ಕುಷ್ಟಗಿ: ಬಿಡಾಡಿ ದನಕ್ಕೆ ಚರ್ಮಗಂಟು ರೋಗ; ಇತರ ಜಾನುವಾರುಗಳಿಗೂ ಹರಡುವ ಭೀತಿ
Team Udayavani, Dec 19, 2022, 9:12 AM IST
ಕುಷ್ಟಗಿ: ಪಟ್ಟಣದ ಬಿಡಾಡಿ ದನಕ್ಕೆ ಚರ್ಮಗಂಟು ರೋಗ (ಲಂಪಿಸ್ಕಿನ್) ಅಂಟಿದ್ದು, ಸಕಾಲಿಕ ಚಿಕಿತ್ಸೆ ಇಲ್ಲದೇ ಬೀದಿಯಲ್ಲಿ ತಿರುಗಾಡುತ್ತಿದ್ದು, ಇದರಿಂದ ಇತರೇ ಜಾನುವಾರುಗಳಿಗೆ ಹರಡುವ ಭೀತಿ ಸಾರ್ವಜನಿಕವಾಗಿ ವ್ಯಕ್ತವಾಗಿದೆ.
ಬಿಡಾಡಿ ಹಸುವಿಗೆ ಚರ್ಮಗಂಟು ರೋಗ ವ್ಯಾಪಿಸಿದೆ. ಹಸುವಿನ ಚರ್ಮದ ಮೇಲೆ ಗುಳ್ಳೆ ಒಡೆದು ರಕ್ತ ಕೀವು ಸೋರುತ್ತಿದ್ದು, ನರಕಯಾತನೆ ಅನುಭವಿಸುತ್ತಿದೆ. ರೋಗ ಪೀಡಿತ ಈ ಹಸು ಒಂದೆಡೆ ನಿಲ್ಲದೇ ಅಲೆದಾಡುತ್ತಿದೆ. ಈ ಹಸುವಿನಿಂದ ಬೇರೆ ಜಾನುವಾರುಗಳಿಗೆ ಈ ಸಾಂಕ್ರಮಿಕ ರೋಗ ಹಬ್ಬುವ ಭೀತಿಯಾಗಿದೆ.
ಸಾಕು ಜಾನುವಾರು ಆಗಿದ್ದಲ್ಲಿ ರೈತರು ಚಿಕಿತ್ಸೆಗೆ ಮುಂದಾಗುತ್ತಿದ್ದರೂ ಆದರೆ ಈ ಜಾನುವಾರುಗಳಿಗೆ ಪಶು ಇಲಾಖೆಯೇ ಚಿಕಿತ್ಸೆಗೆ ಮುಂದಾಗಬೇಕಿದೆ. ಕುಷ್ಟಗಿಯ ಪಶು ವೈದ್ಯ ಡಾ. ಸಂತೋಷ ಅವರ ಗಮನಕ್ಕೆ ತಂದಾಗ ಸ್ಪಂದಿಸಿದ ಅವರು, ಸದ್ಯ ಹನುಮನಾಳ ಭಾಗದಲ್ಲಿ ಜಾನುವಾರುಗಳ ಚಿಕಿತ್ಸೆಗೆ ಹೋಗಿದ್ದು, ರೋಗ ಬಾಧೆ ಹಸುವಿಗೆ ಮಧ್ಯಾಹ್ನದ ವೇಳೆಗೆ ಆಗಮಿಸಿ ಸೂಕ್ತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ