ಕುಷ್ಟಗಿ: ಮಕ್ಕಳ ಕಳ್ಳರು ಎಂಬ ಶಂಕೆ; ಪಾನಮತ್ತರು ಪೊಲೀಸರ ವಶಕ್ಕೆ
Team Udayavani, Sep 24, 2022, 10:03 PM IST
ಕುಷ್ಟಗಿ: ಪಾನಮತ್ತರಾಗಿ ಅನುಮಾನಸ್ಪದವಾಗಿ ತಿರುಗಾಡುತ್ತ ಮನೆಯೊಂದರಲ್ಲಿ ಕುಡಿಯಲು ನೀರು ಕೇಳಿದ ಇಬ್ಬರು ವ್ಯಕ್ತಿಗಳನ್ನು ಮಕ್ಕಳ ಕಳ್ಳರು ಎಂದು ಶಂಕಿಸಿ, ಪೊಲೀಸರು ವಶಕ್ಕೆ ತೆಗೆದುಕೊಂಡ ಪ್ರಕರಣ ಕುಷ್ಟಗಿ ಪಟ್ಟಣದ ವಾಸವಿ ನಗರದಲ್ಲಿ ನಡೆದಿದೆ.
ಸೆ. 24 ರಂದು ಸಂಜೆ ಇಬ್ಬರು ಅನುಮಾನಸ್ಪದವಾಗಿ ವರ್ತಿಸಿದ್ದಾರೆ. ತಿರುಗಾಡುವ ಸಂದರ್ಭದಲ್ಲಿ ಒಬ್ಬ ಮದ್ಯಪಾನ ಮಾಡಿ ಅಲ್ಲಿಯ ಒಂದು ಮನೆಗೆ ಹೋಗಿ ಕುಡಿಯುಲು ನೀರು ಕೇಳಿದ್ದ. ಕುಡಿದ ಅಮಲಿನಲ್ಲಿ ಅನುಮಾಸ್ಪದ ರೀತಿಯಾಗಿ ವರ್ತಿಸಿದ್ದರಿಂದ ಸಾರ್ವಜನಿಕರು ಇಬ್ಬರನ್ನು ಹಿಡಿದು ಮಕ್ಕಳು ಕಳ್ಳರು ಎಂದು ಅನುಮಾನಗೊಂಡಿದ್ದರು. ಕೂಡಲೇ ಸ್ಥಳೀಯ ಠಾಣೆಗೆ ದೂರು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವ್ಯಕ್ತಿಗಳನ್ನು ಕೂಲಂಕಷವಾಗಿ ವಿಚಾರಣೆಯಲ್ಲಿ ಚಿತ್ತಾಪುರದ ಸುದರ್ಶನ (ಅಬ್ರಾಹಂ) ಇನ್ನೊಬ್ಬ ಗದಗ ದ ವಿಕ್ಕಿ ಎಂದು ತಿಳಿದು ಬಂದಿದೆ.
ಅನುಮಾಸ್ಪದ ರೀತಿಯಲ್ಲಿ ನೀರು ಹೇಳಿದ ಇಬ್ಬರು ವ್ಯಕ್ತಿಗಳು ಮಕ್ಕಳ ಕಳ್ಳತನ ಮಾಡಲು ಬಂದಿರುವುದಿಲ್ಲ ಎಂದು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ತಿಳಿದು ಬಂದಿರುತ್ತದೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ