು ಬೆಳೆದಿದ್ದ ಬಹದ್ದೂಬಂಡಿ ಪಾಯಣ್ಣ
Team Udayavani, Apr 20, 2021, 8:30 PM IST
ಕೊಪ್ಪಳ: ಕೋವಿಡ್ ಆರ್ಭಟ, ನೀರಿನ ಕೊರತೆಯ ಮಧ್ಯೆಯೂ ಬೇಸಿಗೆಯಲ್ಲಿ ಕಷ್ಟಪಟ್ಟು ಹೂವು ಬೆಳೆದಿದ್ದ ರೈತನೋರ್ವ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕುರಿ ಹಿಂಡು ಬಿಟ್ಟು ಹೂವು ಮೇಯಿಸಿದ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಬಹದ್ದೂಬಂಡಿಯ ಪಾಯಣ್ಣ ಎಂಬ ರೈತನೇ ವೇದನೆಯಿಂದಲೇ ಹುಲುಸಾಗಿ ಬೆಳೆದ ಹೂವಿನ ಹೊಲಕ್ಕೆ ಕುರಿ ಬಿಟ್ಟು ಮೇಯಿಸಿದ ವ್ಯಕ್ತಿ. ಹಲವು ಸಂಕಷ್ಟಗಳ ಮಧ್ಯೆಯೂ ರೈತನು ಹೂವು ಬೆಳೆದಿದ್ದಾನೆ. ಒಂದೆಡೆ ನೀರಿನ ಕೊರತೆಯಾದರೆ, ಇನ್ನೊಂದೆಡೆ ರೋಗ ಬಾಧೆಯು ರೈತರನ್ನು ಕಾಡುತ್ತಿರುತ್ತವೆ. ಈ ಮಧ್ಯೆಯೂ ರೈತರು ಮಾರುಕಟ್ಟೆಯಲ್ಲಿ ದರ ಏರಿಳಿತದಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಬಹದ್ದೂರಬಂಡಿ ಗ್ರಾಮದ ರೈತ ಪಾಯಣ್ಣ ಒಂದು ಎಕರೆಯಲ್ಲಿ ಗಲಾಟೆ ಹೂವಿನ ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಹೂವಿಗೆ ಉತ್ತಮ ಬೆಲೆ ಸಿಗದೇ ಕಂಗಾಲಾಗಿದ್ದಾರೆ.
ಮಾರುಕಟ್ಟೆಯಲ್ಲಿ ಹೂವಿಗೆ ಕೆಜಿಗೆ 20 ರೂ. ಮಾತ್ರ ಇದೆ. ಈ ದರಕ್ಕೆ ಮಾರಾಟ ಮಾಡಿದರೆ ಹೂವು ಕಟಾವು ಮಾಡಿದ ಕೂಲಿಯು ಕೊಡಲು ಕಷ್ಟವಾಗುತ್ತಿದೆ. ಪಾಯಣ್ಣ ಅವರು 40 ಸಾವಿರ ರೂ. ವ್ಯಯಿಸಿದ್ದು ಹೂ ಕಟಾವು ಮಾಡಿದಷ್ಟು ಸಹ ಆದಾಯ ಬರುತ್ತಿಲ್ಲ. ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಸಭೆ, ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಗಲಾಟೆ ಹೂವಿನದರ ಕುಸಿತವಾಗಿದೆ. ಇದರಿಂದಾಗಿ ನಾವು ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.
ಇದು ಕೇವಲ ಹೂವಿನ ರೈತನದ್ದಷ್ಟೆ ಸಮಸ್ಯೆಯಲ್ಲ. ಟೊಮ್ಯಾಟೊ, ಬಾಳೆ ಸೇರಿದಂತೆ ಹಲವು ತರಕಾರಿ ಬೆಳೆಗಳ ಬೆಲೆಯೂ ಕುಸಿತ ಕಂಡಿದೆ. ಈಗ ಕೋವಿಡ್ ಆರ್ಭಟಕ್ಕೆ ಸಭೆ, ಸಮಾರಂಭಗಳಿಗೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಹೂವುಗಳ ಮಾರಾಟ ಸಂಪೂರ್ಣ ನೆಲಕಚ್ಚಿ ರೈತ ಸಂಕಷ್ಟ ಎದುರಿಸುತ್ತಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ