ಕುಷ್ಟಗಿ:ಮಳೆಯಿಂದ ಕಬ್ಬರಗಿ- ಕಾಟಾಪೂರ ರಸ್ತೆ ಜಲಾವೃತ; ಸಂಚಾರ ಅಸ್ತವ್ಯಸ್ತ
Team Udayavani, Oct 10, 2022, 10:09 PM IST
ಕುಷ್ಟಗಿ:ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದ ಹಳ್ಳದ ಪ್ರವಾಹಕ್ಕೆ ತಾಲೂಕಿನ ಕಬ್ಬರಗಿ- ಕಾಟಾಪೂರ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿದುಕೊಂಡು ಕೆಲವು ತಾಸು ಸಂಚಾರ ಅಸ್ತವ್ಯಸ್ತಕ್ಕೆ ಕಾರಣವಾದ ಪ್ರಸಂಗ ನಡೆದಿದೆ.
ಸೋಮವಾರ ಮದ್ಯಾಹ್ನ ಕಬ್ಬರಗಿ, ಕಾಟಾಪೂರ ಮೊದಲಾದ ಗ್ರಾಮಗಳಲ್ಲಿ ವ್ಯಾಪಕ ಮಳೆಯಾಗಿದೆ. ಈ ಮಳೆಯಿಂದ ಕಾಟಾಪೂರ-ಕಬ್ವರಗಿ ರಸ್ತೆಯ ಮದ್ಯೆ ಹರಿಯುವ ಮದ್ಯೆ ಜಾತಿಗ್ಯಾನ್ ಹಳ್ಳ ಪ್ರವಾಹ ಹಿನ್ನೆಲೆಯಲ್ಲಿ ಕೆಲವು ತಾಸು ರಸ್ತೆ ಸಂಪರ್ಕ ಕಡಿದುಕೊಂಡಿದ್ದರಿಂದ ಹಳ್ಳದ ಪ್ರವಾಹ ಇಳಿಯುವರೆಗೂ ಕಾಯಬೇಕಾಯಿತು.
ಈ ರಸ್ತೆಯಲ್ಲಿ ಸದರಿ ಹಳ್ಳಕ್ಕೆ ಸೇತುವೆ ನಿರ್ಮಿಸುವುದು ಬಹು ದಿನದ ಬೇಡಿಕೆಯಾಗಿದ್ದರೂ ಜನಪ್ರತಿನಿಧಿಗಳು ಸ್ಪಂಧಿಸಿಲ್ಲ. ಜಾತಿಗ್ಯಾನ್ ಹಳ್ಳಕ್ಕೆ ಪೂಲು (ಪೈಪ್ ಕಲ್ವರ್ಟ ) ನಿರ್ಮಿಸಲು ಮುಂದಾಗಿದ್ದು ಇದಕ್ಕಾಗಿ ತಗ್ಗು ಅಗೆದು ಕೆಲ ದಿನಗಳ ಮಟ್ಟಿಗೆ ಒಂದೆರೆಡು ಪೈಪ್ ಗಳನ್ನು ಹಾಕಲಾಗಿತ್ತು. ನಂತರ ಹಾಕಿದ ಪೈಪ್ ಗಳನ್ನು ಕಿತ್ತಿಕೊಂಡು ಹೋಗಿದ್ದರಿಂದ ಹಳ್ಳ ತುಂಬಿ ಬಂದಾಗ ದಾಟಲಾರದಷ್ಟು ಸಮಸ್ಯೆಯಾಗಿದೆ ಎನ್ನುತ್ತಾರೆ ಗ್ರಾಮದ ಮಂಜುನಾಥ ತಳವಾರ.
ಈ ಹಳ್ಳ ಕಬ್ಬರಗಿ ಹೈಸ್ಕೂಲ್ ಪಕ್ಕದಲ್ಲಿ ಹರಿದು ಹೋಗುತ್ತದೆ. ಸದರಿ ಹಳ್ಳಕ್ಕೆ ಮೂರು ಮೊಳದ ಹಿಟ್ಟಿನ ಬಂಡಿ (ಕಲ್ಲು ಪರ್ಸಿ) ಹೊಂದಿಸಿದ್ದಾಗ ಯಾವ ಸಮಸ್ಯೆ ಆಗಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಪೂಲು ನಿರ್ಮಿಸಲು ಮುಂದಾಗಿ ಹಳ್ಳದ ದಾರಿ ಹದಗೆಡಿಸಿದ್ದಾರೆ. ಆಗ ಹಳ್ಳ ಕಟ್ಟಿದರು ಪ್ರವಾಹ ಇಳಿದ ನಂತರ ರಸ್ತೆ ಸಂಪರ್ಕ ಸಲೀಸಾಗುತ್ತಿತ್ತು. ಈಗ ಮಳೆ ಬಂದರೆ ಸಾಕು ಹಳ್ಳ ಕಟ್ಟುತ್ತಿದ್ದು ಸಂಪರ್ಕ ಕಡಿದುಕೊಳ್ಳುತ್ತಿದ್ದು ಸಮಸ್ಯೆಗೆ ಕಾರಣವಾಗಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ ಆವಿನ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ