ಕುಷ್ಟಗಿ: ದುರ್ಗಾದೇವಿ ದೇವಸ್ಥಾನದ ಬೀಗ ಮುರಿದು 91 ಸಾವಿರ ಮೌಲ್ಯದ ಚಿನ್ನಾಭರಣ ಕಳವು
Team Udayavani, Dec 20, 2022, 9:51 PM IST
ಕುಷ್ಟಗಿ: ತಾಲೂಕಿನ ಕಳಮಳ್ಳಿ ತಾಂಡದ ಶ್ರೀ ದುರ್ಗಾದೇವಿ ದೇವಸ್ಥಾನದ ಬೀಗ ಮುರಿದು ಅಂದಾಜು 91 ಸಾವಿರ ರೂ. ಮೌಲ್ಯದ ಆಭರಣ ಕಳುವು ಮಾಡಿರುವ ಘಟನೆ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಬೆಳಗಿನ ಜಾವ (ಡಿ.20) ರಂದು ದೇವಸ್ಥಾನದ ಬಾಗಿಲು ಮುರಿದು, ದೇವಸ್ಥಾನದಲ್ಲಿದ್ದ ಆಭರಣ ದೋಚಿದ್ದಾರೆ. 43 ತೊಲೆಯ ದೇವಿ ಮೂರ್ತಿ, 25 ತೊಲೆಯ ಖಡ್ಗ, 30 ತೊಲೆಯ 1 ಡಾಬಾ, 21 ತೊಲೆಯ 1 ಛತ್ರಿ, ಅರ್ಧ ತೊಲೆ 4 ಬಂಗಾರದ ತಾಳಿ, ಅರ್ಧ ತೊಲೆ 2 ಮೂಗುತಿ ಸೇರಿದಂತೆ 91, 400 ರೂ.ಅಂದಾಜು ಮೊತ್ತದ ಆಭರಣ ಕಳುವಾಗಿದೆ.
ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.