ಭರದಿಂದ ಸಾಗಿದೆ ಹಿರೇಹಳ್ಳ ಅಭಿವೃದ್ಧಿ 

ನೀರಾವರಿ-ಕೃಷಿ ತಜ್ಞರು ಹಳ್ಳಕ್ಕೆ ಭೇಟಿಮುಂದುವರಿದ ದೇಣಿಗೆ, ಪ್ರಸಾದ ಸೇವೆ

Team Udayavani, Mar 25, 2019, 5:21 PM IST

Udayavani Kannada Newspaper

 

ಕೊಪ್ಪಳ: ತಾಲೂಕಿನ ಹಿರೇಹಳ್ಳದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಹಳ್ಳದ ಕಾರ್ಯ ವೀಕ್ಷಣೆಗೆ ಅಧಿಕಾರಿಗಳ ತಂಡ, ನೀರಾವರಿ ಸೇರಿದಂತೆ ಕೃಷಿ ತಜ್ಞರು ಆಗಮಿಸಿ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಸಲಹೆ, ಸೂಚನೆ ನೀಡುತ್ತಿದ್ದಾರೆ.
ಹಳ್ಳದ ಸ್ವಚ್ಛತಾ ಕಾರ್ಯದ ಪ್ರಗತಿ ವೀಕ್ಷಣೆಗೆ ಶಿರಸಿಯ ಪರಿಸರ ತಜ್ಞ ಶಿವಾನಂದ ಕಳವೆ ಭೇಟಿ ನೀಡಿ ಪುನಶ್ಚೇತನ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಗವಿಮಠದ ಶ್ರೀಗಳು ಕೈಗೊಂಡಿರುವ ಬಹುಪಯೋಗಿ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರೇಹಳ್ಳದಲ್ಲಿ ಕಂಡು ಬರುವ ವಿವಿಧ ಜಾತಿಯ ಸಸ್ಯಗಳ ಕುರಿತಂತೆ ಪರೀಶಿಲನೆ ನಡೆಸಿದರು. ಇವರೊಟ್ಟಿಗೆ ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ| ಎಂ.ಬಿ.
ಪಾಟೀಲ್‌ ಅವರು ಭೇಟಿ ನೀಡಿ ಹಲವು ಮಾಹಿತಿ ಪಡೆದರು. ಹಿರೇಹಳ್ಳ ಕಾಮಗಾರಿ ನಡೆಯುವ ಡಂಬ್ರಳ್ಳಿ, ದದೇಗಲ್‌, ಓಜಿನಹಳ್ಳಿ, ಹಿರೇಸಿಂಧೋಗಿ, ಮಾದಿನೂರ, ಭಾಗ್ಯನಗರ ಎಲ್ಲ ಸ್ಥಳಗಳಿಗೆ ಭೇಟಿದರು. ಶನಿವಾರ ಡಂಬ್ರಳ್ಳಿ, ದದೇಗಲ್‌, ಓಜಿನಹಳ್ಳಿ, ಹಿರೇಸಿಂಧೋಗಿ, ಮಾದಿನೂರ, ಭಾಗ್ಯನಗರ ಮತ್ತು ಓಜನಳ್ಳಿ ಬಳಿಯ ಹಳ್ಳದ ಕಡೆ 22 ಹಿಟ್ಯಾಚಿ, 9 ಡೋಜರ್‌ ಸೇರಿದಂತೆ ಒಟ್ಟು 31 ಯಂತ್ರಗಳನ್ನು ಬಳಸಿ ಹಿರೇಹಳ್ಳ ಪುನಶ್ಚೇತಗೊಳಿಸುವ ಕಾರ್ಯ ಜರುಗಿತು.
ನೆರವಿನ ಮಹಾಪೂರ: ಗವಿಮಠದ ಶ್ರೀಗಳು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನಾ ಕಾರ್ಯಕ್ಕೆ ಹುಲಗಿಯ ಸರಕಾರಿ ಹಿರಿಯ ಪ್ರಾಥಮಿಕ (ಎಂ.ಎಚ್‌ .ಪಿ.ಎಸ್‌) ಶಾಲೆ ಹಾಗೂ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಅಂಬೇಡ್ಕರ್‌ ನಗರ ಶಾಲೆಯ ವತಿಯಿಂದ 6,301 ರೂ. ದೇಣಿಗೆ ರೂಪದಲ್ಲಿ ಅರ್ಪಿಸಿದ್ದಾರೆ.
ಸೇವಾ ಕೈಂಕರ್ಯ: ಭಾಗ್ಯನಗರದ ಇನ್ನರ್‌ವೀಲ್‌ ಕ್ಲಬ್‌ ಸದಸ್ಯೆಯರು ಭಾಗ್ಯನಗರದ ಪ್ರದೇಶದಲ್ಲಿ ನಡೆಯುತ್ತಿರುವ ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ಕೆಲಸ ನಿರ್ವಹಿಸಿದವರಿಗೆ ಶನಿವಾರ ಪ್ರಸಾದ ವ್ಯವಸ್ಥೆ ಮಾಡಿದ್ದರು. ಕೊಪ್ಪಳ ಜಿಲ್ಲಾ ವಿಕಲಚೇತನ ಸಂಘದ ವತಿಯಿಂದ ಓಜಿನಹಳ್ಳಿ ಹಾಗೂ ಭಾಗ್ಯನಗರದ ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದ ವಾಹನ ಚಾಲಕರಿಗೆ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಅಳಿಲು ಸೇವೆ ಅರ್ಪಿಸಿದ್ದಾರೆ. ವಿಕಲಚೇತನ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಜಿಲ್ಲಾಧಕ್ಷ ಅಂದಪ್ಪ ಬೋಳರಡ್ಡಿ, ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹೊಳಿ, ತಾಲೂಕು ಅಧ್ಯಕ್ಷರಾದ ಅಂದಪ್ಪ ಇಡ್ಲಿ, ತಾಲೂಕು ಕಾರ್ಯದರ್ಶಿ ಗಂಗಪ್ಪ ಅಂಬಿಗೇರ ಪಾಲ್ಗೊಂಡಿದ್ದರು.
ಎಸ್‌ಐಒ ಕಾರ್ಯಕರ್ತರು ಭಾಗಿ: ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಆರ್ಗನೈಜೇಶನ್‌ ಸಂಘಟನೆಯ ಸುಮಾರು 45 ಕಾರ್ಯರ್ತರು ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ಭಾಗವಹಿಸಿ ಒಂದು ದಿನ ಶ್ರಮದಾನ ಮಾಡಿದರು. ಈ ವೇಳೆ ಎಸ್‌ಐಒ ರಾಜ್ಯ ಕಾರ್ಯದರ್ಶಿ ಜೀಶಾನ್‌ ಆಖೀಲ್‌, ಜಿಲ್ಲಾಧ್ಯಕ್ಷ ಮುಸ್ತಫಾ, ಜಿಲ್ಲಾ ಕಾರ್ಯದರ್ಶಿ ಝಕಾರಿಯ, ಸಾಲಿಡಾರಿಟಿ ಯೂಥ್‌ ಮೂಮೆಂಟ್‌ ಅಧ್ಯಕ್ಷ ಗೌಸ್‌ ಪಟೇಲ್‌ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.